ಬಾಲಿವುಡ್‌ನ‌ಲ್ಲಿ ಭಾವನಾ ಲಹರಿ 


Team Udayavani, Jan 13, 2019, 12:30 AM IST

z-1.jpg

ಕನ್ನಡ ಚಿತ್ರರಂಗದ ಕಲಾವಿದರು ಪರಭಾಷೆಯ ಚಿತ್ರಗಳಲ್ಲಿ ಅಭಿನಯಿಸುವುದು, ಅಲ್ಲಿನ ಕಲಾವಿದರು ಇಲ್ಲಿ ಬಂದು ಅಭಿನಯಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ರೂಢಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪರಭಾಷಾ ಕಲಾವಿದರು ಕನ್ನಡದಲ್ಲಿ ಮಿಂಚಿದಷ್ಟು, ಕನ್ನಡ ಕಲಾವಿದರು ಪರಭಾಷೆಗಳಲ್ಲಿ ಮಿಂಚುತ್ತಿಲ್ಲ ಎಂಬುದು ಚಿತ್ರೋದ್ಯಮದ ಮಂದಿ ಒಪ್ಪಿಕೊಳ್ಳುವ ಸತ್ಯ. ಕನ್ನಡದ ಕೆಲವು ನಾಯಕಿಯರು ಆಗಾಗ್ಗೆ ಬಾಲಿವುಡ್‌ ಕದ ತಟ್ಟುತ್ತಿದ್ದರೂ, ಯಾರೂ ಕೂಡ ಗುರುತಿಸಿ ಕೊಳ್ಳುವ ಮಟ್ಟಿಗೆ ಬಾಲಿವುಡ್‌ನ‌ಲ್ಲಿ ನೆಲೆ ನಿಲ್ಲಲಿಲ್ಲ. ಈಗ ಕನ್ನಡದ ಮತ್ತೂಬ್ಬ ನಟಿ ಬಾಲಿವುಡ್‌ ಅಂಗಳಕ್ಕೆ ಅಡಿ ಯಿಡಲು ಸಿದ್ಧತೆ ಮಾಡಿ ಕೊಳ್ಳುತ್ತಿದ್ದಾರೆ. ಅವರೇ ಭಾವನಾ ರಾವ್‌.

ಹೌದು, ಗಾಳಿಪಟ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಭಾವನಾ ರಾವ್‌, ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಗಾಳಿಪಟ ಚಿತ್ರ ಸೂಪರ್‌ ಹಿಟ್‌ ಸಕ್ಸಸ್‌ ಬಳಿಕ, ವಾರೆವ್ಹಾ, ಹಾಲಿಡೇಸ್‌ ಹಾಗೂ ಗಗನಚುಕ್ಕಿ ಸೇರಿದಂತೆ ಹಲವು ಚಿತ್ರಗಳಲ್ಲಿ ಭಾವನಾ ಅಭಿನಯಿಸಿದರೂ, ಆ ಚಿತ್ರಗಳು ಅಷ್ಟಾಗಿ ಗೆಲ್ಲಲಿಲ್ಲ. ಇದರ ನಡುವೆಯೇ ತಮಿಳಿನಲ್ಲೂ ಪದಂ ಪರ್ತು ಕದೈ ಸೊಳ್ಳು, ವೆನಿಗಲ… ಸೇರಿದಂತೆ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದರು. ಬಳಿಕ ತೆಲುಗಿನಲ್ಲಿ ಶಿಖಾ ಚಿತ್ರದಲ್ಲಿ ಅಭಿನಯಿಸಿದರು. ಇದರ ನಡುವೆಯೇ ಮಾಡೆಲಿಂಗ್‌ ಕ್ಷೇತ್ರದಲ್ಲೂ ಭಾವನಾ ಸಕ್ರಿಯವಾಗಿದ್ದರು. ಇವೆಲ್ಲದರ ನಡುವೆ ಕಳೆದ ಮೂರು ವರ್ಷಗಳಿಂದ ಬಾಲಿವುಡ್‌ಗೆ ಕಾಲಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಭಾವನಾ ರಾವ್‌, ಅಂತೂ ಈ ವರ್ಷ ಹಿಂದಿ ಚಿತ್ರದಲ್ಲಿ ಮಿಂಚುವ ಸುಳಿವನ್ನು ನೀಡಿದ್ದಾರೆ. 

ಭಾವನಾ ರಾವ್‌ ಅವರೇ ಹೇಳಿರುವ ಸದ್ಯದ ಸುದ್ದಿ ಏನೆಂದರೆ, ಬೈ ಪಾಸ್‌ ರೋಡ್‌ ಎಂಬ ಹೆಸರಿನ ಹಿಂದಿ ಚಿತ್ರದಲ್ಲಿ ಭಾವನಾ, ನಾಯಕ ನೀಲ್‌ ನಿತಿನ್‌ ಮುಖೇಶ್‌ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರಂತೆ. ಚಿತ್ರದಲ್ಲಿ ಸೋನಿಯಾ ಎಂಬ ಐಶಾರಾಮಿ ಮಹಿಳೆಯ ಪಾತ್ರದಲ್ಲಿ, ಬೋಲ್ಡ… ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಹಾಟ್‌ ಫೋಟೋಶೂಟ್‌ ಕೂಡ ಮಾಡಿಸಿದ್ದಾರೆ.

ಈ ಬಗ್ಗೆ ಮಾತನಾಡುವ ಭಾವನಾ ರಾವ್‌, “ಒಮ್ಮೆ ನಿರ್ದೇಶಕ ನಮನ್‌ ನಿತೀಶ್‌ ಆಡಿಷನ್‌ಗೆ ಬಂದು ಹೋಗುವಂತೆ ಹೇಳಿದ್ದರು. ಅಂತೆಯೇ ಮುಂಬೈಗೂ ಹೋಗಿ ಆಡಿಷನ್‌ ಮುಗಿಸಿಕೊಂಡು ಬಂದಿದ್ದೆ. ಆನಂತರ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಬಂತು. ಮತ್ತೆ ಮುಂಬೈಗೆ ಹೋಗಿ, ನನ್ನ ಪಾತ್ರದ ಬಗ್ಗೆ ಕೇಳಿದೆ. ಫ್ಯಾಷನ್‌ ಕಂಪೆನಿಯಲ್ಲಿ ಕೆಲಸ ಮಾಡುವ ಹುಡುಗಿ. ತುಂಬಾ ಮಾಡರ್ನ್. ಹಾಗೆಯೇ ಅದಕ್ಕೆ ಸ್ವಲ್ಪ ಗ್ರೇ ಶೇಡ್‌ ಕೂಡ ಇದೆ. ಇಂಟರೆಸ್ಟಿಂಗ್‌ ಅಂತೆನಿಸಿತು. ನಿರ್ದೇಶಕರು ಪಾತ್ರದ ವಿವರಣೆ ಹೇಳುತ್ತಿದ್ದಂತೆ ಓಕೆ ಅಂದೆ. ಆ ಪ್ರಕಾರ ಈಗ ಎರಡು ದಿನಗಳ ಕಾಲದ ಚಿತ್ರೀಕರಣದಲ್ಲೂ ಭಾಗವಹಿಸಿ ಬಂದಿದ್ದೇನೆ. ಎರಡನೆಯ ಹಂತದ ಚಿತ್ರೀಕರಣ ಜನವರಿ 20ರಿಂದ ಶುರುವಾಗಲಿದೆ’ ಎನ್ನುತ್ತಾರೆ. 

ಅಂದ ಹಾಗೆ, ಬೈ ಪಾಸ್‌ ರೋಡ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಇದರಲ್ಲಿ ನೀಲ್‌ ನಿತೀಶ್‌ ಮುಕೇಶ್‌, ಭಾವನಾ ರಾವ್‌ ಅವರೊಂದಿಗೆ ರಜತ್‌ ಕಪೂರ್‌, ಆದಾ ಶರ್ಮ ಮೊದಲಾದ ತಾರೆಯರ ದೊಡ್ಡ ತಾರಾಗಣವಿದೆ. 

ಟಾಪ್ ನ್ಯೂಸ್

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.