ಪಾಕ್ ಪ್ರಧಾನಿ ಮಾಡಿ ಅಂತ ಆಗ್ರಹಿಸಿ ಟವರ್ ಏರಿದ
Team Udayavani, Dec 23, 2018, 2:33 PM IST
ಹಾವೇರಿ ಜಿಲ್ಲೆಯಲ್ಲಿ ಮಾತೆತ್ತಿದರೆ ಮರ, ಮೊಬೈಲ್ ಟವರ್ ಏರಿ ಪ್ರತಿಭಟಿಸುವ ವಿಚಿತ್ರ ಚಟ ಹೊಂದಿರುವ ಸಿಂಗ್ಲಿ ಬಸ್ಯಾ ಎಂಬ ಯುವಕನ ಹೆಸರನ್ನು ಅನೇಕರು ಕೇಳಿರಬಹುದು. ತನ್ನ ಮನೆಯ ವ್ಯಾಜ್ಯವಿರಲಿ, ರೈತರ ಸಮಸ್ಯೆಯಿರಲಿ ಮರ, ಟವರ್ ಏರಿ ಕುಳಿತು ಈತ ಆಗಾಗ ಸುದ್ದಿಯಾಗುತ್ತಿರುತ್ತಾನೆ.
ಇದೇ ಸಿಂಗ್ಲಿ ಬಸ್ಯನ ಅಣ್ತಮ್ಮ ಎನ್ನಬಹುದಾದ ವ್ಯಕ್ತಿಯೊಬ್ಬ ಪಾಕಿಸ್ಥಾನದಲ್ಲಿ ಶನಿವಾರ ಇಂಥದ್ದೇ ರಾದ್ಧಾಂತ ಸೃಷ್ಟಿಸಿದ್ದಾನೆ. ಪಾಕಿಸ್ಥಾನದ ಸರ್ಗೋದಾ ಪ್ರಾಂತ್ಯದವನಾದ ಈತ ಶನಿವಾರ ಮಧ್ಯಾಹ್ನ ಇಸ್ಲಾಮಾಬಾದ್ನ ಬ್ಲೂ ಏರಿಯಾದಲ್ಲಿರುವ ಮೊಬೈಲ್ ಟವರೊಂದನ್ನು ಹತ್ತಿ ಕುಳಿತು, ನನ್ನಲ್ಲಿ ಪಾಕಿಸ್ಥಾನದ ಆರ್ಥಿಕತೆ ಸುಧಾರಿಸುವ ಹೊಸ ಐಡಿಯಾಗಳಿವೆ. ಹಾಗಾಗಿ, ಕೂಡಲೇ ನನ್ನನ್ನು ಪಾಕಿಸ್ಥಾನದ ಪ್ರಧಾನಿ ಎಂದು ಘೋಷಿಸಬೇಕು ಅಥವಾ ಪ್ರಧಾನಿ ಇಮ್ರಾನ್ ಖಾನ್ ನನ್ನೊಂದಿಗೆ ಮಾತನಾಡಬೇಕು ಎಂದು ಪಟ್ಟು ಹಿಡಿಯಲಾರಂಭಿಸಿದ. ಕೊನೆಗೆ ಪೊಲೀಸರು ಮಿಮಿಕ್ರಿ ಕಲಾವಿದನ ಮೂಲಕ ಇಮ್ರಾನ್ ಖಾನ್ ಧ್ವನಿಯಲ್ಲಿ ಮಾತನಾಡಿಸಿದ್ದೂ ಆಯಿತು. ಆದ್ರೂ, ಆತ ಇಳಿಯಲು ಒಪ್ಪದಿದ್ದಾಗ ಸುಸ್ತಾದ ಪೊಲೀಸರು, ಕೊನೆಗೆ ಕ್ರೇನ್ ಬಳಸಿ ಈತನನ್ನು ಕೆಳಗಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ