ಗಣೇಶ ಚತುರ್ಥಿ: ವಿಶೇಷ ರೈಲು
Team Udayavani, Jul 19, 2018, 2:48 PM IST
ಮಂಗಳೂರು/ಉಡುಪಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೇ ಮುಂಬಯಿ ಸೆಂಟ್ರಲ್/ ಬಾಂದ್ರಾ/ ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು ಓಡಿಸಲಿದೆ. ರೈಲು ಸಂಖ್ಯೆ 09001 ಮುಂಬಯಿ ಸೆಂಟ್ರಲ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಸೆ. 12 ಮತ್ತು 19ರಂದು ಮುಂಬಯಿ ಸೆಂಟ್ರಲ್ನಿಂದ ರಾತ್ರಿ 11.50ಕ್ಕೆ ಹೊರಟು ಮರುದಿನ ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ಸಂಖ್ಯೆ 09002 ಮಂಗಳೂರು ಜಂಕ್ಷನ್-ಮುಂಬಯಿ ಸೆಂಟ್ರಲ್ ವಿಶೇಷ ರೈಲು ಸೆ. 13 ಮತ್ತು 20ರಂದು ಮಂಗಳೂರು ಜಂಕ್ಷನ್ನಿಂದ ರಾತ್ರಿ 11.10ಕ್ಕೆ ಹೊರಟು ಮರುದಿನ ರಾತ್ರಿ 7 ಗಂಟೆಗೆ ಮುಂಬಯಿ ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ 09009 ಬಾಂದ್ರಾ- ಮಂಗಳೂರು ಜಂಕ್ಷನ್ ವಿಶೇಷ ರೈಲು ಸೆ. 11 ಮತ್ತು 18ರಂದು ಬಾಂದ್ರಾದಿಂದ ರಾತ್ರಿ 11.55ಕ್ಕೆ ಹೊರಟು ಮರುದಿನ ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ಸಂಖ್ಯೆ 09010 ಮಂಗಳೂರು ಜಂಕ್ಷನ್-ಬಾಂದ್ರಾ ವಿಶೇಷ ರೈಲು ಸೆ. 12 ಮತ್ತು 19ರಂದು ರಾತ್ರಿ 11.10ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು ಮರುದಿನ ರಾತ್ರಿ 6.45ಕ್ಕೆ ಬಾಂದ್ರಾ ತಲುಪಲಿದೆ.
ರೈಲು ಸಂಖ್ಯೆ 09011 ಬಾಂದ್ರಾ- ಮಂಗಳೂರು ಜಂಕ್ಷನ್ ಹವಾನಿಯಂತ್ರಿತ ವಿಶೇಷ ರೈಲು ಸೆ. 9, 16 ಮತ್ತು 23ರಂದು ರಾತ್ರಿ 11.55ಕ್ಕೆ ಬಾಂದ್ರಾದಿಂದ ಹೊರಟು ಮರುದಿನ ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ 09012 ಮಂಗಳೂರು ಜಂಕ್ಷನ್-ಬಾಂದ್ರಾ ಹವಾ ನಿಯಂತ್ರಿತ ವಿಶೇಷ ರೈಲು ಸೆ. 10, 17 ಮತ್ತು 24ರಂದು ಮಂಗಳೂರು ಜಂಕ್ಷನ್ನಿಂದ ರಾತ್ರಿ 11.10ಕ್ಕೆ ಹೊರಟು ಮರುದಿನ ರಾತ್ರಿ 6.45ಕ್ಕೆ ಬಾಂದ್ರಾ ತಲುಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ