ಇಮ್ರಾನ್ಗೆ ಕೈಫ್ “ಗೂಗ್ಲಿ’
Team Udayavani, Dec 26, 2018, 9:50 AM IST
ಹೊಸದಿಲ್ಲಿ: “ಅಲ್ಪ ಸಂಖ್ಯಾಕರನ್ನು ಹೇಗೆ ನೋಡಿಕೊಳ್ಳಬೇಕೆಂದು ಮೋದಿ ಸರಕಾರಕ್ಕೆ ನಾನು ಕಲಿಸುತ್ತೇನೆ’ ಎಂದು ಹೇಳಿದ್ದ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಿರುಗೇಟು ನೀಡಿದ್ದಾರೆ.
“”ಭಾರತ-ಪಾಕಿಸ್ಥಾನ ವಿಭಜನೆ ವೇಳೆ ಪಾಕಿಸ್ಥಾನದಲ್ಲಿ ಶೇ. 20 ಮಂದಿ ಅಲ್ಪಸಂಖ್ಯಾಕರಿದ್ದರು. ಈಗ ಅವರ ಸಂಖ್ಯೆ ಶೇ. 2ರಷ್ಟಿದೆ. ಆದರೆ, ಭಾರತದಲ್ಲಿ ಸ್ವಾತಂತ್ರಾé ನಂತರ ಅಲ್ಪಸಂಖ್ಯಾಕರ ಜನಸಂಖ್ಯೆ ಗಣನೀಯವಾಗಿ ಏರಿದೆ. ಇತರ ದೇಶಗಳಿಗೆ ಅಲ್ಪಸಂಖ್ಯಾಕರ ಕಲ್ಯಾಣದ ಬಗ್ಗೆ ಪಾಠ ಹೇಳಿಕೊಡುವ ದೇಶವಾಗಿ ಪಾಕಿಸ್ಥಾನವೇ ಕೊನೆಯದ್ದಾಗಿರಲಿ. ಮತ್ಯಾರೂ ನಮಗೆ ಪಾಠ ಹೇಳಿಕೊಡುವ ಆವಶ್ಯಕತೆಯಿಲ್ಲ” ಎಂದು ಅವರು ಟ್ವಿಟರ್ನಲ್ಲಿ ಕಿಡಿಕಾರಿದ್ದಾರೆ.
ಜಿನ್ನಾ ಸ್ಮರಣೆ ನೆಪದಲ್ಲಿ ಕಿಡಿ: ಇನ್ನೊಂದೆಡೆ, ಪಾಕಿಸ್ಥಾನ ಜನಕ ಮೊಹಮ್ಮದ್ ಅಲಿ ಜಿನ್ನಾ ಅವರ ಹುಟ್ಟು ಹಬ್ಬದ ನಿಮಿತ್ತ (ಡಿ. 25) ಟ್ವೀಟ್ ಮಾಡಿರುವ ಇಮ್ರಾನ್ ಖಾನ್ ಪುನಃ ಭಾರತವನ್ನು ಕೆಣಕಿ ದ್ದಾರೆ. “”ಭಾರತ ಸ್ವತಂತ್ರವಾದ ಮೇಲೆ ಹಿಂದೂಗಳೇ ಬಹು ಸಂಖ್ಯಾಕರಿರುವ ಆ ರಾಷ್ಟ್ರದಲ್ಲಿ ಮುಸ್ಲಿಮರಿಗೆ ಸಮಾನ ಸ್ಥಾನಮಾನ ಸಿಗಲಾರದೆಂದು ಜಿನ್ನಾ ಶತಪ್ರಯತ್ನ ಮಾಡಿ ಪಾಕಿಸ್ಥಾನದ ಉದಯಕ್ಕೆ ಕಾರಣರಾದರು. ಈಗಿನ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾಕರಾದ ಕ್ರಿಶ್ಚಿ ಯನ್ನರನ್ನು, ಹಿಂದೂಗಳನ್ನು ಸಮಾನವಾಗಿ ನೋಡಿಕೊಳ್ಳಲಾಗುತ್ತಿದೆ. ಆದರೆ, ಭಾರತದಲ್ಲಿ ಇಂಥ ಪರಿಸ್ಥಿತಿಯಿಲ್ಲ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
MUST WATCH
ಹೊಸ ಸೇರ್ಪಡೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ