ವಾಹನಕ್ಕೆ ಸೈಡ್ ಕೊಡುವಾಗ ನದಿಗೆ ಬಿದ್ದು ವಿದ್ಯಾರ್ಥಿ ನೀರುಪಾಲು
Team Udayavani, Aug 3, 2018, 4:35 PM IST
ಗೋಕಾಕ್ : ತಾಲೂಕಿನ ಸುನದೋಳಿ ಗ್ರಾಮದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿರುವ ತಡೆಗೋಡೆ ಇಲ್ಲದ ಸೇತುವೆಯಲ್ಲಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಬಿಟ್ಟು ಕೊಡುವ ವೇಳೆ ಸೈಕಲ್ನಲ್ಲಿದ್ದ 8 ನೇ ತರಗತಿ ವಿದ್ಯಾರ್ಥಿ ಆಯ ತಪ್ಪಿ ನದಿಗೆ ಬಿದ್ದು ನೀರುಪಾಲಾದ ದಾರುಣ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ನೀರುಪಾಲಾದ ಬಾಲಕ ಬಸವರಾಜ್ ಎಂದು ತಿಳಿದು ಬಂದಿದೆ. ನದಿಗೆ ಬಿದ್ದುದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಬಾಲಕನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.