ದಿಬ್ಬಣದ ವಾಹನಕ್ಕೆ ಲಾರಿ ಢಿಕ್ಕಿ;6 ಬಲಿ,10 ಕ್ಕೂ ಹೆಚ್ಚು ಮಂದಿ ಗಂಭೀರ
Team Udayavani, Aug 24, 2018, 3:21 PM IST
ಅನಂತಪುರ (ಆಂಧ್ರ): ತುಮಕೂರು ಗಡಿಭಾಗದಲ್ಲಿರುವ ಪೆನಕೊಂಡ ತಾಲೂಕಿನ ಸತ್ತಾರಪಲ್ಲಿಯಲ್ಲಿ ವೈಎಸ್ಆರ್ ಕಾಂಗ್ರೆಸ್ ಮುಖಂಡ ರೊಬ್ಬರ ಪುತ್ರನ ಮದುವೆಗೆಂದು ತೆರಳುತ್ತಿದ್ದ ಬೊಲೆರೋ ಪಿಕಪ್ಗೆ ಲಾರಿ ಢಿಕ್ಕಿಯಾಗಿ 6 ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಪೆನಗೊಂಡದ ತಿಮ್ಮಾಪುರ ನಿವಾಸಿಗಳಾದ ಗೋಪಾಲ್ ರೆಡ್ಡಿ (60)ರವೀಂದ್ರ ರೆಡ್ಡಿ (40)ಕೆ.ವೆಂಕಟಸ್ವಾಮಿ (65)ವಡ್ಡಿ ಆಂಜನೆಯಲು(35) ಮತ್ತು ವೆಂಕಟಪ್ಪ (50)ಮೃತ ದುರ್ದೈವಿಗಳು.
ವೈಎಸ್ಆರ್ ನಾಯಕ ಶ್ರೀಧರ್ ನಾರಾಯಣ್ ಅವರ ಪುತ್ರನ ವಿವಾಹಕ್ಕೆಂದು ಬೊಲೆರೋ ಪಿಕಪ್ ವಾಹನದಲ್ಲಿ ಗ್ರಾಮದ ಜನರು ತೆರಳುತ್ತಿದ್ದ ವೇಳೆ ಬಾಳೆ ಹಣ್ಣು ಸಾಗಿಸುತ್ತಿದ್ದ ಲಾರಿ ಢಿಕ್ಕಿಯಾಗಿ ಅವಘಡ ಸಂಭವಿಸಿದೆ.
ಪೆನಕೊಂಡ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.