ತೆಲಂಗಾಣ: ಲಿಂಗಾಂತರಿ ಮಹಿಳಾ ಅಭ್ಯರ್ಥಿ ನಾಪತ್ತೆ; ಅಪಹರಣ ಶಂಕೆ
Team Udayavani, Nov 28, 2018, 10:31 AM IST
ಹೈದರಾಬಾದ್ : ಡಿಸೆಂಬರ್ 7ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐಎಂ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ 32ರ ಹರೆಯದ ಲಿಂಗಾಂತರಿ ಮಹಿಳಾ ಕಾರ್ಯಕರ್ತೆ ನಿನ್ನೆ ಮಂಗಳವಾರದಿಂದ ನಾಪತ್ತೆಯಾಗಿದ್ದು ಆಕೆಯನ್ನು ಅಪಹರಿಸಲಾಗಿದೆ ಎಂದು ಶಂಕಿಸಲಾಗಿದೆ.
ಸಿಪಿಎಂ ನೇತೃತ್ವದ ಬಹುಜನ್ ಎಡ ರಂಗ ಅಥವಾ ಬಿಎಲ್ಎಫ್ ನ ಟಿಕೆಟ್ನಿಂದ ನಗರದ ಗೋಶಮಹಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಚಂದ್ರಮುಖೀ M ಎಂಬ ಲಿಂಗಾಂತರಿ ಮಹಿಳಾ ಕಾರ್ಯಕರ್ತೆ ಮಂಗಳವಾರದಿಂದ ತನ್ನಮನೆಯಿಂದ ನಾಪತ್ತೆಯಾಗಿದ್ದಾಳು. ಈಕೆ ಹಿರಿಯ ಕಾಂಗ್ರೆಸ್ ಅಭ್ಯರ್ಥಿ ಮುಖೇಶ್ ಗೌಡ್ ಮತ್ತು ಬಿಜೆಪಿ ನಾಯಕ ಟಿ ರಾಜಾ ಸಿಂಗ್ ಅವರೆದುರು ಸ್ಪರ್ಧಿಸುತ್ತಿದ್ದಾರೆ.
ಚಂದ್ರಮುಖೀ ಅವರ ಚುನಾವಣಾ ಪ್ರಚಾರ ಕಾರ್ಯಕ್ಕೆ ನೆರವಾಗಲು ಲಿಂಗಾಂತರಿ ಸಮುದಾಯದವರು ಬಂದಿದ್ದರು. ಅವರಿಗೆ ಚಂದ್ರಮುಖೀ ನಾಪತ್ತೆಯಾಗಿರುವುದು ಕಗ್ಗಂಟಾಗಿದೆ.
ಚಂದ್ರಮುಖೀ ಬೆಂಬಲಿಗರು ಆಕೆ ನಾಪತ್ತೆಯಾಗಿರುವ ಬಗ್ಗೆ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. “ಚಂದ್ರಮುಖೀ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ; ಆಕೆ ನಾಪತ್ತೆಯಾಗಿರುವುದು ಆಕೆಯ ತಾಯಿಗೆ ತೀವ್ರ ಆತಂಕ ಮೂಡಿಸಿದೆ. ಆಕೆಯನ್ನು ಅಪಹರಿಸಿರಬಹುದೆಂದು ಶಂಕಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್