ಜೋಡುಕಟ್ಟೆ ಜಂಕ್ಷನ್: ಹಂಪ್ಸ್ ಅಳವಡಿಕೆ
Team Udayavani, Dec 7, 2018, 2:35 AM IST
ಉಡುಪಿ: ಜೋಡುಕಟ್ಟೆ- ಅಜ್ಜರಕಾಡು ರಸ್ತೆ ಜಂಕ್ಷನ್ನಲ್ಲಿ (ಡಯಾನ ಹೊಟೇಲ್ ಸಮೀಪ) ಹಂಪ್ಸ್ ಮತ್ತು ಟ್ರಾಫಿಕ್ ಕೋನ್ಗಳು ಕಿತ್ತುಹೋಗಿ ಉಂಟಾಗಿರುವ ಸಂಚಾರ ಸಮಸ್ಯೆ ಕುರಿತು ‘ಉದಯವಾಣಿ’ ಪ್ರಕಟಿಸಿದ ವರದಿಗೆ ಪೊಲೀಸ್ ಇಲಾಖೆ ಸ್ಪಂದಿಸಿ ಕ್ರಮ ಕೈಗೊಂಡಿದೆ. ಹಂಪ್ಸ್ ಅಳವಡಿಕೆಯಿಂದಾಗಿ ವಾಹನಗಳು ವೇಗ ತಗ್ಗಿಸುತ್ತಿವೆ. ಕೋನ್ಸ್ಗಳನ್ನು ಅಳವಡಿಸಿರುವುದರಿಂದ ಅಜ್ಜರಕಾಡು ಕಡೆಯಿಂದ ಬರುವ ಹಾಗೂ ಅಜ್ಜರಕಾಡು ಕಡೆಗೆ ಹೋಗುವ ವಾಹನಗಳು ವಿಭಾಗವಾಗಿ ಸಾಗಲು ಅನುಕೂಲವಾಗಿದೆ.
ಇಲ್ಲಿನ ತಿರುವಿನಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವುದನ್ನು ತಡೆಯಬೇಕು. ಇಲ್ಲಿನ ಅಕ್ಕಪಕ್ಕದ ಬಸ್ ನಿಲ್ದಾಣಗಳಲ್ಲಿ ಮಾತ್ರ ಬಸ್ ನಿಲುಗಡೆಯಾಗುವಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಇದೆ. ಅಂತೆಯೇ ಹಳೆ ತಾಲೂಕು ಕಚೇರಿ ಎದುರು ಆಸ್ಪತ್ರೆಯ ಪಕ್ಕದ ಬಸ್ ನಿಲ್ದಾಣದ ಮುಂಭಾಗವೇ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಬಸ್ಗಳ ನಿಲುಗಡೆಗೆ ತೊಂದರೆಯಾಗಿದೆ. ಸಂಚಾರ ಸ್ಥಗಿತಕ್ಕೆ ಕಾರಣವಾಗುತ್ತಿದೆ. ಮಾತ್ರವಲ್ಲದೆ ರಸ್ತೆ ದಾಟುವವರಿಗೆ ಸಮಸ್ಯೆಯಾಗಿದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಈಡೇರಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ
ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ
Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ
Bengaluru: ಫ್ಲೈಓವರ್ಗಳಲ್ಲೂ ಕಸ ಸುರಿಯುವ ವಾಹನ ಸವಾರರು