ಮೀಸಲಾತಿ ಹೆಚ್ಚಿಸದೆ ಎಸ್ಟಿಗೆ ಬುಡಕಟ್ಟು ಸೇರ್ಪಡೆ ಸಲ್ಲ
Team Udayavani, Sep 21, 2018, 4:53 PM IST
ಧಾರವಾಡ: ಎಸ್.ಟಿ. ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇ.7 ಕ್ಕೆ ಹೆಚ್ಚು ಮಾಡದೇ ಬೇರೆ ಯಾವುದೇ ಬುಡಕಟ್ಟುಗಳನ್ನು ಎಸ್ಟಿಗೆ ಸೇರಿಸಬಾರದು ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಜಿಲ್ಲೆಯ ವಾಲ್ಮೀಕಿ ಸಮುದಾಯದ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದವು. ನಗರದ ಡಿಸಿ ಕಚೇರಿಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಸದಸ್ಯರಾದ ಮಾಯಾ ಚಿಂತಾಮಣಿ ವನಾತೆ ಹಾಗೂ ಹರ್ಷದ್ ಬಾಯ್ ಚುನಿಲಾಲ್ ಅವರಿಗೆ ಜಿಲ್ಲೆಯ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ, ವೀರ ಸಿಂಧೂರ ಲಕ್ಷ್ಮಣ ಹೋರಾಟ ಸಮಿತಿ, ಎಸ್ಟಿ ನೌಕರರ ಸಂಘಗಳಿಂದ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಏಕೀಕರಣಗೊಂಡ ಸಮಯದಲ್ಲಿ ರಾಜ್ಯದಲ್ಲಿ ಎಸ್ಟಿ ವರ್ಗದಲ್ಲಿ ಕೇವಲ ಆರು ಸಮುದಾಯಗಳಿದ್ದವು. ಈಗ 51 ಸಮುದಾಯಗಳಿವೆ. ಆದರೆ ಮೀಸಲು ಪ್ರಮಾಣ ಮಾತ್ರ ಹೆಚ್ಚಾಗಿಲ್ಲ. ಜಾತಿಗಣತಿ ವರದಿ ಬಹಿರಂಗವಾದರೆ ನಮ್ಮ ಜನಸಂಖ್ಯೆಯ ಅನುಪಾತದಲ್ಲಿ ಶೇ. 7.5ಕ್ಕಿಂತ ಅಧಿಕ ಮೀಸಲಾತಿ ಸಿಗಲು ಸಾಧ್ಯವಿದೆ. ಸದ್ಯ ಇರುವ ಸಮುದಾಯಗಳಿಗೆ ನ್ಯಾಯ ಸಿಗದಿರುವಾಗ ಹೊಸ ಹೊಸ ಜನಾಂಗಗಳನ್ನು ಸೇರ್ಪಡೆ ಮಾಡುತ್ತ ಹೋದರೆ ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟು ಮಾಡಿದಂತಾಗುತ್ತದೆ. ಈಗಿನ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಬೇಕು. ನಂತರ ಎಸ್ಟಿ ಸೇರಲು ಅರ್ಹತೆ ಹೊಂದಿರುವ ಶೋಷಿತ ಸಮುದಾಯಗಳನ್ನು ಆ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯಲ್ಲಿ ಹೆಚ್ಚಳ ಮಾಡಿ ಸೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ರವೀಂದ್ರ ಬೆಂತೂರ, ಡಾ| ತ್ಯಾಗರಾಜ, ಮಂಜುನಾಥ ಹುಡೇದ, ಮಂಜುನಾಥ ಓಲೇಕಾರ, ಬಸವರಾಜ ವಾಲೀಕಾರ, ಲಕ್ಷ್ಮಣ ಬಕ್ಕಾಯಿ, ಚಂದ್ರು ನೂಲ್ವಿ, ಮಹಾಂತೇಶ ಹವಳಣ್ಣವರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
MUST WATCH
ಹೊಸ ಸೇರ್ಪಡೆ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ