ಕೆಂಪು, ಕುಮ್ಟೆ ಮೆಣಸು ಗಿಡಗಳಿಗೆ ಹೆಚ್ಚಿದ ಬೇಡಿಕೆ


Team Udayavani, Nov 29, 2018, 10:19 AM IST

29-november-2.gif

ಪುತ್ತೂರು: ರೈತರ ಪಾಲಿನ ಉಪಬೆಳೆ ಮೆಣಸಿನ ಗಿಡಗಳಿಗೆ ಈಗ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. 30 ಗಿಡಗಳ ಒಂದು ಕಟ್ಟು 40 ರೂ.ನಿಂದ 50 ರೂ.ವರೆಗೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ. ವಿಟ್ಲ, ಅನಂತಾಡಿ ಭಾಗಗಳಿಂದ ಪುತ್ತೂರು ಸಂತೆ, ಮಾರುಕಟ್ಟೆಗೆ ಮೆಣಸಿನ ಗಿಡಗಳನ್ನು ತಂದು ಮಾರಾಟ ಮಾಡುತ್ತಿದ್ದು, ಉತ್ತಮ ಧಾರಣೆಯೂ ಸಿಗುವಂತಾಗಿದೆ. ಶ್ರಮಕ್ಕೆ ತಕ್ಕ ಪರಿಹಾರ ಪಡೆದ ಸಂತಸ ರೈತರ ಮುಖಗಳಲ್ಲಿದ್ದರೆ, ಗಿಡಗಳನ್ನು ಖರೀದಿ ಮಾಡುವ ಮಂದಿಯೂ ತಮಗೆ ಉತ್ತಮ ಗಿಡಗಳು ದೊರೆತಿವೆ ಎನ್ನುವ ಖುಷಿಯಲ್ಲಿದ್ದಾರೆ.

ಹಳ್ಳಿಯಲ್ಲಿ ಸಾಮಾನ್ಯವಾಗಿ ನವೆಂಬರ್‌ ತಿಂಗಳಿನಲ್ಲಿ ರೈತರು ಮೆಣಸಿನ ಗಿಡಗಳನ್ನು ನೆಟ್ಟು ತಮ್ಮ ಮನೆಗೆ ಬೇಕಾದಷ್ಟು ಮೆಣಸು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಹಾಗಾಗಿ ಕೆಂಪು ಮೆಣಸು (ಊರಿನ ಮೆಣಸು) ಹಾಗೂ ಕುಮ್ಟೆ ಮೆಣಸಿನ ಗಿಡಗಳಿಗೆ ಈಗ ಉತ್ತಮ ಬೇಡಿಕೆ ಕೇಳಿಬರುತ್ತಿದೆ. ಇದನ್ನು ಅರಿತುಕೊಂಡ ಕೆಲವು ರೈತರು ಮೆಣಸಿನ ಗಿಡಗಳನ್ನು ಮಾರಾಟ ಮಾಡುತ್ತಾರೆ.

ಅಕ್ಟೋಬರ್‌ ತಿಂಗಳಲ್ಲಿ ಪಾತಿ ತಯಾರು ಮಾಡಿ ಮೆಣಸಿನ ಬೀಜಗಳನ್ನು ಬಿತ್ತಲಾಗುತ್ತದೆ. ವಾರದೊಳಗೆ ಗಿಡಗಳು ಮೊಳೆತು ಗಿಡಗಳಾಗುತ್ತವೆ. 25ರಿಂದ 30 ದಿನಗಳೊಳಗಾಗಿ ಈ ಗಿಡಗಳು ಮಾರಾಟಕ್ಕೆ ಸಿದ್ಧಗೊಳ್ಳುತ್ತವೆ. ಅನಂತರ ಈ ಮೆಣಸಿನ ಗಿಡಗಳನ್ನು ಪುತ್ತೂರು, ಉಪ್ಪಿನಂಗಡಿ, ಮಾಣಿ, ವಿಟ್ಲ ಮುಂತಾದ ಕಡೆಗಳಲ್ಲಿ ನಡೆಯುವ ವಾರದ ಸಂತೆಗಳಿಗೆ ಕೊಂಡು ಹೋಗಿ ತಾವೇ ಮಾರಾಟ ಮಾಡುತ್ತಾರೆ. ಕೆಲವು ರೈತರು ಗಿಡಗಳನ್ನು ವ್ಯಾಪಾರಿಗಳಿಗೆ ಮಾರಾಟ ಮಾಡುವುದೂ ಇದೆ. ಆದರೆ ಗಿಡಗಳನ್ನು ತಯಾರು ಮಾಡುವವರೇ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ.

ತರಕಾರಿ ಬೆಳೆಗೆ ಸೂಕ್ತ
ಏಣೆಲು ಕೊಯಿಲು ಮುಗಿಸಿದ ರೈತರಿಗೆ ಇದೀಗ ತಮ್ಮ ಗದ್ದೆಗಳಲ್ಲಿ ತರಕಾರಿ ಬೆಳೆಯಲು ಸೂಕ್ತ ಕಾಲ. ಹಳ್ಳಿಯಲ್ಲಿ ಗದ್ದೆಗಳನ್ನು ಉಳಿಸಿಕೊಂಡ ಹಾಗೂ ಸ್ವಲ್ಪ ಸ್ಥಳ ಇರುವ ರೈತರು ತರಕಾರಿ ಬೆಳೆಸುವಲ್ಲಿ ಹಿಂದೇಟು ಹಾಕುವುದಿಲ್ಲ.

ವಾರದ ಸಂತೆಗಳಿಂದ ಮೆಣಸಿನ ಗಿಡಗಳನ್ನು ಖರೀದಿಸಿ ತಮ್ಮ ಗದ್ದೆಗಳಲ್ಲಿ ಸಾಲು ತೆಗೆದು ಈ ಗಿಡಗಳನ್ನು ನಾಟಿ ಮಾಡುತ್ತಾರೆ. ಅನಂತರ ಅದಕ್ಕೆ ಗೊಬ್ಬರ ನೀಡಿ ಬೆಳೆಸುತ್ತಾರೆ. ಸುಮಾರು 2 ತಿಂಗಳ ಬಳಿಕ ಮೆಣಸು ರೈತರ ಕೈಗೆ ಬರುತ್ತದೆ. ಕುಟುಂಬಕ್ಕೆ ಬೇಕಾದಷ್ಟು ಮೆಣಸು ಬೆಳೆದುಕೊಳ್ಳುವ ರೈತ ಆ ಮೂಲಕ ಸ್ವಾವಲಂಬಿಯಾಗುತ್ತಾನೆ.

ಕೆಲವು ರೈತರು ತಮ್ಮ ಮನೆಗಳಲ್ಲಿಯೇ ಮೆಣಸಿನ ಗಿಡಗಳನ್ನು ಪಾತಿ ಮಾಡಿ ತಯಾರು ಮಾಡಿಕೊಳ್ಳುವುದೂ ಇದೆ. ಆದರೆ ಮೆಣಸಿನ ಬೀಜ ಹಾಕಿ ಗಿಡ ಗಳನ್ನು ತಯಾರು ಮಾಡುವುದು ಸ್ವಲ್ಪ ಕಷ್ಟದಾಯಕ ಕೆಲಸ. ಇದಕ್ಕೆ ಇರುವೆ ಕಾಟ ಕಾಡುವುದರಿಂದ ಬಹುತೇಕ ರೈತರು ಮೆಣಸಿನ ಗಿಡಗಳಿಗಾಗಿ ಸಂತೆಗಳನ್ನೇ ಅವಲಂಬಿಸುತ್ತಾರೆ.

ನವೆಂಬರ್‌ ತಿಂಗಳು ಪೂರ್ತಿ ಈ ಮೆಣಸಿನ ಗಿಡಗಳಿಗೆ ಬೇಡಿಕೆ ಇರುತ್ತದೆ. ಒಬ್ಬೊಬ್ಬರು ಕನಿಷ್ಠ 10ರಿಂದ 15 ಸಾವಿರ ಗಿಡಗಳನ್ನು ಬೆಳೆಸಿ ಮಾರಾಟ ಮಾಡುತ್ತಾರೆ. ಇದರಿಂದ ಆರ್ಥಿಕ ಶಕ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ. ಅಡಿಕೆ, ಭತ್ತದ ಬೆಳೆಗಳ ನಡುವೆ ಇದೊಂದು ತಾತ್ಕಾಲಿಕ ಉಪ ಬೆಳೆಯಾಗಿ ರೈತರ ಪಾಲಿಗೆ ಹಣ ತರುವ ದಾರಿಯಾಗಿದೆ.

ಬಿಸಿಲು ಬೇಕು
ಬಳ್ಳಾರಿ ಕಡೆಯಿಂದ ಹಸಿ ಮೆಣಸು ಮಾರುಕಟ್ಟೆಗೆ ಬರುವುದು ತಡ ಆಗುವುದರಿಂದ ಮೆಣಸಿನ ಗಿಡಗಳಿಗೆ ಬೇಡಿಕೆ ಇದೆ. ಮಳೆಗಾಲದ ಅನಂತರ ಮೆಣಸಿನ ಗಿಡಗಳನ್ನು ನೆಡಲು ಉತ್ತಮ ವಾತಾವರಣ ಇರುತ್ತದೆ. ಇದಕ್ಕೆ ಬಿಸಿಲು ಬೇಕು, ನೆರಳು ಇರಬಾರದು.
ಎಚ್‌.ಆರ್‌. ನಾಯಕ್‌,
ಉಪ ನಿರ್ದೇಶಕರು,ತೋಟಗಾರಿಕಾ ಇಲಾಖೆ 

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

1——dsadsa

Madikeri; ಮೊಬೈಲ್ ನಿಂದ ಬಡಿದು ಅತ್ತೆ ಹತ್ಯೆಗೈದು ಕಥೆ ಕಟ್ಟಿದ ಸೊಸೆ!

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.