ಹಾಜಿ ಅಬ್ದುಲ್ಲಾ ಪೀಠಾರೋಹಣಕ್ಕೆ ಚುನಾವಣೆ!
Team Udayavani, Aug 30, 2018, 6:00 AM IST
ಉಡುಪಿ: ಉಡುಪಿ ನಗರಸಭೆಯಲ್ಲಿ ಐತಿಹಾಸಿಕ ಮಹತ್ವ ಇರುವ ಕುರ್ಚಿ ಒಂದಿದೆ. ಈ ಕುರ್ಚಿಯಲ್ಲಿ ಆಸೀನರಾಗುವವರ ಆಯ್ಕೆಗೆ ಈಗ ನಗರಸಭಾ ಚುನಾವಣೆ ನಡೆಯುತ್ತಿದೆ.
ಇದಕ್ಕೆ 80 ವರ್ಷಕ್ಕೂ ಹೆಚ್ಚು ವರ್ಷವಾಗಿದೆ. ಆದರೂ ನಶಿಸದಂತೆ ಕಾಪಾಡಿಕೊಂಡು ಬರಲಾಗುತ್ತಿದೆ. ಉಡುಪಿಯ ಇತಿಹಾಸದಲ್ಲಿ ಅಚ್ಚಳಿಯದ ಹೆಸರು ಹೊಂದಿದ ಹಾಜಿ ಅಬ್ದುಲ್ಲಾ ಸಾಹೇಬ್ ಅವರು ಕುಳಿತುಕೊಂಡ ಕುರ್ಚಿ ಇದು.
1935ರವರೆಗೆ ಉಡುಪಿಯಲ್ಲಿ ತಾಲೂಕು ಬೋರ್ಡ್ ಆಡಳಿತವಿತ್ತು. ಆಗ ಉಡುಪಿ ನಗರ ಮತ್ತು ಗ್ರಾಮಾಂತರ ಎರಡನ್ನೂ ತಾಲೂಕು ಬೋರ್ಡ್ ಆಡಳಿತ ನಡೆಸುತ್ತಿತ್ತು. ಆಗ ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದವರು ಹಾಜಿ ಅಬ್ದುಲ್ಲಾ ಸಾಹೇಬರು.
1-11-1935ರಂದು ಏಳು ಗ್ರಾಮಗಳನ್ನು ಹೊಂದಿದ, 3.75 ಚದರ ಮೈಲು ವಿಸ್ತೀರ್ಣದ ನಗರಸಭೆಯನ್ನು ಅಂದಿನ ಮದ್ರಾಸ್ ಸರಕಾರ ಘೋಷಿಸಿತು. ಆಗಿನ ಜನಸಂಖ್ಯೆ 17,251. ಆಗ ಸರಕಾರ 20,000 ರೂ. ಮೂಲನಿಧಿ ನೀಡಿ ಕಮಿಷನರ್ ಶ್ರೇಣಿ ಅಧಿಕಾರಿ ಎಚ್.ಎಚ್.ಶೆಮ್ನಾಡ್ ಅವರನ್ನು ವಿಶೇಷಾಧಿ ಕಾರಿಯಾಗಿ ನೇಮಿಸಿತು. 31-08-1936ರಲ್ಲಿ ಪ್ರಪ್ರಥಮ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾದವರು ಆಗಿನ ಸುಪ್ರಸಿದ್ಧ ನ್ಯಾಯವಾದಿ ಆರೂರು ಲಕ್ಷ್ಮೀನಾರಾಯಣ ರಾವ್. ಆಗ 12 ವಾರ್ಡುಗಳಿತ್ತು. ಆಗ ಮೂರು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತಿತ್ತು.
1965ರಲ್ಲಿ ಇದು ಪುರಸಭೆಯಾಯಿತು. 20-10-1995ರಲ್ಲಿ ಮಲ್ಪೆ, ಪುತ್ತೂರು, ಶಿವಳ್ಳಿ, ಹೆರ್ಗ, 76 ಬಡಗಬೆಟ್ಟು ಗ್ರಾಮಗಳನ್ನು ಒಳಗೊಂಡು 35 ವಾರ್ಡುಗಳ ನಗರಸಭೆಯಾಗಿ ಪರಿವರ್ತನೆಗೊಂಡಿತು. ಇದರಿಂದ ವಿಸ್ತೀರ್ಣವು 9.6 ಚ.ಕಿ.ಮೀ.ನಿಂದ 68.23 ಚ.ಕಿ.ಮೀ.ಗೆ ವಿಸ್ತರಣೆಯಾಯಿತು. 2001ರ ಜನಗಣತಿಯಂತೆ ಜನಸಂಖ್ಯೆ 1,13,039, 2011ರ ಜನಗಣತಿಯಂತೆ ಜನಸಂಖ್ಯೆ 1,25,306. ಈಗಿನ ಮತದಾರರ ಸಂಖ್ಯೆ 97,561.
ಅಬ್ದುಲ್ಲಾ ಸಾಹೇಬರು ಕುಳಿತುಕೊಂಡ ಕುರ್ಚಿಗೆ ಎಷ್ಟು ಮಹತ್ವವಿದೆ ಎಂದರೆ…! 1935ರಿಂದಲೂ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದವರು ಪ್ರತಿ ತಿಂಗಳು ನಡೆಯುವ ನಗರಸಭಾಧಿವೇಶನದ ಅಧ್ಯಕ್ಷತೆಯನ್ನು ವಹಿಸುವಾಗ ಇದೇ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಇಷ್ಟು ಹಳೆಯ ಕುರ್ಚಿ ಸಹಜವಾಗಿ ಹಾಳಾಗುತ್ತದೆ. ಆದರೆ ಕಾಲಕಾಲಕ್ಕೆ ಇದನ್ನು ರಿಪೇರಿ ಮಾಡಿ ಇಡಲಾಗಿದೆ. ನಗರಸಭಾಧಿವೇಶನ ವಹಿಸುವಾಗ ಮಾತ್ರ ಹೊರಗೆ ತರುವ ಈ ಕುರ್ಚಿಯನ್ನು ಮತ್ತೆ ಜೋಪಾನವಾಗಿ ಇಡುತ್ತಾರೆ. ಒಂದು ರಾಜಕೀಯ ಅಧಿಕಾರದ ಸ್ಥಾನಕ್ಕೂ ಉಡುಪಿ ಈ ತೆರನಾದ ಐತಿಹಾಸಿಕ, ಭಾವನಾತ್ಮಕ ಸಂಸರ್ಗವನ್ನು ಕಲ್ಪಿಸಿದೆ. ಈಗಿನ ನಗರಸಭಾಧ್ಯಕ್ಷರು 20ನೆಯವರು. ನಗರಸಭಾ ಚುನಾವಣೆ ಆ. 31ರಂದು ನಡೆಯಲಿದೆ. ಬಳಿಕ 35 ನಗರಸಭಾ ಸದಸ್ಯರ ಪೈಕಿ ಅಬ್ದುಲ್ಲಾರ ಕುರ್ಚಿಯನ್ನು ಏರುವ 21ನೆಯ ಅಧ್ಯಕ್ಷರು ಯಾರು ಎನ್ನುವುದನ್ನು ಕಾದು ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ