ದರೋಡೆಗೆ ಸಂಚು: ಮೂವರು ಯುವತಿಯರ ಸೆರೆ
Team Udayavani, Nov 15, 2018, 9:24 AM IST
ಉಪ್ಪಿನಂಗಡಿ: ಒಂಟಿ ಪುರುಷರ ಮನೆಗೆ ನುಗ್ಗಿ ಅವರನ್ನು ಯಾಮಾರಿಸಿ ನಗ ನಗದನ್ನು ದೋಚುವ ಮೂವರು ಮಹಿಳೆಯರ ತಂಡದ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಮಂಗಳೂರಿನ ಬಜಾಲಿನಲ್ಲಿ ದೋಚಿದ್ದ 156 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಗದಗ ಜಿಲ್ಲೆಯ ಹಡಗಲಿ ಬೌವನೂರು ಗ್ರಾಮದ ನಿವಾಸಿ ಪವನ್ ರಾಜ್ನ ಪತ್ನಿ ದೇವಮ್ಮ (19), ಅದೇ ಗ್ರಾಮದ ಸಿದ್ದಣ್ಣ ಗೌಡರ ಮಗಳು ನಾಗಮ್ಮ ಅಲಿಯಾಸ್ ರೂಪಾ (18) ಮತ್ತು ಪ್ರಕಾಶ್ ಅಲಿಯಾಸ್ ಇಮ್ರಾನ್ನ ಪತ್ನಿ ಗೀತಾ (24) ಬಂಧಿತರು.
ಇವರು ಅಲೆಮಾರಿ ಜನಾಂಗದವರಾಗಿದ್ದು, ಬೇರೆ ಬೇರೆ ಕಡೆ ಭಿಕ್ಷೆ ಎತ್ತುವುದು, ಮನೆ, ತೋಟದ ಕೆಲಸಕ್ಕೆ ಹಾಜರಾಗುವುದು, ಈ ಸಂದರ್ಭದಲ್ಲಿ ತಮ್ಮತ್ತ ಆಕರ್ಷಿತರಾಗುವ ವ್ಯಕ್ತಿಗಳ ಮನೆಗೆ ಪ್ರವೇಶಿಸಿ ಅವರನ್ನು ದೋಚುವುದು ಇವರ ಕಸುಬು.
ಉಪ್ಪಿನಂಗಡಿ ದೇಗುಲದ ಪರಿಸರದಲ್ಲಿ ಇವರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ವಶಕ್ಕೆ ಪಡೆದು ಅವರಲ್ಲಿದ್ದ ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ ಚಿನ್ನದ ರೋಪ್ ಚೈನ್, 4 ಚಿನ್ನದ ಉಂಗುರಗಳು, 3 ಚಿನ್ನದ ಕಡಗಗಳು, 2 ಮೊಬೈಲ್, 3 ಬ್ಯಾಗ್ ಹಾಗೂ ಬಟ್ಟೆ ಬರೆಗಳು ಪತ್ತೆಯಾಗಿವೆ. ತನಿಖೆ ನಡೆಸಿದಾಗ, ಪತ್ತೆಯಾದ ವಸ್ತುಗಳನ್ನು ಮಂಗಳೂರಿನ ಬಜಾಲಿನ ರಿಕ್ಷಾ ಚಾಲಕರೊಬ್ಬರಿಂದ ಲೂಟಿ ಮಾಡಿದ್ದೆಂದು ಒಪ್ಪಿಕೊಂಡರು.
ಉಪ್ಪಿನಂಗಡಿಯಲ್ಲಿ ಕಲಿತವಳು
ಗುಂಪಿನಲ್ಲಿದ್ದ ಅವಿವಾಹಿತ ಯುವತಿ ತನ್ನ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿಯ ಸರಕಾರಿ ಶಾಲೆಯಲ್ಲಿ ಪೂರೈಸಿದ್ದು, ಇಲ್ಲಿನ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಒಂಟಿ ಪುರುಷರಿರುವ ಶ್ರೀಮಂತ ಮನೆಯೊಂದರ ಮೇಲೆ ನಿಗಾ ಇರಿಸಿದ್ದರೆನ್ನಲಾಗಿದೆ.
ಎಸ್.ಐ. ನಂದ ಕುಮಾರ್ ಅವರೊಂದಿಗೆ ಸಿಬಂದಿ ವರ್ಗದ ದೇವದಾಸ್, ಸಂಗಯ್ಯ ಕಾಳೆ, ಹರಿಶ್ಚಂದ್ರ, ಗಣೇಶ್, ಚೋಮ, ಪ್ರತಾಪ್, ಜಗದೀಶ್, ಶ್ರೀಧರ, ಮನೋಹರ ಪಿ. ಸಿ., ಇರ್ಷಾದ್, ಸಚಿನ್, ನಾರಾಯಣ ಗೌಡ, ಯಶೋದಾ, ರೇಣುಕಾ, ನಿವೇದಿತಾ, ಪ್ರೀತಿದೀಪಾ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ
Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ