ಧಾರ್ಮಿಕ ಚಿಂತನೆಯಿಂದ ಮಾನಸಿಕ ನೆಮ್ಮದಿ ಸಾಧ್ಯ: ಪತ್ತಾರ


Team Udayavani, Aug 4, 2018, 12:19 PM IST

vij-3.jpg

ತಾಳಿಕೋಟೆ : ಚೈತನ್ಯ ಶಕ್ತಿ ಎಂಬುದು ಗುರುವಿನಲ್ಲಿರುತ್ತದೆ. ಅದಕ್ಕಾಗಿಯೇ ಹರ ಮುನಿದರೂ ಗುರು ಕಾಯುವನು ಎಂಬುದು ಮಹಾಶರಣರ ಮಾತಾಗಿದೆ ಎಂದು ಪ್ರತಿಭಾಲೋಕ ಕರಿಯರ ಅಕಾಡೆಮಿ ಸಂಸ್ಥಾಪಕ ಶ್ರೀಕಾಂತ ಪತ್ತಾರ ಹೇಳಿದರು.

ಸ್ಥಳೀಯ ಶಿರಡಿ ಸಾಯಿ ಸೇವಾ ಟ್ರಸ್ಟ್‌ ವತಿಯಿಂದ ಗುರುಪೂರ್ಣಿಮೆ ಕುರಿತು ನಿಮಿಷಾಂಭಾ ದೇವಿ ಮಂದಿರದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಭಕ್ತಿಯಿಂದ ಗುರುಪೂರ್ಣಿಮೆ ದಿನದಂದು ಸಾಯಿಬಾಬಾ ಅವರ ಸ್ಮರಣೆ ಮಾಡುತ್ತಿರುವದು ಭಗವಂತನ ಪ್ರೀತಿಗೆ ಪಾತ್ರರಾಗುವಂತಹದ್ದಾಗಿದೆ. ಇದು ಭಾರತೀಯ ನಾಗರಿಕತೆ ಎಂಬುದು ಮೆಚ್ಚುವಂತಹದ್ದಾಗಿದೆ ಎಂದರು. 

ಜಗತ್ತಿಗೆ ಭಾರತ ದೇಶ ಸಂತರ ನಾಡೆಂದು ಕರೆಸಿಕೊಳ್ಳಲಾಗುತ್ತಿದೆ. ಹೊರ ದೇಶದವರು ವಿಜ್ಞಾನಿಗಳಾದರೂ ಅಂತರಂಗದ ಶೋಧನೆ ಮಾಡಿದ ಸ್ವಾಮಿ ವಿವೇಕಾನಂದರು ಗುರು ರಾಮಕೃಷ್ಣ ಪರಮಹಂಸ ಅವರಿಂದ ಭಗವಂತನನ್ನು ಕಾಣಲು ಮುಂದಾಗಿ ಗುರುವಿನ ಶಕ್ತಿ ಎಂತಹದೆಂಬುದು ತಿಳಿದುಕೊಂಡರೆಂದರು.

ಭಾರತದ ಆತ್ಮ ಎಂದರೆ ಅಧ್ಯಾತ್ಮ ಎನ್ನುವದಾಗಿದೆ. ಧಾರ್ಮಿಕ ಭಜನೆ, ಚಿಂತನೆ, ಆರಾಧನೆ ಮಾಡುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಮಹಾಭಾರತದ ಇತಿಹಾಸ, ಛತ್ರಪತಿ ಶಿವಾಜಿ ಮಹಾರಾಜರಿಗೆ ದೊರೆತ ಗುರು ರಾಮದಾಸ ಮಹಾರಾಜರ ಶಿಕ್ಷಣ ಕುರಿತು ವಿವರಿಸಿದರಲ್ಲದೇ ಭಕ್ತ ಕನಕದಾಸರು ತಿಳಿಸಿದಂತೆ ನನ್ನೊಳಗೆ ನಾನು ಇರುವ ಅಹಂಕಾರವನ್ನು ಸಾಧಿಸಬೇಕೆಂದ ಅವರು ಸತ್ಯ ಸಾಯಿಬಾಬಾರವರು ಸತ್ಯವಂತರಿಗೆ ಒಲಿಯುತ್ತಾ ಅವರ ಬೇಕು ಬೇಡಿಕೆಗಳನ್ನು ಈಡೇರಿಸುತ್ತಾ ಸಾಗಿದ ಸಾಯಿಬಾಬಾರವರ ಮಹಿಮೆ ಅವರ ಪವಾಡಗಳ ಕುರಿತು ವಿವರಿಸಿದರು.

ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಮಾತನಾಡಿ, ಸಾಯಿಬಾಬಾರವರ ಭಕ್ತರು ಕೇವಲ ಭಾರತದೇಶದಲ್ಲಿ ಅಷ್ಟೇ ಅಲ್ಲಾ ಸುಮಾರು 30ಕ್ಕೂ ಹೆಚ್ಚು ಹೊರದೇಶದಲ್ಲಿಯೂ ಇದ್ದಾರೆ. ಸಾಯಿಬಾಬಾರವರ ಮಹಿಮೆ ಅಪಾರವಾಗಿದ್ದು
ಅವರು ಭಕ್ತಿಯಿಂದ ಭಜಿಸಿದವರಿಗೆ ಬಹಳೇನು ದೂರವಿಲ್ಲವೆಂದರು.

ಶಿರಡಿ ಸಾಯಿ ಸೇವಾ ಟ್ರಸ್ಟ್‌ ಗೌರವಾಧ್ಯಕ್ಷ ಡಾ| ಎನ್‌.ಎಲ್‌. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೇವಾ ಟ್ರಸ್ಟ್‌ ಅಧ್ಯಕ್ಷ ಸುರೇಶ ಸಾಲಂಕಿ, ಉಪಾಧ್ಯಕ್ಷ ಎಂ.ಜಿ. ಪಾಟೀಲ, ನಿರ್ದೇಶಕರಾದ ಜಿ.ಜಿ. ಕಾದಳ್ಳಿ, ಸಿ.ಬಿ. ತಿಳಗೂಳ, ಕಾಶೀನಾಥ ಪಾಟೀಲ, ಬಸನಗೌಡ ಮದರಕಲ್ಲ, ಸತೀಶ ದಪೆ¤ದಾರ, ಕಾಶೀನಾಥ ಸಜ್ಜನ, ಹಿರಿಯರಾದ ಶಂಕ್ರಪ್ಪಣ್ಣ ಸೋನಾರ, ಪ್ರೇಂಡ್ಸ್‌ ಕ್ಲಬ್‌ ಅಧ್ಯಕ್ಷ ಶಿವಾನಂದ ಹೂಗಾರ, ಅಣ್ಣಪ್ಪ ಜಗತಾಪ, ಬಿ.ಎಸ್‌. ಇಸಾಂಪುರ, ಉಪನ್ಯಾಸಕ ಪಿ.ವೈ. ಮಾರಲಭಾವಿ, ಸಂಗನಗೌಡ ಅಸ್ಕಿ(ಹಿರೂರ), ಈರಣ್ಣ ಕ್ವಾಟಿ, ಎಂ.ಎಸ್‌.ಸರಶೆಟ್ಟಿ, ಸಿ.ಎಂ.ದಾಯಪುಲೆ, ಗೀತಾ ಬಳಗಾನೂರ, ಜಯಶ್ರೀ ಸಜ್ಜನ, ಮಹಾನಂದ ತಿಳಗೂಳ, ಸವಿತಾ ವಾಲಿ, ಮೀನಾಕ್ಷಿ ಮೆಣಸಿನಕಾಯಿ, ರೇಣುಕಾ ಕಾಜೋಳ, ಪ್ರಭಾ ಕತ್ತಿ, ಸುಲೋಚನಾ ಶೆಟ್ಟಿ, ಸ್ನೇಹಾ ತಿಳಗೂಳ ಇದ್ದರು.

ಕಾರ್ಯಕ್ರಮದ ಮೊದಲಿಗೆ ಸಾಯಿಬಾಬಾರ ಭಾವಚಿತ್ರಕ್ಕೆ ಮಾಲಾರ್ಪಣೆ ಮಹಾಪೂಜೆ ಜರುಗಿತಲ್ಲದೇ ಭಕ್ತಿಭಾವದೊಂದಿಗೆ ಮಹಾಭಜನಾ ಕಾರ್ಯಕ್ರಮ ನಡೆಯಿತು.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.