ಕಾರ್ ಸೆಕ್ಸ್ ರ್ಯಾಕೆಟ್ ಭೇದಿಸಿದ ನಾಗಪುರ ಪೊಲೀಸರು!
Team Udayavani, Dec 16, 2018, 3:43 PM IST
ನಾಗಪುರ: ಈತನಕ ನೀವು ಹೊಟೇಲ್ಗಳಲ್ಲಿ ಅಥವಾ ಕಟ್ಟಡಗಳಲ್ಲಿ ನಡೆಯುತ್ತಿರುವ ಸೆಕ್ಸ್ ರ್ಯಾಕೆಟ್ಗಳ ಬಗ್ಗೆ ಕೇಳಿರುವಿರಿ. ಆದರೆ, ನಾಗಪುರದ ಅಪರಾಧ ಶಾಖೆ ಪೊಲೀಸರು ಕಾರಿನಲ್ಲಿ ನಡೆಯುತ್ತಿದ್ದ ಸೆಕ್ಸ್ ರ್ಯಾಕೆಟ್ವೊಂದನ್ನು ಬಹಿರಂಗಪಡಿಸಿ ಅಸಾಮಾನ್ಯ ಘಟನೆಯೊಂದನ್ನು ಬೆಳಕಿಗೆ ತಂದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಎರಡು ಏಜೆಂಟ್ಗಳನ್ನು ಮತ್ತು ಓರ್ವ ಹುಡುಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ದೇಹ ವ್ಯಾಪಾರ ದಂಧೆ ನಡೆಸಲು ಕಾರಿನಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕಾರಿನಲ್ಲಿ ಸೆಕ್ಸ್ ರ್ಯಾಕೆಟ್ ನಡೆಯುತ್ತಿರುವ ಬಗ್ಗೆ ಸಣ್ಣ ಮಾಹಿತಿಯನ್ನು ಪಡೆದ ಜರೀಪಟ್ಕಾ ಪೊಲೀಸರು ತಂಡವನ್ನು ರಚಿಸಿ ಜರೀಪಟ್ಕಾ ಪ್ರದೇಶದಲ್ಲಿರುವ ದೀಪಕ್ ನಗರದ ಮೇಲೆ ದಾಳಿ ನಡೆಸಿ ಸೆಕ್ಸ್ ರ್ಯಾಕೆಟ್ ಅನ್ನು ಭೇದಿಸಿದ್ದಾರೆ.
ಪೊಲೀಸ್ ತಂಡವು ಸ್ಥಳಕ್ಕೆ ನಕಲಿ ಗ್ರಾಹಕನನ್ನು ಕಳುಹಿಸಿತು. ಇಬ್ಬರು ಏಜೆಂಟ್ಗಳು ಆತನಿಂದ ಹಣವನ್ನು ತೆಗೆದುಕೊಂಡು ಹತ್ತಿರದ ಕಾರಿಗೆ ಕಳುಹಿಸಿದರು. ಇದಾದ 5 ರಿಂದ 10 ನಿಮಿಷಗಳ ಬಳಿಕ ಓರ್ವ ಹುಡುಗಿ ಕಾರಿನೊಳಗೆ ಪ್ರವೇಶಿಸಿದಳು. ಅನಂತರ ಪೊಲೀಸರ ತಂಡವು ಕಾರಿನ ಮೇಲೆ ದಾಳಿ ನಡೆಸಿ ಆ ಹುಡುಗಿಯನ್ನು ವಶಕ್ಕೆ ತೆಗೆದುಕೊಂಡಿತು ಮತ್ತು ದಲ್ಲಾ ಳಿಗಳನ್ನು ಬಂಧಿಸಲಾಯಿತು.
ಆರೋಪಿಗಳನ್ನು ನಾಗಪುರ ನಿವಾಸಿಗಳಾದ ಯೋಗೇಶ್ ಶಾಹೂ(23) ಮತ್ತು ರಾಹುಲ್ ಗಾವೆ¤ಲ್(21) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿಗಳು ಕಾರಿನ ಹಿಂಭಾಗದ ಸೀಟನ್ನು ತೆಗೆದು ಅದರ ಸ್ಥಳದಲ್ಲಿ ಗ್ರಾಹಕರಿಗೆ ಹಾಸಿಗೆಯನ್ನು ಇರಿಸಿದ್ದರು. ದೀಪಕ್ ನಗರದ ನಿರ್ಜನ ಪ್ರದೇಶದಲ್ಲಿ ಕಾರನ್ನು ಪಾರ್ಕ್ ಮಾಡಿ ದೇಹ ವ್ಯಾಪಾರ ದಂಧೆ ನಡೆಸುತ್ತಿದ್ದರು. ಬಂಧಿತರ ವಿರುದ್ಧ ಪೊಲೀಸರು ಐಪಿಸಿ ಕಾಯಿದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
MUST WATCH
ಹೊಸ ಸೇರ್ಪಡೆ
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ