ಮೋಡ- ಮಳೆ ಭೀತಿಯಲ್ಲಿ ಗೇರು ಬೆಳೆಗಾರರು
Team Udayavani, Jan 1, 2019, 8:50 PM IST
ಕುಂದಾಪುರ: ಕರಾವಳಿ ಭಾಗದ ಪ್ರಮುಖ ಬೆಳೆಗಳಲ್ಲಿ ಒಂದಾದ ಗೇರು ಕೃಷಿಗೆ ಈ ಬಾರಿ ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣ ಅಡ್ಡಿಯಾಗುವ ಆತಂಕ ಇಲ್ಲಿನ ಕೃಷಿಕರದ್ದು. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಸುಳ್ಯ, ಬೆಳ್ತಂಗಡಿ, ಉಡುಪಿ ಜಿಲ್ಲೆಯ ಕಾರ್ಕಳ ಭಾಗಗಳಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗಿತ್ತು. ಚಳಿಗಾಲದಲ್ಲೂ ಮೋಡ ಕವಿದ ವಾತಾವರಣ ಆವರಿಸಿರುವುದರಿಂದ ಕರಾವಳಿ ಭಾಗದ ಗೇರು ಬೀಜ ಕೃಷಿಕರು ಆತಂಕಿತರಾಗಿದ್ದಾರೆ. ಈ ರೀತಿಯ ಪ್ರತಿಕೂಲ ಹವಾಮಾನದಿಂದಾಗಿ ಗೇರು ಬೀಜದ ಹೂವು ಕರಟಿ ಹೋಗುವುದಲ್ಲದೆ, ಉದುರಿ ಹೋಗುತ್ತಿದೆ.
ನವೆಂಬರ್ – ಡಿಸೆಂಬರ್ ಸಮಯದಲ್ಲಿ ಗೇರು ಹೂವು ಬಿಟ್ಟು, ಹಣ್ಣಾಗುವ ಸಮಯ. ಜನವರಿ – ಫೆಬ್ರವರಿ ತಿಂಗಳಲ್ಲಿ ಗೇರು ಫಸಲು ಕೊಡುವ ಸಮಯ. ಎಪ್ರಿಲ್, ಕೆಲವೆಡೆ ಮೇ ವರೆಗೂ ಗೇರು ಬೀಜ ಕೊಯ್ಲು ಇರುತ್ತದೆ. ಈ ವೇಳೆ ಚಳಿ ಇದ್ದರೆ ಅನುಕೂಲ. ಆದರೆ ಈ ಬಾರಿ ಉತ್ತಮ ಹೂವು ಬಿಟ್ಟರೂ, ಪ್ರತಿಕೂಲ ಹವಾಮಾನದಿಂದಾಗಿ ಆ ಹೂವೆಲ್ಲ ಕರಟಿ ಹೋಗುತ್ತಿದೆ. ಇದರಿಂದ ಈ ಋತುವಿನಲ್ಲಿ ಗೇರು ಬೀಜದ ಇಳುವರಿ ಕಡಿಮೆಯಾಗುವ ಭೀತಿ ಗೇರು ಕೃಷಿಕರದ್ದು.
ದರ ಕುಸಿತ
ಈಗ ಕಳೆದ ವರ್ಷದ ಅಂದರೆ ಹಳೆ ಗೇರು ಬೀಜಗಳ ಮಾರಾಟ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಕೆ.ಜಿ. ಗೆ 150 ರೂ. ಇತ್ತು. ಈಗ ದರ ಕುಸಿತಗೊಂಡಿದ್ದು, ಕೆ.ಜಿ. ಗೆ 90 ರೂ. ಅಷ್ಟೇ ಇದೆ. ಜನವರಿಯಿಂದ ಹೊಸ ಗೇರು ಬೀಜ ಮಾರಾಟಕ್ಕೆ ಸಿದ್ಧವಾಗುತ್ತದೆ.
50 ಸಾವಿರ ಹೆಕ್ಟೇರ್ ಪ್ರದೇಶ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 33 ಸಾವಿರ ಹೆಕ್ಟೇರ್ ಪ್ರದೇಶ ಹಾಗೂ ಉಡುಪಿ ಜಿಲ್ಲೆಯಲ್ಲಿ 19,541 ಹೆಕ್ಟೇರ್ ಪ್ರದೇಶದಲ್ಲಿ ಗೇರು ಕೃಷಿ ಬೆಳೆಯಲಾಗುತ್ತದೆ. ಅಂದರೆ ಕರಾವಳಿ ಭಾಗದಲ್ಲಿ ಒಟ್ಟು 50 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಗೇರು ಕೃಷಿಯಿದೆ. ಆದರೆ ಈ ಬಾರಿ ಚಳಿಗಾಲವಾಗಿದ್ದರೂ, ಕಳೆದ ಕೆಲ ದಿನಗಳಿಂದ ಪ್ರತಿಕೂಲ ಹವಾಮಾನದಿಂದಾಗಿ ಗೇರು ಬೆಳೆಗೆ ಮೋಡ ಕವಿದಂತಾಗಿದೆ.
ಮೋಡದಿಂದ ನಷ್ಟ
ಮಳೆಯಾದರೂ ಪರ್ವಾಗಿಲ್ಲ. ಆದರೆ ಮೋಡ ಬಂದಲ್ಲಿ, ಗೇರು ಸಹಿತ ಯಾವುದೇ ಹೂವು ಬಿಡುವ ಕೃಷಿಗೆ ನಷ್ಟ. ಮೋಡಕ್ಕೆ ಗೇರು ಹೂವೆಲ್ಲ ಕರಟಿ ಹೋಗುತ್ತದೆ. ಹೂವು ಬಿಡುವ ಸಮಯದಲ್ಲಿಯೇ ಹೀಗೆ ಮೋಡವಾಗಿದ್ದು, ಈ ಸಲ ಹೆಚ್ಚಿನ ಪ್ರಮಾಣದಲ್ಲಿ ಗೇರು ಬೀಜವನ್ನು ನಿರೀಕ್ಷಿಸುವುದು ಕಷ್ಟ.
– ಕೃಷ್ಣ ನಾಯ್ಕ ತೆಂಕಬೆಟ್ಟು, ಬೆಳ್ವೆ
— ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್ ಕರೆ
Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ
Malpe ಬೀಚ್: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ
MUST WATCH
ಹೊಸ ಸೇರ್ಪಡೆ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ