ಬಿದಿರು ಕೊಳಲಾದದ್ದು !


Team Udayavani, Sep 2, 2018, 6:00 AM IST

9.jpg

ನಾನು ಒಂದು ಬಿದಿರಿನ ಗಿಡ
ಹುಲ್ಲು ಅಥವಾ ದೊಡ್ಡ ಹುಲ್ಲು ಎಂದರೂ ಸರಿಯೆ
ನನಗೆ ಟೊಂಗೆ ರೆಂಬೆಗಳಿಲ್ಲ.
ಹಾಗಾಗಿ ನಾನು ಉದ್ದನೆಯ ಒಂದು ಕೋಲು
ಮೈತುಂಬ ಇರುವ ಅವಕಾಶದಲ್ಲೂ ಚುಚ್ಚುವ ಮುಳ್ಳು.
ಹೀಗಾಗಿ ನಾನು ಯಾರಿಗೂ ಒಂದು ನೆರಳಾಗಲಿಲ್ಲ
ಹಣ್ಣು ಕೊಡುವ ಮರವಾಗಲಿಲ್ಲ
ಅಥವಾ ಕಡಿದುರುಳಿದ ಬಳಿಕ ಆಸನ ಉಪಕರಣ ಆಗಲಿಲ್ಲ
ನಾನು ಬದುಕಿರುವಾಗ ಏನೂ ಆಗಲಿಲ್ಲ
ಕನಿಷ್ಠ ಸತ್ತ ಬಳಿಕದ ಉರುವಲೂ ಆಗಲಿಲ್ಲ
ಅಪಶಕುನದ ಭಯಕ್ಕೆ ನನ್ನನ್ನು ಸುಡುವವರೂ ಇಲ್ಲ
ಅಲ್ಲೊಮ್ಮೆ ಇಲ್ಲೊಮ್ಮೆ ಏಣಿಯಾಗಿದ್ದೇನೆ
ಏರಿದವರು ಮರೆತುಬಿಟ್ಟಿದ್ದಾರೆ ಏರಿದಾಕ್ಷಣ.
ಬಹಳಷ್ಟು ಜನ ನನ್ನ ನೆನೆಯುವುದು ಸತ್ತಾಗ
ಸತ್ತ ಹೆಣ ಹೊರುವ ಚಟ್ಟಕ್ಕೆ
ಚಟ್ಟಕ್ಕಾದರೂ ಎಷ್ಟು ಆಯುಸ್ಸು? ಹೆಣದ ಜತೆಗೆ ಅದೂ ಬೂದಿ
ನನಗೆ ನಾನು ಏನೂ ಆಗಲಿಲ್ಲ ಎಂಬ ಕೊರಗು ಉಳಿಯಿತು.
ನಾನು ಒಳಗೇ ನರಳಿದೆ, ಕೊರಗಿದೆ
ನನ್ನ ಉಸಿರಿಗೆಲ್ಲ ಒಂದೇ ಹಸಿವು
ನಾನು ಸತ್ತ ಬಳಿಕವೂ ಉಳಿಯಬೇಕು
ಸಾಯದಂತೆ ಉಳಿಯಬೇಕು
ನನ್ನ ಒಳಗೆ ಏನೂ ಆಗದ ಒಂದು  ಪೊಳ್ಳುತನ
ಹಾಗಾಗಿ ಕಾಂಡದ ಒಳಗೆ ಒಂದು ಖಾಲಿ ಅವಕಾಶ
ನಾನು ಒಳಗೆ ಖಾಲಿ, ಹೊರಗೆ ಬರಿಯ ಸಿಪ್ಪೆ
ಅದರೊಳಗೆಲ್ಲ ಬದುಕಲೇ ಬೇಕು ಎಂಬ ಹಸಿವಿನ ಉಸಿರು
ಅದೊಂದನ್ನೇ ನಿತ್ಯ ಮಂತ್ರಿಸುತ್ತಿದ್ದೆ
ಉಸಿರೆಲ್ಲ ಸತ್ತ ಬಳಿಕವೂ ಬದುಕುವ ಪ್ರಾಣಾಯಾಮ
ಒಳಗೆಲ್ಲ ಓಡಾಡುತ್ತಿತ್ತು
.
.
ದುಂಬಿ ಮೈತುಂಬ ರಂಧ್ರ ಕೊರೆಯಿತು.
ನಾನು ಅದರ ಒತ್ತಡಕ್ಕೆ ಮುರಿದು ನೆಲಕ್ಕೆ ಬಿದ್ದೆ
ಒಳಗೆ ಹರಿಯುವ ಉಸಿರಿಗೆ ಜೀವವಿತ್ತು
ಅದು ಒಂದೇ ಸಮನೆ ಬದುಕುವ ಮಾತು ಹೇಳುತ್ತಿತ್ತು
ಅಷ್ಟರಲ್ಲಿ ಯಾರೋ ಒಬ್ಬ ದನಕಾಯುವವ
ಆ ದಾರಿಯಲ್ಲಿ ಸಾಗಿದ, ನನಗೆ ಅವನ ಕಾಲು ತಾಗಿತು
ಅವನು ಥಟ್ಟಂತ ಕಾಲು ಹಿಂದಕ್ಕೆಳೆದ.
ಅವನು ಸಾಮಾನ್ಯ ದನ ಕಾಯುವವನಲ್ಲ , ಶ್ರೀಕೃಷ್ಣ.
ಅವನಿಗೆ ನನ್ನ ಒಳಗಿನ ಉಸಿರು ತಾಕಿರಬೇಕು
ಅದಕ್ಕೆ ಕಾಲಿನಿಂದ ಒದೆದು ಹೋಗಲಿಲ್ಲ
ಮೆತ್ತಗೆ ನನ್ನ ಕಡೆಗೆ ಬಾಗಿದ
ತನ್ನ ಕೈಯಿಂದ ನನ್ನನ್ನು ಎತ್ತಿಕೊಂಡ
ತನ್ನ ಕೈಯಳತೆ ನನ್ನನ್ನು ಮುರಿದ
ಅದೊಂದು ಸುಂದರ ವೇದನೆ, ಅಪೇಕ್ಷಿತ ನೋವಿನ ಹಾಗೆ
ಅಷ್ಟಕ್ಕೆ ನಿಲ್ಲಲಿಲ್ಲ ಅವನು
ಇರುವ ಐದಾರು ರಂಧ್ರಗಳಲ್ಲಿ ಒಂದಕ್ಕೆ ತನ್ನ ತುಟಿ ಹಚ್ಚಿದ
ಅಬ್ಟಾ ! ಅದೆಂಥ ಕೃಪೆ ! ಅದು ಮುತ್ತಲ್ಲ
ಪಂಚಪ್ರಾಣವನ್ನು ನನ್ನೊಳಗೆ ನೂಕಿಬಿಟ್ಟ
ಓಹ್‌! ನನ್ನೊಳಗೆ ಕೋಲಾಹಲ
ಒಳಗೆ ಬದುಕಬೇಕು ಎಂದು ಹಸಿದ ಉಸಿರಿಗೆ ಅವನ ಉಸಿರು ಕೂಡಿತು
ಎರಡರೊಳಗೆ ಒಂದು ಸಮಪಾಕದ ಹಸಿಬಿಸಿ ಬೆಸೆತ
ನಾನು ರುಮುರುಮು ಒಳಗೆ ಬೀಸಿ ಹೊರಗೆ ನೂಕುವಂತಾದೆ
ಇನ್ನೇನು ಜೀವದ ಆರ್ಭಟ ಗಾಳಿಯಾಗಿ ರಭಸ ಪಡೆದಿತ್ತು
ಅದು ಹಾಗೆ ಭರ್ರಂತ ಉಳಿದ ರಂಧ್ರಗಳಲ್ಲಿ ಬಿರುಗಾಳಿಯಾಗಿ ಆರ್ಭಟಿಸಲಿಕ್ಕಿತ್ತು
ಅಷ್ಟರಲ್ಲಿ ಕೃಷ್ಣ…
ತನ್ನ ಎರಡು ಬೆರಳುಗಳಿಂದ ಎರಡು ರಂಧ್ರಗಳನ್ನು ಮುಚ್ಚಿದ
ಹೊರಗೆ ಹೊರಟ ಜೀವದ ನೂಕಿಗೆ ಪಾಕಮಾಡಿ ಹೊಸ ಮಾರ್ಗ ತೋರು
ನಿಧಾನಕ್ಕೆ ಎರಡು ರಂಧ್ರಗಳಲ್ಲಿ ಸಾಂದ್ರವಾಗಿ ಹರಿಯಬಿಟ್ಟ
ಅದು ಹರಿಬಿಟ್ಟ ನಾದವಾಯಿತು
ನಾನು ಆರ್ಭಟವಾಗಬೇಕಾದವನು ಸುಂದರ ನಿನಾದವಾದೆ.
ದನಿಯ ನೂಕಿಗೆ ಸ್ವರ ಕೊಟ್ಟ ಕೊಳಲಾದೆ
ಬರಿಯ ಕೊಳಲಾಗಲಿಲ್ಲ ಕೃಷ್ಣನ ಕೈಯ ಕೊಳಲಾದೆ
ಅವನ ತುಟಿಯ ಸ್ಪರ್ಶಕೆ ಮರುಜೀವ ಪಡೆದೆ
ಎಂದೂ ಸಾಯದಂತೆ ಉಳಿದೆ, ಬದುಕಿದೆ.

ವೀಣಾ ಬನ್ನಂಜೆ

ಟಾಪ್ ನ್ಯೂಸ್

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.