ಯಾತ್ರೆ ಮುಗಿದರೂ ಮುಗಿಯದ ವಾಕ್ಸಮರ
Team Udayavani, Jan 21, 2019, 12:55 AM IST
ತಿರುವನಂತಪುರ: ಮಹಿಳೆಯರ ಪ್ರವೇಶ ಸಂಬಂಧ ಹಿಂಸಾತ್ಮಕ ಪ್ರತಿಭಟನೆ ಗಳಿಗೆ ಸಾಕ್ಷಿಯಾದ ಶಬರಿಮಲೆಯಲ್ಲಿ 2 ತಿಂಗಳ ಯಾತ್ರೆ ಸಮಾರೋಪಗೊಂಡಿದ್ದು, ರವಿವಾರ ಅಯ್ಯಪ್ಪ ದೇಗುಲವನ್ನು ಮುಚ್ಚಲಾಗಿದೆ. ದೇಗುಲ ಮುಚ್ಚುತ್ತಿರು ವಂತೆ, ಪ್ರತಿಪಕ್ಷ ಬಿಜೆಪಿ ಹಮ್ಮಿಕೊಂಡಿದ್ದ 49 ದಿನಗಳ ನಿರಶನವೂ ಅಂತ್ಯಗೊಂಡಿದೆ. ಶಬರಿಮಲೆಯಲ್ಲಿ ನಿಷೇಧಾಜ್ಞೆ ವಾಪಸ್ ಪಡೆಯಬೇಕು ಎಂದು ಕೋರಿ 49 ದಿನ ಗಳಿಂದ ಬಿಜೆಪಿ ನಾಯಕರು ನಿರಶನ ನಡೆಸುತ್ತಿದ್ದರು. ದೇಗುಲ ಮುಚ್ಚಿದರೂ ರಾಜಕೀಯ ವಾಕ್ಸಮರ ರವಿವಾರವೂ ಮುಂದುವರಿದಿತ್ತು. ಬಿಜೆಪಿ, ಸಂಘ ಪರಿವಾರವು ಪರಿಸ್ಥಿತಿ ಹದಗೆಡಿಸಲು ನಡೆ ಸಿದ ಎಲ್ಲ ಯತ್ನಗಳೂ ವಿಫಲವಾದವು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಬಿಜೆಪಿ ರಾಜ್ಯಾ ಧ್ಯಕ್ಷ ಶ್ರೀಧರನ್ ಪಿಳ್ಳೆ„ ಮಾತನಾಡಿ, ನಾವು ಭಕ್ತರ ನಂಬಿಕೆಯನ್ನು ಉಳಿಸುವ ಸಲುವಾಗಿ ಹೋರಾಡಿದ್ದೇವೆ. ಇದಕ್ಕೆ ನಮಗೆ ಜನಬೆಂಬಲ ಸಿಕ್ಕಿದೆ ಎಂದಿದ್ದಾರೆ. ಶಬರಿಮಲೆ ಕರ್ಮ ಸಮಿತಿ ರವಿವಾರ ಸಂಜೆ ಭಕ್ತರು, ಧಾರ್ಮಿಕ ನಾಯಕರ ಸಭೆಯನ್ನೂ ಆಯೋಜಿಸಿತ್ತು.
ಸಮಾಜದಲ್ಲಿ ಬದಲಾವಣೆ ಆಗಬೇಕಾದ್ದು ಅಗತ್ಯ. ಆದರೆ, ಪ್ರತಿ ದೇಗುಲವೂ ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿದೆ. ಆ ಸಂಪ್ರದಾಯ ಗಳನ್ನು ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ.
ಮಾತಾ ಅಮೃತಾನಂದಮಯಿ, ಅಧ್ಯಾತ್ಮ ಗುರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
MUST WATCH
ಹೊಸ ಸೇರ್ಪಡೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು