ರಾಜನ್ ವಿರುದ್ದ ನೀತಿ ಆಯೋಗದ ಹೇಳಿಕೆ ಹಾಸ್ಯಾಸ್ಪದ : ಕಾಂಗ್ರೆಸ್
Team Udayavani, Sep 4, 2018, 11:48 AM IST
ಹೊಸದಿಲ್ಲಿ : ‘ದೇಶದ ಆರ್ಥಿಕತೆ ಕುಸಿಯಲು ನೋಟು ಅಮಾನ್ಯ ಕ್ರಮ ಕಾರಣವಲ್ಲ; ಬದಲು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರ ಅಸಮರ್ಪಕ ನೀತಿಗಳೇ ಕಾರಣ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿರುವುದನ್ನು ಕಾಂಗ್ರೆಸ್ ಬಲವಾಗಿ ಟೀಕಿಸಿದೆ.
ನೀತಿ ಆಯೋಗದ ಉಪಾಧ್ಯಕ್ಷರ ಈ ಹೇಳಿಕೆಯು ಅತ್ಯಂತ ಅಕ್ಷೇಪಾರ್ಹವಾಗಿದ್ದು ಹಾಸ್ಯಾಸ್ಪದವೂ ಆಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ನೀತಿ ಆಯೋಗದ ಉಪಾಧ್ಯಕ್ಷರ ಹೇಳಿಕೆಯು “ತಪ್ಪನ್ನು ಬೇರೆಯವರ ಮೇಲೆ ಹೊರಿಸುವ’ ತಂತ್ರವಾಗಿದೆ; ಹಿಂದಿನ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಬ್ಯಾಂಕುಗಳ ಎನ್ಪಿಎ (ಅನುತ್ಪಾದಕ ಆಸ್ತಿ) ಕೇವಲ 2 ಲಕ್ಷ 83 ಸಾವಿರ ಕೋಟಿ ರೂ. ಇತ್ತು ಮತ್ತು ಅದು ಹತೋಟಿಯ ಒಳಗೇ ಇತ್ತು. ನಾಲ್ಕು ವರ್ಷಗಳ ಬಳಿಕ ಈಗ ಬಿಜೆಪಿ ಆಡಳಿತೆಯಲ್ಲಿ ಬ್ಯಾಂಕುಗಳ ಎನ್ಪಿಎ 12 ಲಕ್ಷ ಕೋಟಿ ರೂ. ತಲುಪಿದೆ. ಈ ಅಂಕಿ ಅಂಶವನ್ನು ಮೋದಿ ಸರಕಾರವೇ 2018ರ ಜು.31ರಂದು ಸಂಸತ್ತಿನಲ್ಲಿ ಲಿಖೀತ ಉತ್ತರದಲ್ಲಿ ತಿಳಿಸಿದೆ. ನೋಟು ಅಮಾನ್ಯ ಕ್ರಮದಿಂದ ಜಿಡಿಪಿ ಶೇ.1.5ರಷ್ಟು ಕುಸಿದಿದೆ ಮತ್ತು ಇದರಿಂದ ದೇಶಕ್ಕೆ 2 ಲಕ್ಷ 25 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸುರ್ಜೆವಾಲಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LTTE Ban Extended: ಮತ್ತೆ ಐದು ವರ್ಷಗಳ ಕಾಲ ನಿಷೇಧ ವಿಸ್ತರಿಸಿದ ಕೇಂದ್ರ ಸರ್ಕಾರ
Patanjali Ads Case: ಬಾಬಾ ರಾಮದೇವ್ ಪ್ರಭಾವಿ ಹೌದು, ಆದರೆ…..: ಸುಪ್ರೀಂ ಕೋರ್ಟ್
Panaji: ಭಾರೀ ಮಳೆಗೆ ಮೇಲ್ಸೇತುವೆಯ ಸ್ಲ್ಯಾಬ್ ಕುಸಿತ; ಸ್ಥಳೀಯರಲ್ಲಿ ಆತಂಕ
Panaji: ಮೇಲ್ಸೇತುವೆಯ ಸ್ಲ್ಯಾಬ್ನ ಭಾಗ ಕುಸಿತ: ವಾಹನ ಸವಾರರಲ್ಲಿ ಆತಂಕ
5 ರೂಪಾಯಿ ಕುರ್ಕುರೆ ತಂದುಕೊಡಲಿಲ್ಲ ಎನ್ನುವ ಕಾರಣಕ್ಕೆ ಪತಿಗೆ ಡಿವೋರ್ಸ್ ಕೊಟ್ಟ ಪತ್ನಿ.!
MUST WATCH
ಹೊಸ ಸೇರ್ಪಡೆ
ಆನ್ಲೈನ್ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!
Lucknow Super Giants; ತಣ್ಣಗಾಯ್ತಾ ರಾಹುಲ್- ಗೋಯೆಂಕಾ ಗಲಾಟೆ; ಇಲ್ಲಿದೆ ಫೋಟೊಗಳು
Hunsur: ನಾಗರಹೊಳೆಯಲ್ಲಿ ಗುಂಡಿಕ್ಕಿ ಅಪರೂಪದ ಕೂರ ಭೇಟೆಯಾಡಿದ್ದ ಇಬ್ಬರ ಬಂಧನ; ಓರ್ವ ಪರಾರಿ
LTTE Ban Extended: ಮತ್ತೆ ಐದು ವರ್ಷಗಳ ಕಾಲ ನಿಷೇಧ ವಿಸ್ತರಿಸಿದ ಕೇಂದ್ರ ಸರ್ಕಾರ
Chikkamagaluru; ಮಲೆನಾಡಿಗರಲ್ಲಿ ಮಂದಹಾಸ ಮೂಡಿಸಿದ ಮಳೆರಾಯ