ಪಕ್ಷಿಗಳೂ ಮದ್ಯ ಸೇವಿಸಿ ತೂರಾಡುತ್ತವಂತೆ!


Team Udayavani, Oct 8, 2018, 6:37 AM IST

46.jpg

ಪಕ್ಷಿಗಳು ಗಾಜಿನ ಗೋಡೆಗೆ ಡಿಕ್ಕಿ ಹೊಡೆಯುವುದು, ಬೀದಿ ದೀಪದ ಕಡೆಯೇ ನುಗ್ಗುವುದು, ವಾಹನಗಳ ಕಿಟಕಿಯೊಳಗೆ ನುಗ್ಗುವಂಥ ಕೆಲಸಗಳನ್ನು ಸಾಮಾನ್ಯವಾಗಿ ಮಾಡುತ್ತವೆ. ಅವುಗಳಿಗೆ ತಾವು ಎಲ್ಲಿಗೆ ನುಗ್ಗುತ್ತಿದ್ದೇವೆ ಎಂದು ತಿಳಿಯದೇ ಹಾಗೆ ಮಾಡುತ್ತವೆ ಎಂದು ನಾವು ತಿಳಿದಿದ್ದೇವೆ. ಅಮೆರಿಕದ ಮಿನ್ನಿಸೋಟದಲ್ಲಿ ಪಕ್ಷಿಗಳು ಈ ರೀತಿ ಗೊಂದಲಕ್ಕೀಡಾದಂತೆ ವರ್ತಿಸುವುದು, ಜನರಿಗೆ ತೊಂದರೆ ಕೊಡುವುದು ಸಾಮಾನ್ಯವಂತೆ. ಇತ್ತೀಚೆಗೆ ಪಕ್ಷಿತಜ್ಞರೊಬ್ಬರು ಇದಕ್ಕೆ ಕಾರಣ ಕಂಡುಹಿಡಿದಿದ್ದಾರೆ.

ಅದೇನೆಂದರೆ ಪಕ್ಷಿಗಳು ಮದ್ಯಪಾನ ಮಾಡುತ್ತವೆ!. ಇದನ್ನು ಕೇಳಿ ಆಶ್ಚರ್ಯ ಪಡಬೇಡಿ. ಅವುಗಳು ಮದ್ಯ ಸೇವಿಸುವುದು ಮಾಗಿ, ಆಲ್ಕೊಹಾಲ್‌ ಆಗಿರುವ ಬೆರ್ರಿ ಹಣ್ಣುಗಳನ್ನು ಸೇವಿಸುವ ಮೂಲಕ. ಬೆಳಗ್ಗೆ ಮಂಜು ಬಿದ್ದು ನಂತರ ಸೂರ್ಯನ ಬಿಸಿಲು ಬಿದ್ದ ಬಳಿಕ ಬೆರ್ರಿ ಹಣ್ಣುಗಳಲ್ಲಿ ಮದ್ಯದ ಅಂಶ ಇರುತ್ತದೆ. ಇವುಗಳನ್ನು ಸೇವಿಸಿ ಪಕ್ಷಿಗಳು ಅದರ ನಶೆಯಲ್ಲಿ ವಿಪರೀತವಾಗಿ ವರ್ತಿಸುತ್ತವೆ. ಅಂಥ ಪಕ್ಷಿಗಳು ಸಾಮಾನ್ಯವಾಗಿ ಅವುಗಳು ಹಾರಾಡುವ ಎತ್ತರಕ್ಕಿಂತ ಕೆಳಗೆ ಹಾರಾಡುತ್ತವೆ. ಎಲ್ಲೆಂದರಲ್ಲಿ ನುಗ್ಗುತ್ತವೆ. ಮನುಷ್ಯರ ಭಯವೇ ಇಲ್ಲದೇ ವರ್ತಿಸುತ್ತವೆ. ರಾಬಿನ್‌ ಪಕ್ಷಿಗಳು ಮಾಗಿದ ಬೆರ್ರಿ ಹಣ್ಣುಗಳ್ನನು ಹೆಚ್ಚು ಸೇವಿಸುತ್ತವೆ ಎಂದೂ ಹೇಳಿದ್ದಾರೆ.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.