ಸೀರೆ ಬದಲು ಪಾರ್ಸಲ್‌ ನಲ್ಲಿ ಬಂತು ಚಿಂದಿ ಬಟ್ಟೆ


Team Udayavani, Jan 5, 2019, 9:29 AM IST

vij-1.jpg

ಮುದ್ದೇಬಿಹಾಳ: ಇಲ್ಲಿನ ಆನ್‌ಲೈನ್‌ ಗ್ರಾಹಕ ಸಿದ್ದರಾಜ ಹೊಳಿ ಎನ್ನುವವರಿಗೆ ಅವರು ಬುಕ್‌ ಮಾಡಿದ್ದ ಸೀರೆ ಬದಲು ಪಾರ್ಸಲ್‌ನಲ್ಲಿ ಚಿಂದಿಬಟ್ಟೆ ಇಟ್ಟು ವಂಚಿಸಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದ್ದು ಈ ಕುರಿತು ಸಿದ್ದರಾಜ ಅವರು ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಆನ್‌ಲೈನ್‌ ಕಂಪನಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. 

ಸಿದ್ದರಾಜ ಅವರು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷರಾಗಿದ್ದು ವಾರದ ಹಿಂದೆ ಫೇಸ್‌ಬುಕ್‌ ನೋಡುತ್ತಿದ್ದಾಗ
ಸೀರೆ ಕುರಿತ ಜಾಹಿರಾತೊಂದು ಕಂಡು ಬಂದಿದೆ. ಅದರಲ್ಲಿ 1560 ರೂ. ಕಿಮ್ಮತ್ತಿನ ಸೀರೆಯನ್ನು 649 ರೂ.ಗೆ ಡಿಸ್ಕೌಂಟ್‌
ರೂಪದಲ್ಲಿ ಕೊಡುವುದಾಗಿ ತಿಳಿಸಲಾಗಿತ್ತು. ಇದರಿಂದಾಗ ಆಕರ್ಷಣೆಗೊಂಡ ಅವರು ತಮ್ಮ ಪತ್ನಿಗೆ ಕಾಣಿಕೆಯಾಗಿ ಕೊಡಲು ಸೀರೆಗೆ ಆರ್ಡರ್‌ ಮಾಡಿದ್ದರು. ಸೀರೆಯ ಪಾರ್ಸಲ್‌ ಕೈಸೇರಿದ ಮೇಲೆ ಹಣ ಕೊಡುವ (ಕ್ಯಾಶ್‌ ಆನ್‌ ಡೆಲಿವರಿ) ಕರಾರು ಆರ್ಡರ್‌ ಬುಕ್‌ ಮಾಡುವಾಗ ಮಾಡಿಕೊಂಡಿದ್ದರು. 

ಗುರುವಾರ ಸಂಜೆ ಜಾನ್ವೆಕರ್‌ ರಿಲಯನ್ಸ್‌ ಪೆಟ್ರೋಲ್‌ ಬಂಕ್‌ ಪಕ್ಕದ ಕಾಂಪ್ಲೆಕ್ಸನಲ್ಲಿರುವ ಇ ಕಾಮರ್ಸ್‌ನ ಸ್ಥಳೀಯ ಕಚೇರಿಯ ಡೆಲಿವರಿ ವ್ಯಕ್ತಿಯೊಬ್ಬರು ಸಿದ್ದರಾಜ ಹೆಸರಲ್ಲಿ ಬಂದಿದ್ದ ಪಾರ್ಸಲ್‌ ನೀಡಿ ಹಣ ಪಡೆದುಕೊಳ್ಳಲು ಬಂದಿದ್ದರು. ಪಾರ್ಸಲ್‌ ನೋಡಿದ ಕೂಡಲೇ ಸಂಶಯಗೊಂಡು ನೈಜತೆ ಪರಿಶೀಲನೆಗೆ ಮುಂದಾದ ಸಿದ್ದರಾಜ ಅವರು ಡೆಲಿವರಿ ಕೊಡಲು ಬಂದಿದ್ದ ವ್ಯಕ್ತಿಯಿಂದಲೇ ವಿಡಿಯೋ ಮಾಡಿಸಿ ಅವರ ಎದುರಿಗೆ ಪಾರ್ಸಲ್‌ ಒಡೆದಾಗ ಅದರಲ್ಲಿ ಸೀರೆ ಬದಲು ಚಿಂದಿಬಟ್ಟೆ ಇರುವುದು ಕಂಡು ಬಂದು ತಾವು ಮೋಸ ಹೋಗಿ ವಂಚನೆಗೊಳಗಾಗಿದ್ದು ಗೊತ್ತಾಗಿದೆ. 

ಕೂಡಲೇ ಡೆಲಿವರಿ ವ್ಯಕ್ತಿ ಮೂಲಕ ಸಂಬಂಧಿಸಿದ ಇ ಕಾಮರ್ಸ್‌ ಕಂಪನಿ ಹಾಗೂ ಪಾರ್ಸಲ್‌ ಮೇಲೆ ನೀಡಿದ್ದ ಸಂಖ್ಯೆಗಳಿಗೆ ಕರೆ ಮಾಡಿ ವಂಚನೆ ಗಮನಕ್ಕೆ ತಂದಿದ್ದಾರೆ. ಗುಜರಾತ್‌ನ ಅಯೋಧ್ಯಾದಲ್ಲಿರುವ ಬ್ಲೂ ಲೇಡಿ ಕಂಪನಿಯಿಂದ ಪಾರ್ಸಲ್‌ ಬಂದಿದೆ. ಆನ್‌ಲೈನ್‌ ಖರೀದಿಯಲ್ಲೂ ಗೋಲ್‌ಮಾಲ್‌ ನಡೆಯುತ್ತದೆ ಎನ್ನುವುದು ಸಾಬೀತಾದಂತಾಗಿದೆ. ಈ ವಂಚನೆ ಕುರಿತು ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವ ತಯಾರಿಯಲ್ಲಿದ್ದೇನೆ. ಆನ್‌ಲೈನ್‌ನಲ್ಲಿ ವ್ಯವಹರಿಸುವ ಗ್ರಾಹಕರು ಎಚ್ಚರಿಕೆಯಿಂದ ವ್ಯವಹಾರ ನಡೆಸುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

ಟಾಪ್ ನ್ಯೂಸ್

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.