ಕನ್ನಡ ಶಾಲೆ; ಸಿಎಂ ಕುಮಾರಸ್ವಾಮಿ ಪ್ರಶ್ನೆಗೆ ಸಾಹಿತಿ ಚಂಪಾ ನೇರ ಉತ್ತರ
Team Udayavani, Jan 5, 2019, 9:58 AM IST
ಧಾರವಾಡ/ಹುಬ್ಬಳ್ಳಿ:ಕನ್ನಡ ವೃಕ್ಷದ ಪಾಲಿಗೆ ಸಿಎಂ ಕುಮಾರಸ್ವಾಮಿ ಕುಠಾರಸ್ವಾಮಿಯಾಗದಿರಲಿ ಎಂದು ಹೇಳಿದ್ದ ಚಂದ್ರಶೇಖರ್ ಪಾಟೀಲ್ ಅವರ ಹೇಳಿಕೆಗೆ ಸಿಎಂ ಶನಿವಾರ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಂಪಾ ಅವರನ್ನೇ ಕೇಳುತ್ತೇನೆ, ಅವರ ಮೊಮ್ಮಕ್ಕಳು ಯಾವ ಶಾಲೇಲಿ ಓದುತ್ತಾರೆಂದು ಹೇಳಲಿ. ಈ ಬಗ್ಗೆ ಜನರ ಮುಂದೆ ಮಾಹಿತಿ ನೀಡಲಿ. ನಾನು ಕನ್ನಡ ಭಾಷೆ ಉಳಿಸಿಕೊಳ್ಳಲು ತಯಾರಿದ್ದೇನೆ ಎಂದು ಹೇಳಿದ್ದೆ.
ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯರಾದ ಅವರು ಇಲ್ಲ, ಸಲ್ಲದ ಮಾತುಗಳನ್ನು ಆಡಬಾರದು. ಕನ್ನಡ ಭಾಷೆ ಶಿಕ್ಷಣ ರಾಷ್ಟ್ರೀಕರಣವಾಗಬೇಕು ಎಂಬ ಬಗ್ಗೆ ಠರಾವು ಪಾಸು ಮಾಡಲಿ ಎಂದು ಹೇಳಿದರು.
ಒಂದು ಸಾವಿರ ಆಂಗ್ಲಮಾಧ್ಯಮ ಶಾಲೆಗಳನ್ನು ಆರಂಭಿಸಲಾಗುವುದು ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಚಂಪಾ ಅವರು ಶುಕ್ರವಾರ ಧಾರವಾಡದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.
ಸಿಎಂ ತಿರುಗೇಟಿಗೆ ಚಂಪಾ ಹೇಳಿದ್ದೇನು?
ಚಂಪಾರ ಮೊಮ್ಮಕ್ಕಳು ಯಾವ ಶಾಲೇಲಿ ಓದುತ್ತಾರೆಂದು ಹೇಳಲಿ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನನಗಿರುವುದು ಒಬ್ಬನೇ ಮೊಮ್ಮಗ. ಆತ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಕಲಿತಿದ್ದಾನೆ. ಈಗ ಎಂಎ ಪದವಿ ಮುಗಿಸಿದ್ದಾನೆ. ನಾನು ಕುಮಾರಸ್ವಾಮಿಯವರ ವಿರುದ್ಧ ಮಾತನಾಡಿಲ್ಲ, ರಾಜಕಾರಣಿಗಳಿಗೆ ಭಾಷೆಯ ವ್ಯಾಕರಣ ಗೊತ್ತಾಗಲ್ಲ. ಕುಠಾರಸ್ವಾಮಿ ಆಗಬಾರದು ಅಂದರೆ ಕನ್ನಡದ ವೃಕ್ಷಕ್ಕೆ ಕೊಡಲಿ ಏಟು ಹಾಕುವ ಕೆಲಸ ಮಾಡಬಾರದು ಎಂಬ ಅರ್ಥದಲ್ಲಿ ಹೇಳಿದ್ದೆ ಎಂದರು. ಇದನ್ನು ಅರ್ಥಮಾಡಿಕೊಳ್ಳಬೇಕಾದ ಸಂವೇದನೆ ಸಿಎಂಗೆ ಬರಬೇಕಾಗಿದೆ. ಕನ್ನಡ ಭಾಷೆ ಶಿಕ್ಷಣ ರಾಷ್ಟ್ರೀಕರಣವಾಗಬೇಕೆಂಬ ಠರಾವನ್ನು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್ ತೀರ್ಪು