ನ.19ರಂದು ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ?
Team Udayavani, Nov 7, 2018, 3:50 PM IST
ಹೊಸದಿಲ್ಲಿ : ಸ್ವಾಯತ್ತೆ ಕುರಿತಂತೆ ಸರಕಾರದೊಂದಿಗಿನ ಭಿನ್ನಾಭಿಪ್ರಾಯದ ಫಲವಾಗಿ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ಇದೇ ನ.19ರಂದು ನಡೆಯಲಿರುವ ಬ್ಯಾಂಕಿನ ಮುಂದಿನ ಬೋರ್ಡ್ ಮೀಟಿಂಗ್ ಸಂದರ್ಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಗವರ್ನರ್ ಜತೆಗೆ ಸಂಪರ್ಕವಿರುವ ಮೂಲಗಳನ್ನು ಉಲ್ಲೇಖೀಸಿ, ಹಣಕಾಸು ನಿಯತಕಾಲಿಕ ಮನಿಲೈಫ್, ಇಂದು ಬುಧವಾರ ವರದಿ ಮಾಡಿದೆ.
ಆರ್ಬಿಐ ಗೆ ಎಷ್ಟು ಸ್ವಾಯತ್ತೆ ಇರಬೇಕು ಎಂಬ ವಿಷಯದಲ್ಲಿ ಸರಕಾರ ಮತ್ತು ಆರ್ಬಿಐ ನಡುವೆ ಈಚಿನ ದಿನಗಳಲ್ಲಿ ಜಟಾಪಟಿ ಏರ್ಪಟ್ಟಿರುವುದೇ ಊರ್ಜಿತ್ ರಾಜೀನಾಮೆಗೆ ಕಾರಣವಾಗಿದೆ. ಮೇಲಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಸಾಲ ನೀಡಿಕೆ ಮೇಲಿನ ನಿರ್ಬಂಧಗಳನ್ನು ಕಡಿಮೆ ಮಾಡಬೇಕು ಎಂದು ಆರ್ಬಿಐ ಮೇಲೆ ಒತ್ತಡ ಹೇರುತ್ತಿದೆ; ಜತೆಗೆ ಆರ್ಬಿಐ ಬಳಿ ಇರುವ ಮೀಸಲು ನಿಧಿ ತನ್ನ ಬಳಕೆಗೆ ಸಿಗಬೇಕು ಎಂದು ಬಯಸುತ್ತಿದೆ.
ಕಳೆದ ತಿಂಗಳಲ್ಲಿ ಆರ್ಬಿಐ ನ ಓರ್ವ ಡೆಪ್ಯುಟಿ ಗವರ್ನರ್ ತನ್ನ ಭಾಷಣದಲ್ಲಿ “ಆರ್ಬಿಐ ಸ್ವಾಯತ್ತೆಗೆ ಧಕ್ಕೆ ಉಂಟಾಗುವುದರಲ್ಲಿ ಸಂಭವನೀಯ ದುರಂತ ಇರುತ್ತದೆ’ ಎಂಬ ಎಚ್ಚರಿಕೆಯನ್ನು ನೀಡಿದ್ದರು.
ಮನಿಲೈಫ್ ವರದಿಯ ಪ್ರಕಾರ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ನ.19ರಂದು ನಡೆಯಲಿರುವ ಆರ್ಬಿಐ ಬೋರ್ಡ್ ಮೀಟಿಂಗ್ ಸಂದರ್ಭದಲ್ಲೇ ರಾಜೀನಾಮೆ ಕೊಡುವ ಸಾಧ್ಯತೆ ಇದೆ; ಸ್ವಾಯತ್ತೆ ವಿಚಾರದಲ್ಲಿ ಅವರಿಗೆ ಸರಕಾರದೊಂದಿಗೆ ಜಟಾಪಟಿ ಸಾಕಾಗಿ ಹೋಗಿದೆ ಮತ್ತು ಇದರ ಒತ್ತಡವು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ
Belagavi: ಗಡಿ ಹೋರಾಟದಲ್ಲಿ ಯಶಸ್ವಿಯಾಗಲು ಒಂದಾಗಿ: ಮನೋಜ್ ಜರಾಂಗೆ ಪಾಟೀಲ