ಚಿನ್ನದ ಅದಿರು ಸಂಸ್ಕರಣೆಗೆ ಅಡ್ಡಿ


Team Udayavani, Aug 23, 2018, 6:10 AM IST

gold-mine-company.jpg

ಹಟ್ಟಿ ಚಿನ್ನದ ಗಣಿ: ಚಿನ್ನದ ಗಣಿ ಕಂಪನಿಯಲ್ಲಿ ಅದಿರು ಸಂಸ್ಕರಿಸಿ ಚಿನ್ನ ಉತ್ಪಾದಿಸುವ ಸಾಗ್‌ ಆ್ಯಂಡ್‌ ಬಾಲ್‌ ಮಿಲ್‌ನ ಪ್ರಮುಖ ಸಲಕರಣೆಗಳಾದ ಲೈನರ್‌ಗಳು ವಿಫಲವಾಗುತ್ತಿರುವುದರಿಂದ ವಾರದಿಂದ ಅದಿರು ಸಂಸ್ಕರಣೆ ಪದೇ ಪದೆ ಸ್ಥಗಿತಗೊಳ್ಳುತ್ತಿದೆ.

ಭೂ ಕೆಳಮೈಯಿಂದ ಚಿನ್ನದ ಅದಿರು ಹೊರತಂದರೂ ಅದನ್ನು ಮಿಲ್‌ನಲ್ಲಿ ಸಂಸ್ಕರಿಸಿದಾಗ ಮಾತ್ರ ಚಿನ್ನ ಉತ್ಪಾದನೆಯಾಗುತ್ತದೆ. ಅದಿರು ಸಂಸ್ಕರಣೆಗಾಗಿ ದಶಕದ ಹಿಂದೆ ಗಣಿ ಆಡಳಿತ ವರ್ಗ 68 ಕೋಟಿ ರೂ. ವೆಚ್ಚದಲ್ಲಿ ಸಾಗ್‌ ಆ್ಯಂಡ್‌ ಬಾಲ್‌ ಮಿಲ್‌ ನಿರ್ಮಿಸಿದೆ. ಪ್ರತಿ ಗಂಟೆಗೆ 100 ಟನ್‌ ಅದಿರು ಸಂಸ್ಕರಿಸುವ ಸಾಮರ್ಥ್ಯದ ಮಿಲ್‌ 24 ಗಂಟೆ ಕಾರ್ಯ ನಿರ್ವ ಹಿಸುತ್ತದೆ. ಕಾಲಕಾಲಕ್ಕೆ ಕೆಲವು ಸಲಕರಣೆ ಬದಲಾಯಿಸುವುದು ಸಹಜ. ಹೀಗೆ ಸಲಕರಣೆ ಗಳನ್ನು ಬದಲಾಯಿಸುವಾಗ ಹೊಸದಾಗಿ ತಂದಿರುವ ಸಲಕರಣೆಗಳು ಕಳಪೆ ಮಟ್ಟದ್ದಾಗಿವೆ ಎಂಬ ದೂರುಗಳು ಕಾರ್ಮಿಕರಿಂದ ಕೇಳಿ ಬಂದಿವೆ.

ಸಾಗ್‌ ಆ್ಯಂಡ್‌ ಬಾಲ್‌ ಮಿಲ್‌ ಕಾರ್ಯನಿರ್ವಹಿಸಲು ಲೈನರ್‌ಗಳು ಅಗತ್ಯ. ಅವುಗಳು ಸವೆದಾಗ ಬದಲಾಯಿಸುವುದು ಸಾಮಾನ್ಯ. ಒಂದು ಬಾರಿ ಅಳವಡಿಸಿದಾಗ ಅವುಗಳು ಕನಿಷ್ಠ ಒಂದು ವರ್ಷದವರೆಗೆ ಬಾಳಿಕೆ ಬರಬೇಕು. ಆದರೆ, ಇತ್ತೀಚೆಗೆ ತರಿಸಲಾದ ಲೈನರ್‌ಗಳು ಅಳವಡಿಸಿದ ವಾರದಲ್ಲೇ ವಿಫಲವಾಗುತ್ತಿವೆ ಎನ್ನಲಾಗಿದೆ. ಕಂಪನಿ ಮೂಲಗಳ ಪ್ರಕಾರ ಆ.5ರಂದು 300 ಹೊಸ ಲೈನರ್‌ ಅಳವಡಿಸಿ ಪ್ರಾರಂಭಿಸಲಾಗಿತ್ತು. 

ಆ.17ರ ನಂತರ ಆ ಹೊಸ ಲೈನರ್‌ಗಳು ವಿಫಲಗೊಂಡು ಕಳಚಿ ಬೀಳುತ್ತಿವೆ. ಪರಿಣಾಮ ಅದಿರು ಸಂಸ್ಕರಣೆ ಸ್ಥಗಿತಗೊಳ್ಳುತ್ತಿದೆ. ಹಳೆ ಲೈನರ್‌ಗಳ ಬಳಕೆ: ಲೈನರ್‌ಗಳ ವಿಫಲತೆಯಿಂದ ಮಿಲ್‌ ಡೆಯದಂತಾಗಿದೆ. ಸವೆದಿವೆ ಎಂದು ಬಿಸಾಡಿದ್ದ ಹಳೆಯ ಲೈನರ್‌ಗಳನ್ನೇ ಮರು ಜೋಡಿಸಿ ಅದಿರು ಸಂಸ್ಕರಣೆ ಪ್ರಯತ್ನ ನಡೆಸಲಾಗಿದೆ. 

ಕಮಿಷನ್‌ ಆಸೆಗಾಗಿ ಕಳಪೆ ಮಟ್ಟದ ಲೈನರ್‌ ತರಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಸಾಗ್‌ ಆ್ಯಂಡ್‌ ಬಾಲ್‌ ಮಿಲ್‌ಗೆ ಒಂದು ಬಾರಿ ಎಲ್ಲ ವಿಭಾಗಗಳು ಸೇರಿದಂತೆ ಒಟ್ಟು 300ಕ್ಕೂ ಅಧಿಕ ಲೈನರ್‌ಗಳನ್ನು ಅಳವಡಿಸಲು ಅದರ ಖರೀದಿ,ಜೋಡಣೆ ವೆಚ್ಚ ಸೇರಿ 2 ಕೋಟಿಗೂ ಅಧಿಕ ವೆಚ್ಚ ತಗಲುತ್ತದೆ ಎನ್ನಲಾಗಿದೆ. ಕಳಪೆ ಮಟ್ಟದ ಸಲಕರಣೆ ಖರೀದಿಸಿ ಗಣಿ ಕಂಪನಿಗೆ ನಷ್ಟ ಉಂಟು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.