ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ BJP ಅಧ್ಯಾದೇಶ ತರಲಿ: ಓವೈಸಿ
Team Udayavani, Oct 29, 2018, 7:06 PM IST
ಹೊಸದಿಲ್ಲಿ : ಆಳುವ ಭಾರತೀಯ ಜನತಾ ಪಕ್ಷಕ್ಕೆ ತಾಕತ್ತಿದ್ದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅದು ಅಧ್ಯಾದೇಶವನ್ನು ತರಲಿ ಎಂದು ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ, ಅಸಾದುದ್ದೀನ್ ಓವೈಸಿ ಚ್ಯಾಲೆಂಜ್ ಹಾಕಿದ್ದಾರೆ.
ಬಿಜೆಪಿ ಅಂತಹ ಕೆಲಸವನ್ನು ಮಾಡಿತೆಂದರೆ ಅದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ ಎಂಬ ಎಚ್ಚರಿಕೆಯನ್ನು ಕೂಡ ಓವೈಸಿ ನೀಡಿದರು.
2019ರ ಜನವರಿಯ ವರೆಗೆ ಅಯೋಧ್ಯಾ ರಾಮ ಜನ್ಮಭೂಮಿ ಕೇಸನ್ನು ಮುಂದೂಡಿರುವ ಸುಪ್ರೀಂ ಕೋರ್ಟಿನ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು ಎಂದು ಓವೈಸಿ ಹೇಳಿದರು.
ಬಿಜೆಪಿ ನಾಯಕರು ಹೇಳಿದಂತೆ ಈ ದೇಶ ನಡೆಯುವುದಿಲ್ಲ; ಈ ದೇಶ ವೆಟಿಕನ್ ಅಲ್ಲ; ಸೌದಿಯೂ ಅಲ್ಲ ಎಂದು ಓವೈಸಿ ಗುಡುಗಿದರು.