ಹೊಸತನವಿಲ್ಲ ಹಳೆಯದೇ ಎಲ್ಲಾ


Team Udayavani, Dec 16, 2018, 11:22 AM IST

viraj.jpg

ಕಾಲೇಜ್‌ನಲ್ಲಿ ಸಭ್ಯವಾಗಿ ಓದಿಕೊಂಡಿರುವ ಹುಡುಗ. ಅದೇ ಕಾಲೇಜಿಗೆ ಅಮೆರಿಕಾದಿಂದ ಬಂದು ಸೇರುವ ಹುಡುಗಿ. ಇಬ್ಬರಿಗೂ ಒಂದೇ ನೋಟದಲ್ಲಿ ಪ್ರೀತಿ. ಇಬ್ಬರ ಪ್ರೀತಿಗೂ ಮೊದಲು ಮನೆಯವರಿಂದ ಗ್ರೀನ್‌ ಸಿಗ್ನಲ್‌. ಇನ್ನೇನು ನಿಶ್ಚಿತಾರ್ಥ ಮುಗಿದು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಸಣ್ಣ ಕಿರಿಕ್‌ನಿಂದಾಗಿ ಮದುವೆ ಮುರಿದು ಬೀಳುತ್ತದೆ. ಮತ್ತೆ ಹೇಗೋ ಎರಡು ಕುಟುಂಬಗಳು ಒಂದಾದವು ಎನ್ನುವಷ್ಟರಲ್ಲಿ ಮತ್ತೂಂದು ಕಿರಿಕ್‌.

ಅದರಿಂದ ಮತ್ತೆ ಮದುವೆ ಮುರಿದು ಬೀಳುತ್ತದೆ. ಮತ್ತೆ ಈ ಕುಟುಂಬಗಳನ್ನು ಒಂದುಗೂಡಿಸಲು ಪಡಬಾರದ ಹರಸಾಹಸ. ಅಷ್ಟರೊಳಗೆ ಎದುರಿಗಿದ್ದ ಪ್ರೇಕ್ಷಕ ಸುಸ್ತೋ ಸುಸ್ತು! ಇದಿಷ್ಟು ಈ ವಾರ ತೆರೆಗೆ ಬಂದಿರುವ “ವಿರಾಜ್‌’ ಚಿತ್ರದ ಕಥಾಹಂದರ. “ವಿರಾಜ್‌’ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಕನ್ನಡದಲ್ಲಿ ಕಳೆದ ನಾಲ್ಕು ದಶಕಗಳಿಂದ ಬಂದಂತಹ  ಹತ್ತಾರು ಚಿತ್ರಗಳ ಒಂದೊಂದು ದೃಶ್ಯಗಳನ್ನು ಭಟ್ಟಿ ಇಳಿಸಿ ಮಾಡಿದ ಚಿತ್ರ.

ಆದರೆ ಇಂಥ ಭಟ್ಟಿ ಇಳಿಸುವ ಕೆಲಸವನ್ನೂ ಕೂಡ ಪ್ರೇಕ್ಷಕರು ರೋಸಿ ಹೋಗುವಂತೆ ಮಾಡಿದ್ದಾರೆ ನಿರ್ದೇಶಕರು. ಹತ್ತು ನಿಮಿಷದಲ್ಲಿ ಹೇಳಿ ಕೈ ತೊಳೆದುಕೊಳ್ಳಬಹುದಾದ ಕಥೆಯನ್ನು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವ ಸಲುವಾಗಿಯೇ ಎರಡೂ ಕಾಲು ಗಂಟೆ ಎಳೆದಂತಿದೆ. ಹೊಸತನದ ಕಥೆ, ಆಕರ್ಷಕ ನಿರೂಪಣೆ, ಚಿತ್ರದ ಮೇಲೆ ಬಿಗಿಯಾದ ಹಿಡಿತವಿಲ್ಲದಿದ್ದರೆ ಒಂದು ಚಿತ್ರ ನಿರ್ದೇಶಕನ, ನಿರ್ಮಾಪಕನ ಹಿಡಿತಕ್ಕೆ ಸಿಗದೆ ಹೇಗೆಲ್ಲ ಹಳಿ ತಪ್ಪಿ ಹೋಗಬಹುದು.

ತೆರೆಮೇಲೆ ಹೇಗೆಲ್ಲ ಅಪಘಾತ ಆಗಬಹುದು. ನೋಡುಗರಿಗೂ ಹೇಗೆ ಆಘಾತ ಮಾಡಬಹುದು ಎಂಬುದಕ್ಕೆ ವಿರಾಜ್‌ ಚಿತ್ರ ಸದ್ಯದ ತಾಜಾ ಉದಾಹರಣೆ. ಇನ್ನು ಚಿತ್ರದ ನಾಯಕ ವಿದ್ಯಾಭರಣ್‌ ಅಭಿನಯ ದೇವರಿಗೇ ಪ್ರೀತಿ! ಆ್ಯಕ್ಷನ್‌, ರೊಮ್ಯಾನ್ಸ್‌, ಎಮೋಷನ್ಸ್‌ ಯಾವ ದೃಶ್ಯಗಳಿಗೂ ಭೇದ-ಭಾವ ಮಾಡದೇ, ಆರಂಭದಿಂದ ಅಂತ್ಯದವರೆಗೂ ಅದೇ ಪೇಲವ ಅಭಿನಯ ಮುಂದುವರೆಸಿಕೊಂಡು ಹೋಗಿದ್ದಾರೆ.

ಒಂದೇ ಮಾತಿನಲ್ಲಿ ಹೇಳುವುದಾದರೆ ಚಿತ್ರದ ನಾಯಕ ತೆರೆಮೇಲೆ ನಿರ್ಲಿಪ್ತ – ನಿರ್ಭಾವುಕ. ಇನ್ನು ಚಿತ್ರದ ನಾಯಕಿ ಶಿರಿನ್‌ ತೆರೆಮೇಲೆ ಅಂದವಾಗಿ ಕಂಡರೂ, ಅಂದಕ್ಕೊಪ್ಪುವ ಅಭಿನಯ ನೀಡಲು ಸಾಧ್ಯವಾಗಿಲ್ಲ. ಹಿರಿಯ ನಟ ದೇವರಾಜ್‌, ಜೈಜಗದೀಶ್‌, ವಿನಯಾ ಪ್ರಸಾದ್‌, ಟೆನ್ನಿಸ್‌ ಕೃಷ್ಣ ಮೊದಲಾದ ಕಲಾವಿದರ ದೊಡ್ಡ ತಾರಾಬಳಗವಿದ್ದರೂ, ಯಾರನ್ನೂ ಸಮರ್ಥವಾಗಿ ಬಳಸಿಕೊಂಡಿಲ್ಲ. ಹಾಗಾಗಿ ಯಾರ ಪಾತ್ರಗಳೂ ಮನಸ್ಸಿನಲ್ಲಿ ಉಳಿಯುವುದಿಲ್ಲ. 

ಇನ್ನು ಚಿತ್ರದಲ್ಲಿ ಕೊಂಚ ಸಮಾಧಾನ ತರುವ ಅಂಶವೆಂದರೆ ಛಾಯಾಗ್ರಹಣ. ಚಿತ್ರದ ದೃಶ್ಯಗಳನ್ನು ಮಲ್ಲಿಕಾರ್ಜುನ್‌ ಕ್ಯಾಮರಾದಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ಚಿತ್ರದ ಸಂಕಲನ ಕೆಲಸ ಛಾಯಾಗ್ರಹಣಕ್ಕೆ ಪೂರಕವಾಗಿರುವುದಕ್ಕಿಂತ, ಮಾರಕವಾಗಿದ್ದೆ ಹೆಚ್ಚು ಎಂಬಂತೆ ಅನಿಸುತ್ತದೆ. ಇನ್ನು ಚಿತ್ರದ ಹಿನ್ನೆಲೆ ಸಂಗೀತ, ಹಾಡುಗಳು, ಸಾಹಿತ್ಯ, ಸಂಭಾಷಣೆ ಮೊದಲಾದ ಅಂಶಗಳ ಬಗ್ಗೆ ಮಾತನಾಡದಿರುವುದು ಒಳಿತು. 

ಚಿತ್ರ: ವಿರಾಜ್‌
ನಿರ್ದೇಶನ: ನಾಗೇಶ್‌ ನಾರದಾಸಿ
ನಿರ್ಮಾಣ: ಮಂಜುನಾಥ ಸ್ವಾಮಿ. ಎನ್‌
ತಾರಾಗಣ: ವಿದ್ಯಾಭರಣ್‌, ಶಿರಿನ್‌, ನಿಖಿತಾ, ದೇವರಾಜ್‌, ಜೈಜಗದೀಶ್‌, ವಿನಯಾ ಪ್ರಸಾದ್‌, ಸ್ವಾತಿ, ಟೆನ್ನಿಸ್‌ ಕೃಷ್ಣ, ಕಡ್ಡಿಪುಡಿ ಚಂದ್ರು, ಉಗ್ರಂ ಮಂಜು ಮತ್ತಿತರರು. 

* ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!

ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ

Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

7-bng-crime

Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ

Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ

Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!

ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!

ಗಾಯಿತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್ ರೋಡ್ ಶೋ

Davanagere; ಗಾಯಿತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್ ರೋಡ್ ಶೋ

8-

KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.