ಚರ್ಮವಾದ್ಯದ ನಾದವಿಜ್ಞಾನಿಗೆ ಹುಟ್ಟೂರ ಗೌರವಾರ್ಪಣೆ


Team Udayavani, Oct 11, 2018, 6:20 AM IST

yakshagana-sadananda-rao.jpg

ಕಾಸರಗೋಡು: ಚೆಂಡೆ, ಮದ್ದಳೆ, ಮೃದಂಗಗಳಂತಹ ಚರ್ಮವಾದ್ಯಗಳಿಗೆ ಮುಚ್ಚಿಗೆ ಹಾಕಿ ಅದರ ಕರ್ಣದಿಂದ ಶ್ರುತಿಭರಿತ ನಾದದ ಝೇಂಕಾರ ಹೊರಹೊಮ್ಮಿಸುವಂತೆ ಮಾಡುವುದು ಅತ್ಯಂತ ಕ್ಲಿಷ್ಟಕರವಾದ ಪರಿಶ್ರಮದ ಕಲೆಗಾರಿಕೆ. ಈ ಕಲೆಯನ್ನು ರೂಢಿಸಿಕೊಳ್ಳಬೇಕಾದರೆ ಸಂಗೀತದಲ್ಲಿ ಆಳವಾದ, ಶೋಧನಾತ್ಮಕ ಸ್ವರಜ್ಞಾನಗಳು ಅಗತ್ಯ. ಶ್ರುತಿಯ ಸುಭಗತೆಯ ಪರಿಜ್ಞಾನ ಅನಿವಾರ್ಯ. 

ಸಂಗೀತೋಪಕರಣಗಳನ್ನು ನುಡಿಸುವ ಕಲಾವಿದರು ಅದೆಷ್ಟೋ ಮಂದಿ ಇದ್ದರೂ ಉಪಕರಣಗಳ ತಯಾರಿ, ರಿಪೇರಿ ಮತ್ತು ಮುಚ್ಚಿಗೆ ಹಾಕಿ ಕೊಡುವವರು ತೀರಾ ವಿರಳ. ಈ ಕಾಯಕದಲ್ಲಿ 70 ವರ್ಷಗಳಿಂದ ತನ್ನನ್ನು ತೊಡಗಿಸಿಕೊಂಡು ತೆಂಕುತಿಟ್ಟು ಯಕ್ಷಗಾನದ ಹಿರಿಯರಿಂದ ಕಿರಿಯರ ತನಕ ಬಹುತೇಕ ಹಿಮ್ಮೇಳವಾದಕರಿಗೆ ಅನಿವಾರ್ಯ ವ್ಯಕ್ತಿ ಎಂಬಂತೆ ರೂಪುಗೊಂಡ ಹಿರಿಯ ಕಲಾತಪಸ್ವಿ ಕೂಡ್ಲು ಸದಾನಂದ ರಾವ್‌ಗೆ ಕುಲಕಸುಬಿನಲ್ಲಿ ಸಪ್ತತಿಯ ಸಮಯ.

ಮನೆತುಂಬಾ ಚರ್ಮವಾದ್ಯ
ಮನೆತುಂಬಾ ಚೆಂಡೆ ಮದ್ದಳೆಗಳ ಸಹಿತ ಚರ್ಮವಾದ್ಯಗಳು. ಇವುಗಳ ದುರಸ್ತಿ ಕಾಯಕದಲ್ಲಿ ತನ್ನನ್ನು ಸಮರ್ಪಿಸಿಕೊಂಡಿರುವ ಸದಾನಂದ ರಾಯರಿಗೆ ಸದಾ ಆನಂದದ ನಾದಾನುಸಂಧಾನವೇ ಬದುಕು. ಅವರ ಅಜ್ಜ ಲಕ್ಷ್ಮಣರಾಯರು ಚರ್ಮವಾದ್ಯ ನುಡಿಸುವುದರಲ್ಲಿ ತಯಾರಿಸುವುದರಲ್ಲಿ ಸಿದ್ಧ ಹಸ್ತರು. ಕೊಡಗಿನ ಅರಸರಿಗೆ ವಿಶಿಷ್ಟವಾದ ಮದ್ದಳೆಯೊಂದನ್ನು ನಿರ್ಮಿಸಿಕೊಟ್ಟು ಅರಸರಿಂದ ಧನ-ಕನಕ ಸಮ್ಮಾನಗಳನ್ನು ಪಡೆದವರು. ತಂದೆ ರಾಮಚಂದ್ರರಾಯರೂ ಕುಲವೃತ್ತಿಯನ್ನೇ ಅನುಸರಿಸಿದವರು. ಹೀಗೆ ವಂಶವಾಹಿನಿಯಾಗಿ ಬಂದು ಸಿದ್ಧಿಸಿದ ಈ ಕಲೆಯಲ್ಲಿ ಪ್ರಸ್ತುತ ಸದಾನಂದ ರಾಯರದ್ದು ಅನನ್ಯ ಪ್ರತಿಭೆ, ಅದ್ಭುತ ಸಾಧನೆ. 

ತಂದೆಯೇ ಮೊದಲ ಗುರು
ಚೆಂಡೆ ಮದ್ದಳೆಗಳ ನಿನಾದ ಬಾಲ್ಯದಿಂದಲೇ ಕೇಳಿದವರು. ತಂದೆಯೇ ಮೊದಲ ಗುರು, ಮನೆಯೇ ಮೊದಲ ಕಲಾಶಾಲೆ. ಗುಂಡಿಹಿತ್ತಿಲು ಕೃಷ್ಣಯ್ಯ, ಕುದ್ರೆಕೋಡ್ಲು ರಾಮಭಟ್ಟರಿಂದ ಹಿಮ್ಮೇಳವಾದನದ ಹೆಚ್ಚಿನ ಶಿಕ್ಷಣ, ತಲೆಂಗಳ ಗೋಪಾಲ ಕೃಷ್ಣ ಭಟ್ಟರು ಹಾಗೂ ವಿದ್ವಾನ್‌ ಬಾಬು ರೈಗಳಿಂದ ಮದ್ದಳೆಯ  ನುಡಿತ ಬಡಿತಗಳ ಮರ್ಮವನ್ನು ಕಲಿತರು. ಕುಲಕಸುಬಿನ ಮೂಲಕ ಜೀವನದ ಯಶಸ್ಸನ್ನು ಕಂಡ ಸದಾನಂದ ರಾಯರಿಗೆ ಹೊಸ ತಲೆಮಾರಿನಲ್ಲಿ ಈ ಕಸುಬಿನ ಬಗ್ಗೆ ಗೌರವ ಇಲ್ಲದಾಗಿದೆ. ಉದರ ನಿಮಿತ್ತ ಇತರ ಆಕರ್ಷಣೀಯ ಕ್ಷೇತ್ರಕ್ಕೆ ತೆರಳುವ ಕಾರಣ ಚರ್ಮವಾದ್ಯಗಳ ದುರಸ್ತಿ ಕೆಲಸದಲ್ಲಿ ನಿರತರಾಗಲು ಹೊಸ ಪೀಳಿಗೆಯವರು ಯಾರು ಬರುತ್ತಿಲ್ಲ ಎಂಬ ಕೊರಗು ಇದೆ. 

ಚರ್ಮವಾದ್ಯಗಳ ದುರಸ್ತಿಯ ಕೆಲಸ ಒಂದು ಆರಾಧನೆ ಇದ್ದಂತೆ. ಇದರಿಂದ ನಾನು ಆರ್ಥಿಕವಾಗಿ ಗಳಿಸಿದ್ದೇನು ಎಂಬುದಕ್ಕೆ ಉತ್ತರವಿಲ್ಲ. ಆದರೆ ಇದರಿಂದ ನಾನು ಪಡೆದ ಆತ್ಮ ಸಂತೃಪ್ತಿ ಇನ್ಯಾವುದರಲ್ಲೂ ಸಿಗದು. ನನ್ನ ಉಸಿರಿನ ಕೊನೆಯ ತನಕ ಈ ಕೆಲಸವನ್ನು ಮಾಡಬೇಕು. ಇದರ ಹೊರತಾಗಿ ಇನ್ಯಾವ ಕೆಲಸಗಳ ಬಗ್ಗೆಯೂ ಯೋಚಿಸಿದವನಲ್ಲ ಎಂಬ ಸದಾನಂದ ರಾಯರದ್ದು ಪರಿಶುದ್ಧತೆಯ ಕೆಲಸ. ತನ್ಮಯತೆಯ ಕಸುಬು. ಪತ್ನಿ ನಂದಿನಿ, ಕಲಾತಿಲಕ ಪುರಸ್ಕಾರ ಗಳಿಸಿದ ಪುತ್ರ ರಾಮಚಂದ್ರ ಹಾಗೂ ಕಲಾಪ್ರತಿಭೆಯಾಗಿ ಪುರಸ್ಕೃತಳಾದ ಪುತ್ರಿ ಗೀತಾ ಎಂಬೀ ಇಬ್ಬರು ಮಕ್ಕಳ ಹಾಗೂ ಅವರ ಕುಟುಂಬಗಳೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿರುವ ರಾಯರಿಗೆ ಈಗ ಸಪ್ತತಿ ಸಂಭ್ರಮದ ಸಮಯ.

ಈ ವೇಳೆಯಲ್ಲಿ ಯಕ್ಷಮಿತ್ರರು ಮಧೂರು ಇವರ 12ನೇ ಕಲಾಕಾಣಿಕೆಯ ಅಂಗವಾಗಿ ಅಕ್ಟೋಬರ್‌ 14ರಂದು ಸಾಯಂಕಾಲ ಗಂಟೆ 3ರಿಂದ ಮಧೂರು ಪರಕ್ಕಿಲ ದೇವಸ್ಥಾನದ ಸಭಾಭವನದಲ್ಲಿ ನಡೆಯುವ ಮಧೂರು ಯಕ್ಷಸಂಭ್ರಮದಲ್ಲಿ ನೆರೆದ ಗಣ್ಯರ ಉಪಸ್ಥಿತಿಯಲ್ಲಿ ಕಲಾಭಿಮಾನಿಗಳ ಸಮಕ್ಷ ಸದಾನಂದ ರಾಯರಿಗೆ ಹುಟ್ಟೂರ ಗೌರವಾರ್ಪಣೆ ನಡೆಯಲಿದೆ. ಅನಂತರ ತೆಂಕುತಿಟ್ಟಿನ ಅಗ್ರಗಣ್ಯ ಕಲಾವಿದರ ಕೂಡುವಿಕೆಯಲ್ಲಿ ತುಳಸೀ ಜಲಂಧರ – “ತಾಮ್ರಧ‌Ìಜ ಕಾಳಗ’ ಎಂಬ ಯಕ್ಷಗಾನ ಪ್ರದರ್ಶನವೂ ಜರಗಲಿದೆ.

6ನೇ ವಯಸ್ಸಿನಲ್ಲಿ ಮದ್ದಳೆವಾದಕನಾಗಿ ಕಲಾಸೇವೆಯನ್ನು ಆರಂಭಿಸಿ, ಚರ್ಮವಾದ್ಯ ಗಳೆಲ್ಲದರ ಮರ್ಮವನ್ನರಿತ ಕುಶಲ ಕರ್ಮಿಯಾದ ಸದಾನಂದ ರಾಯರಿಗೆ ಈಗ 76ರ ಹರೆಯ. ಆರಂಭದಲ್ಲಿ ಯಕ್ಷಗಾನದ ಚೆಂಡೆ ಮದ್ದಳೆವಾದಕನಾಗಿ ಕಲಾಸೇವೆಯನ್ನು ಸಲ್ಲಿಸಿ ನಂತರ ಚರ್ಮವಾದ್ಯಗಳ ರಿಪೇರಿಯ ಕುಲಕಸುಬಿಗೆ ಅಂಟಿಕೊಂಡು ನೇಪಥ್ಯದಲ್ಲಿ ಉಳಿದ ಇವರ ಚೆಂಡೆ ಮದ್ದಳೆಗಳಿಗೆ ಅತ್ಯಂತ ಬೇಡಿಕೆಯಿದೆ. ಶ್ರೀ  ಧರ್ಮಸ್ಥಳ, ಎಡನೀರು, ಹನುಮಗಿರಿ, (ಪ್ರಾರಂಭದಲ್ಲಿ  ಕಟೀಲು) ಮೊದಲಾದ ಮೇಳಗಳಿಗೆಲ್ಲ ಇವರೇ ಚೆಂಡೆ ಮದ್ದಳೆ ದುರಸ್ತಿಗಾರರು. ಅಲ್ಲದೇ ವಿದೇಶಗಳಿಂದಲೂ ದೇಶದ ಹಲವೆಡೆಗಳಿಂದಲೂ, ಹಲವಾರು ದೇವಾಲಯಗಳಿಂದಲೂ, ವಿವಿಧ ಕಲಾಕ್ಷೇತ್ರಗಳಿಂದಲೂ ಇವರನ್ನು ಹುಡುಕಿಕೊಂಡು ಕಲಾವಿದರು ಬಂದೇ ಬರುತ್ತಾರೆ. 

ಟಾಪ್ ನ್ಯೂಸ್

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.