1500ಕ್ಕೂ ಹೆಚ್ಚು ಮನೆಗಳಿಗೆ ಗ್ಯಾಸ್ ಸಂಪರ್ಕ
Team Udayavani, Jan 14, 2019, 9:41 AM IST
ಬೆಳಗಾವಿ: ಕುಂದಾನಗರದ ಜನ ನಿಧಾನವಾಗಿ ಒಂದೊಂದೇ ಕ್ಷೇತ್ರದಲ್ಲಿ ಸ್ಮಾರ್ಟ್ ಆಗುತ್ತಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ಸಿಟಿ ಯೋಜನೆಯಡಿ ಮಾದರಿಯಾಗುವಂತಹ ಕಾಮಗಾರಿಗಳು ನಡೆದಿದ್ದು, ಈಗ ಅದರ ಸಾಲಿಗೆ ಪೈಪ್ಲೈನ್ ಮೂಲಕ ಮನೆ ಮನೆಗೆ ಅಡುಗೆ ಅನಿಲ ಪೂರೈಸಲು ಆರಂಭವಾಗಿದೆ.
ಮುಂಬೈ, ದೆಹಲಿ ಮೊದಲಾದ ಮಹಾನಗರಗಳಲ್ಲಿ ಪೈಪ್ಗಳ ಮೂಲಕ ಅಡುಗೆ ಅನಿಲ ಪೂರೈಕೆಯಾಗುತ್ತಿರುವುದನ್ನು ಕಂಡಿದ್ದ ಬೆಳಗಾವಿ ಜನರು ಅದೇ ರೀತಿ ತಮ್ಮ ನಗರದಲ್ಲೂ ಆಗಬೇಕು ಎಂಬ ಕನಸು ಕಂಡಿದ್ದರು. ಈಗ ಅದು ಸ್ಮಾರ್ಟ್ಸಿಟಿ ಮೂಲಕ ನನಸಾಗುತ್ತಿದೆ.
ಕೇಂದ್ರದ ಪೆಟ್ರೋಲಿಯಂ ಇಲಾಖೆ ಅಧೀನದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಈ ಯೋಜನೆ ರೂಪಿಸಿದ್ದು, ಒಎನ್ಜಿಸಿ ಹಾಗೂ ಗೇಲ್ ಇಂಡಿಯಾ ಕಂಪನಿಗಳು ಖಾಸಗಿ ವಲಯದ ಕಂಪನಿ ಮೂಲಕ ಮನೆ ಮನೆಗೆ ಅಡುಗೆ ಅನಿಲ ಪೂರೈಸಲಿದೆ.
ಆಂಧ್ರಪ್ರದೇಶ ಮೂಲದ ಖಾಸಗಿ ವಲಯದ ಮೇಘಾ ಇಂಜಿನಿಯರಿಂಗ್ ಹಾಗೂ ಇನ್ಫ್ರಾಸ್ಟ್ರಕ್ಚರ್ ಕಂಪನಿ ಮನೆ ಮನೆಗೆ ಪೈಪ್ಗಳ ಮೂಲಕ ಅಡುಗೆ ಅನಿಲ (ಪಿಎನ್ಜಿ) ಪೂರೈಸುವ ಕಾಮಗಾರಿ ಕೈಗೊಂಡಿದ್ದು, ಈಗ ನಗರದ ಹಲವಾರು ಕಡೆಗಳಲ್ಲಿ ಪೈಪ್ಲೈನ್ ಅಳವಡಿಕೆ ಕಾರ್ಯ ಆರಂಭಿಸಿದೆ. ಮೊದಲ ಹಂತದಲ್ಲಿ ರಾಮತೀರ್ಥನಗರ ಹಾಗೂ ಕುಮಾರಸ್ವಾಮಿ, ಮಾಲಮಾರುತಿ ಬಡಾವಣೆಗಳಲ್ಲಿ ಪೈಪ್ಲೈನ್ ಅಳವಡಿಸಲಾಗುತ್ತಿದ್ದು, ಈಗಾಗಲೇ 1500ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಸಹ ಕಲ್ಪಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪ್ರಮುಖವಾಗಿರುವ ಒಟ್ಟು 300 ಕೋಟಿ ರೂ. ವೆಚ್ಚದ ಅಡುಗೆ ಅನಿಲ ಜಾಲ ಕಾಮಗಾರಿಗೆ ನಗರದ ಅಶೋಕ ವೃತ್ತದ ಬಳಿ ಭೂಮಿಪೂಜೆ ನೆರವೇರಿಸಿದ ನಂತರ ಕಾಮಗಾರಿ ಭರದಿಂದ ನಡೆದಿದೆ. ಐದು ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು, ಇದರ ಮೂಲಕ 50 ಸಾವಿರ ಮನೆಗಳಿಗೆ ಅನಿಲ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ.
ಎಲ್ಪಿಜಿಗಿಂತ ಇದು ಹೆಚ್ಚು ಸುರಕ್ಷಿತ ಹಾಗೂ ಹೆಚ್ಚು ಉಳಿತಾಯ ನೀಡಲಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಅಳವಡಿಸಲು ಮೇಘಾ ಇಂಜನಿಯರಿಂಗ್ ಹಾಗೂ ಇನ್ಫ್ರಾಸ್ಟ್ರಕ್ಚರ್ ಕಂಪನಿ ವಹಿಸಿಕೊಂಡಿದ್ದು ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಇದನ್ನು ಸಂಪೂರ್ಣ ಅಳವಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಬೆಳಗಾವಿ ನಗರದಲ್ಲಿ 50 ಸಾವಿರ ಮನೆಗಳಿಗೆ ಈ ಪಿಎನ್ಐ ಸಂಪರ್ಕ ಕಲ್ಪಿಸುವ ಗುರಿ ಇದ್ದು, ಈಗಾಗಲೇ ಆರು ಸಾವಿರ ಮನೆಗಳ ನೋಂದಣಿಯಾಗಿದೆ. ಇದೇ ರೀತಿ ಕರ್ನಾಟಕದ ಎಲ್ಲ ಜಿಲ್ಲೆಗಳು ಆದಷ್ಟು ತ್ವರಿತ ಗತಿಯಲ್ಲಿ ಪಿಎನ್ಐ ಸಂಪರ್ಕ ಜಾಲ ಹೊಂದಲಿವೆ ಎಂದು ಮೇಘಾ ಇಂಜಿನಿಯರಿಂಗ್ ಕಂಪನಿ ಮಾರ್ಕೇಟಿಂಗ್ ಮ್ಯಾನೇಜರ್ ಕಾಮಿಲ್ ಪಾಷಾ ಹೇಳಿದರು.
ಈಗ ಪೂರೈಕೆಯಾಗುತ್ತಿರುವ ಎಲ್ಪಿಜಿ ಸಿಲಿಂಡರ್ಗಿಂತ ಪೈಪ್ಲೈನ್ದಿಂದ ಪೂರೈಕೆಯಾಗುವ ಅಡುಗೆ ಅನಿಲದ ದರ ಕಡಿಮೆ ಇರುತ್ತದೆ. ಎಲ್ಪಿಜಿ ಸಿಲಿಂಡರ್ ಬೆಲೆ ಪ್ರತಿ ಕೆಜಿಗೆ 55 ರೂ. ಇದ್ದರೆ ಪೈಪ್ಲೈನ್ ಮೂಲಕ ಸರಬರಾಜು ಆಗುವ ಅನಿಲದ ದರ ಪ್ರತಿ ಕೆಜಿಗೆ 25 ರೂ. ಇದೆ. ನೋಂದಣಿ ಮಾಡಿಸಿಕೊಂಡ ಮನೆಗಳಿಗೆ ಮಾತ್ರ ಸಂಪರ್ಕ ನೀಡಲಾಗುತ್ತದೆ. ಇದಕ್ಕೆ 500 ರೂ. ನೋಂದಣಿಗೆ ಹಾಗೂ 4500 ರೂ. ಠೇವಣಿ ರೂಪದಲ್ಲಿ ನೀಡಬೇಕು ಎಂಬುದು ಮೇಘಾ ಕಂಪನಿಯ ಪ್ರತಿನಿಧಿ ಅಮಿತ್ ಹೇಳಿದರು.
ಇದು ಕೇಂದ್ರ ಸರ್ಕಾರದ ಯೋಜನೆ. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆ ಇದರಲ್ಲಿ ಹಣ ತೊಡಗಿಸಿಲ್ಲ. ಖಾಸಗಿ ಕಂಪನಿಯೇ ಹಣ ಹೂಡಿಕೆ ಮಾಡಿ ಪೈಪ್ಲೈನ್ ಹಾಕುತ್ತದೆ. ಇದಕ್ಕೆ ಬಳಕೆದಾರರಿಂದ ಹಣ ಪಡೆಯುತ್ತದೆ. ಮಹಾನಗರ ಪಾಲಿಕೆ ವತಿಯಿಂದ ಪೈಪ್ಲೈನ್ ಅಳವಡಿಕೆಗೆ ಅನುಮತಿ ನೀಡಲಾಗಿದೆ.
•ಶಶಿಧರ ಕುರೇರ,
ಮಹಾನಗರ ಪಾಲಿಕೆ ಆಯುಕ್ತ
ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ