ಅಂಬಿ ಸಮಾಧಿಗೆ ಹಾಲು,ತುಪ್ಪ; ಅಭಿಮಾನಿಗಳಿಗೂ ಚಿತಾಭಸ್ಮ!
Team Udayavani, Nov 28, 2018, 10:50 AM IST
ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ನಟ ರೆಬೆಲ್ ಸ್ಟಾರ್ ಅವರ ಸಮಾಧಿಗೆ ಬುಧವಾರ ಹಾಲು ತುಪ್ಪ ಬಿಡಲಾಯಿತು.ಅಸ್ಥಿ ಸಂಗ್ರಹಣ ,ಚಿತಾಭಸ್ಮವನ್ನು ಸಂಗ್ರಹಿಸಿ ಉಳಿದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ.
ಅರ್ಚಕರ ನೇತೃತ್ವದಲ್ಲಿ ಪುತ್ರ ಅಭಿಷೇಕ್ ಅವರು ಧಾರ್ಮಿಕ ವಿಧಿಗಳನ್ನು ನಡೆಸಿದರು. , ಅಂಬರೀಶ್ ಅವರ ಪತ್ನಿ ಸುಮಲತಾ ಅವರೂ ಕುಟುಂಬದ ಇತರ ಸದಸ್ಯರೊಂದಿಗೆ ಆಗಮಿಸಿದ್ದರು
ಅಭಿಮಾನಿಗಳಿಗೂ ಚಿತಾಭಸ್ಮ !
ಇಂದೂ ಕಂಠೀರವ ಸ್ಟುಡಿಯೋ ಬಳಿ ಸಾವಿರಾರು ಮಂದಿ ಅಂಬರೀಶ್ ಅವರ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಧಾರ್ಮಿಕ ವಿಧಿಗಳು ಮುಗಿಯುವ ವರೆಗೆ ಸಮಾಧಿ ಬಳಿ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಚಿತಾಭಸ್ಮವನ್ನು ಅಭಿಷೇಕ್ ಅವರು ಕೆಲ ಅಭಿಮಾನಿಗಳಿಗೆ ವಿತರಿಸಿದರು. ಚಿತಾಭಸ್ಮ ಪಡೆದ ಅಭಿಮಾನಿಗಳು ಸಂಭ್ರಮದಲ್ಲಿ ತೇಲಾಡಿ ನೆಚ್ಚಿನ ನಾಯಕರನ್ನು ನೆನೆದು ಕಣ್ಣೀರಿಟ್ಟರು. ಅಭಿಷೇಕ್ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಅಂಬರೀಶ್ ನಿಧನವಾದ ದಿನದಿಂದಲೂ ಎಲ್ಲ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿದ್ದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಅಂಬರೀಶ್ ಆಪ್ತ ಸೀನಣ್ಣ, ನಟ ದೊಡ್ಡಣ್ಣ, ದರ್ಶನ್ ಸೇರಿ ಹಲವು ಗಣ್ಯರು ಮತ್ತು ಸಂಬಂಧಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಚಿತ್ರಂಗದ ನೂರಾರು ಮಂದಿ ಗಣ್ಯರು ಆಗಮಿಸಿದ್ದರು.
ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ