ನವಿಮುಂಬಯಿ ಕನ್ನಡ ಭವನ ಪಾಳು ಬೀಳದಿರಲಿ


Team Udayavani, Jan 13, 2019, 12:13 PM IST

1201mum23shrinivasjokatte.jpg

ಮುಂಬಯಿ: 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಧಾರವಾಡದಲ್ಲಿ ಜ. 4, 5 ಹಾಗೂ 6 ರಂದು ಮೂರು ದಿನ ಗಳ ಕಾಲ ಕೃಷಿ ವಿಶ್ವವಿದ್ಯಾಲಯ ಆವರಣ ದಲ್ಲಿ ಅಂಬಿಕಾತನಯದತ್ತ ಪ್ರಧಾನ ವೇದಿಕೆಯಲ್ಲಿ ಜರಗಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಅಧ್ಯಕ್ಷತೆ ಯಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಸಮ್ಮೇಳನವನ್ನು ಉದ್ಘಾಟಿಸಿದರು.  ಜ. 5 ರಂದು ಮಧ್ಯಾಹ್ನ ಗಡಿನಾಡ ತಲ್ಲಣಗಳು ಗೋಷ್ಠಿಯು ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಅಕಾಡೆಮಿ, ಪರಿಷತ್ತು ಗಮನಹರಿಸಲಿ
ಹೊರನಾಡ ಕನ್ನಡಿಗರ ಸಮಸ್ಯೆ ಗಳು ವಿಷಯದ ಕುರಿತಂತೆ ಮುಂಬಯಿ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಮಾತನಾಡಿ, ಹೊರನಾಡ ಸಾಹಿತಿಗಳ ಕೃತಿಗಳನ್ನು ಒಳನಾಡಿನಲ್ಲಿ ಗುರುತಿಸಬೇಕು. ಚರ್ಚೆ ನಡೆಸಬೇಕು. ಈ ಬಗ್ಗೆ ಪ್ರಾಧಿಕಾರ, ಅಕಾಡೆಮಿ, ಪರಿಷತ್ತುಗಳು ಗಮನ ಹರಿಸಬೇಕಾಗಿದೆ. ಅಕಾಡೆಮಿಗಳಿಗೆ ಸದಸ್ಯರ ನೇಮಕಾತಿಯಲ್ಲಿ ಹಿಂದೆಲ್ಲಾ ಮುಂಬಯಿ ಕನ್ನಡಿಗರನ್ನೂ ಪರಿಗಣಿಸುತ್ತಿದ್ದರು. ಇತ್ತೀಚೆಗೆ ಕೆಲವು ವರ್ಷಗಳಿಂದ ಅದನ್ನು ನಿಲ್ಲಿಸಿ ರುವ ಕಾರಣಗಳೇನು ಎಂದು ಜೋಕಟ್ಟೆ ಯವರು ಪ್ರಶ್ನಿಸಿದರು.

ಗಡಿ ಸಮಸ್ಯೆ  ಎದುರಿಸಬೇಕಾದ ಸಮಸ್ಯೆಗಳು ಕುರಿತಂತೆ ಬೆಳಗಾವಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್‌ ಚಂದರಗಿ ಮಾತನಾಡಿ,  ಗಡಿ ಸಂರಕ್ಷಣೆ ಪ್ರಾಧಿಕಾರ ಬೆಂಗಳೂರಲ್ಲಿ ಯಾಕೆ ಇದೆ ಎಂದು ಪ್ರಶ್ನಿಸಿ,  ಮಂತ್ರಿಗಳು – ಶಾಸಕರು – ಸಂಸದರು ಎಲ್ಲರೂ ನಮ್ಮನ್ನು ಕೈ  ಬಿಟ್ಟಿದ್ದಾರೆ, ಬೆಳಗಾವಿ ಎಂದೂ ಬಿಟ್ಟು ಕೊಡೋದಿಲ್ಲ ಎನ್ನುವ ಗಿಳಿಪಾಠ ಬಿಟ್ಟುಬಿಡಿ. ಕಂಬಾರರು ಎಂಎಲ್‌ಸಿ ಆಗಿದ್ದಾಗ ಗಡಿ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಜೊತೆ ಎಷ್ಟು ಸಭೆ ನಡೆಸಿದ್ದಾರೆ,  ಬೆಂಗಳೂರು ವಿಧಾನ ಸೌಧಕ್ಕೆ ಹೋದ ಸಾಹಿತಿಗಳೆಲ್ಲಾ ಅಲ್ಲೇ ಐಕ್ಯವಾಗಿ ಬಿಡ್ತಾರೆ ಎಂದ ಅಶೋಕ ಚಂದರಗಿಯವರು ಎಲ್ಲಾ ಪ್ರಾಧಿಕಾರಗಳ ನಡುವೆ ಸಮನ್ವಯತೆ ಇರಲಿ ಎಂದರು.

ಖ್ಯಾತ ಕನ್ನಡ ಸಾಹಿತಿ ಎಸ್‌. ಎಲ್‌. ಭೈರಪ್ಪ ಅವರು ಕನ್ನಡಕ್ಕಿಂತಲೂ ಮರಾಠಿಯಲ್ಲಿ ಹೆಚ್ಚು ಜನಪ್ರಿಯರು ಎಂದು ಪ್ರೊ| ಚಂದ್ರಕಾಂತ್‌ ಪೋಕಳೆಯವರು ಕರ್ನಾಟಕ – ಮಹಾರಾಷ್ಟ್ರ ಕೊಡುಕೊಳ್ಳುವಿಕೆ ವಿಷಯವಾಗಿ ಮಾತನಾಡಿ,  ಮರಾಠಿಗೆ ಅನುವಾದಗೊಂಡಿರುವ  ಭೈರಪ್ಪ ಅವರ ಕೃತಿಗಳು ಅತೀ ಹೆಚ್ಚು ಮಾರಾಟವಾಗಿವೆ. ಉಮಾ ಕುಲಕರ್ಣಿ ಅವರು ಮರಾಠಿಗೆ ಭೈರಪ್ಪರ ಕಾದಂಬರಿಗಳನ್ನು ಅನುವಾದ ಮಾಡಿದ್ದಾರೆ. ಉಮಾ ಅವರ ಪತಿ ಕನ್ನಡದವರು. ಉಮಾ ಅವರಿಗೆ ಕನ್ನಡ ಗೊತ್ತಿಲ್ಲ. ಪತಿ ಕನ್ನಡದಲ್ಲಿ ಹೇಳಿದ್ದನ್ನು ಉಮಾ ಅವರು ಮರಾಠಿಗೆ ಅನುವಾದಿಸುತ್ತಾರೆ ಎಂದರು.

ಅಧ್ಯಕ್ಷತೆ ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿ ವಹಿಸಿ ಮಾತನಾಡಿ,  ಬೆಳಗಾವಿ ಜಿಲ್ಲೆಯನ್ನು ವಿಭಜಿಸುವುದಾದರೆ ಚಿಕ್ಕೋಡಿಯನ್ನೇ ಹೊಸಜಿಲ್ಲೆಯಾಗಿ ರಚಿಸಬೇಕು ಎಂದರು. ಸುರೇಶ್‌ ಚನಶೆಟ್ಟಿ ಅವರು ಸ್ವಾಗತಿಸಿದರು. ಲಿಂಗಯ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಮಂಗಲಾ ಶ್ರೀಶೈಲ್‌   ನಿರ್ವಹಿಸಿದರು. ಶ್ರೀಶೈಲ ಈರಪ್ಪ ವಂದಿಸಿದರು.

“ಭೂತ ಬಂಗಲೆ ಆಗಬಾರದು’
ನವಿ ಮುಂಬಯಿಯಲ್ಲಿ ಮೂರು ಮಾಳಿಗೆಯ ಕನ್ನಡ ಭವನವು ಉದ್ಘಾಟನೆಗೊಂಡಿದ್ದರೂ ಬೀಗ ಹಾಕಲಾಗಿದ್ದು, ಯಾರಿಗೂ ಪ್ರಯೋಜನ ಇಲ್ಲದಂತಾಗಿದೆ. ಅದು ಪಾಳು ಬಿದ್ದು ಭೂತ ಬಂಗಲೆ ಆಗಬಾರದು. ಈ ಬಗ್ಗೆ ಕರ್ನಾಟಕ ಸರಕಾರ ಎಚ್ಚೆತ್ತುಕೊಳ್ಳಬೇಕು. ಸರಕಾರ ಕನ್ನಡ ಚಟುವಟಿಕೆಗಳಿಗೆ ನೆರವು ನೀಡಬೇಕು. ಹೊರನಾಡಿನ ಉತ್ತಮ ಪುಸ್ತಕಗಳನ್ನು ಪರಿಷತ್‌- ಪ್ರಾಧಿಕಾರ ಪರಿಶೀಲಿಸಿ ಪ್ರಕಟಿಸಬೇಕು. ಗಡಿನಾಡು ಹೊರನಾಡು ಪ್ರಾಧಿಕಾರ ಶೀಘ್ರ ಕಾರ್ಯರೂಪಕ್ಕೆ ಬರುವಂತಾಗಬೇಕು. ಮುಂದಿನ ಪೀಳಿಗೆಗೆ ಕನ್ನಡದಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡದ ಕುರಿತಂತೆ ಇಂಗ್ಲಿಷ್‌ನಲ್ಲಿಯೂ ಕೃತಿಗಳನ್ನು ಪ್ರಕಟಿಸಬೇಕು. ಚಿಣ್ಣರ ಬಿಂಬದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಮಾನ್ಯತೆ ನೀಡಬೇಕು ಎಂದು ಶ್ರೀನಿವಾಸ ಜೋಕಟ್ಟೆ ಹೇಳಿದರು. 

ಟಾಪ್ ನ್ಯೂಸ್

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

1-wqewqe

Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

1-wqewqe

Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.