ಆಡಿಯೋ ರಾದ್ಧಾಂತ ಜನರು ಗಮನಿಸುತ್ತಿದ್ದಾರೆ


Team Udayavani, Feb 12, 2019, 12:30 AM IST

x-16.jpg

ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಚದುರಂಗದಾಟದಲ್ಲಿ ಮೊದಲು ಬಿಜೆಪಿ ಉರುಳಿಸಿದ ದಾಳಕ್ಕೆ ಸಮ್ಮಿಶ್ರ ಸರ್ಕಾರದ ದೋಸ್ತಿಗಳು ಕಂಗಾಲಾಗಿದ್ದವು. ರೆಸಾರ್ಟ್‌ ಯಾತ್ರೆ, ಶಾಸಕರಿಬ್ಬರ ಬಡಿದಾಟ, ಅತೃಪ್ತರ ಮುಂಬೈ ಯಾತ್ರೆ ಕಾಂಗ್ರೆಸ್‌ ಪಾಲಿಗಂತೂ ತಲೆತಗ್ಗಿಸುವಂತೆ ಮಾಡಿತ್ತು. ಆದರೆ, ಆಟದ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಉರುಳಿಸಿದ ದಾಳ ಬಿಜೆಪಿಯನ್ನು ಸಂಕಷ್ಟ‌ಕ್ಕೆ ಸಿಲುಕಿಸಿರುವಂತೆ ಕಂಡುಬರುತ್ತಿದೆ.

ಅದಕ್ಕೆಲ್ಲಾ ಕಾರಣವಾಗಿರುವುದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಿಸಿದ ಆಡಿಯೋ ಬಾಂಬ್‌.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರದೆನ್ನಲಾದ ಮಾತುಗಳು, ಶಾಸಕರ ಖರೀದಿ ಆರೋಪ, ಬಳಿಕ ಎರಡೂ ಕಡೆಗಳ ಪರಸ್ಪರ ಸವಾಲು-ಜವಾಬುಗಳು ಒಂದು ನಿರ್ಣಾಯಕ ಹಂತದತ್ತ ಹೊರಳುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಅದರಲ್ಲೂ, ವಿಧಾನಸಭೆಯ ಸ್ಪೀಕರ್‌ ರಮೇಶ್‌ ಕುಮಾರ್‌ ಹೆಸರು ತಳಕು ಹಾಕಿಕೊಂಡಿದ್ದು, ಕರ್ನಾಟಕದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 

ವಿಧಾನಸಭೆಗೆ, ಸಭಾಧ್ಯಕ್ಷರ ಹುದ್ದೆಗೆ ಅದರದೇ ಆದ ಪಾವಿತ್ರ್ಯತೆ ಇದೆ. ರಮೇಶ್‌ ಕುಮಾರ್‌ ಅವರೂ ವಿಧಾನಸಭಾಧ್ಯಕ್ಷರಾದ ಮೇಲೆ ಆ ಹುದ್ದೆಗೆ ಗೌರವ ಇಮ್ಮಡಿಯಾಗಿದೆ. ಯಾಕೆಂದರೆ ಅವರ ವ್ಯಕ್ತಿತ್ವ, ಸಂಸದೀಯ ವ್ಯವಹಾರಗಳ ಮೇಲೆ ಅವರಿಗಿರುವ ಅಪಾರ ಜ್ಞಾನ, ಕಳಕಳಿ ಇವುಗಳೆಲ್ಲವೂ ಆ ಹುದ್ದೆಗೆ ಮೆರುಗು ನೀಡಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಕೆಸರೆರಚಾಟ, ಆಡಿಯೋ-ವಿಡಿಯೋ ಅಸ್ತ್ರ-ಪ್ರತ್ಯಸ್ತ್ರಗಳ ನಡುವೆ ವಿಧಾನಸ‌ಭಾಧ್ಯಕ್ಷರ ಹೆಸರು ಬೆರೆತುಕೊಂಡಿರುವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಿದೆ.

ಈ ಬಗ್ಗೆ ಸೋಮವಾರದ ವಿಧಾನಸಭೆ ಕಲಾಪದಲ್ಲಿ ರಮೇಶ್‌ ಕುಮಾರ್‌ ಭಾವುಕರಾಗಿದ್ದು ಒಂದೆಡೆಯಾದರೆ, ಅಭೂತಪೂರ್ವ ಚರ್ಚೆಗೆ ಕಾರಣವಾಗಿ, ರಾಜ್ಯ ವಿಧಾನಸಭೆಯ ಘನತೆ, ಪರಂಪರೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹಲವು ಹಿರಿಯ ಕಿರಿಯ ಸದಸ್ಯರು ಧ್ವನಿಗೂಡಿಸಿದರು. 
ತಮ್ಮ ಸ್ಥಾನದ ಪಾವಿತ್ರ್ಯತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಮೇಶ್‌ ಕುಮಾರ್‌ ಅವರು ಸರ್ಕಾರಕ್ಕೆ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.  ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆ ನಡೆಸುವಂತೆ ವಿಪಕ್ಷದ ಸಲಹೆ ನಡುವೆ ಎಸ್‌ಐಟಿ ತನಿಖೆಗೆ ಸರ್ಕಾರ ಮುಂದಾಗಿದೆ. 

ಒಟ್ಟಾರೆ ಪ್ರಕರಣದಲ್ಲಿ ಈಗ ಬಿಜೆಪಿ ಸುತ್ತ ಸಮ್ಮಿಶ್ರ ಸರ್ಕಾರದ ವ್ಯೂಹ ಗಟ್ಟಿಯಾದಂತೆ ಕಾಣುತ್ತಿದೆ. ಯಾಕೆಂದರೆ, ಒಂದೆಡೆ ಆಡಿಯೋ ಬಾಂಬ್‌ ಹಿನ್ನೆಲೆಯಾಗಿರುವ ಅತೃಪ್ತ ಕಾಂಗ್ರೆಸ್ಸಿಗರು ಮತ್ತು ಅವರನ್ನು ಬಿಜೆಪಿ “ಆಪರೇಷನ್‌’ ನಡೆಸುತ್ತಿದೆ ಎನ್ನುವ ಆರೋಪಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯಅಲ್ಪ ವಿರಾಮ ನೀಡುವತ್ತ ಮುಂದಾಗಿದ್ದಾರೆ. ನಾಲ್ವರು ಅತೃಪ್ತರ ಅನರ್ಹತೆ ಕೋರಿ ವಿಧಾನಸಭಾಧ್ಯಕ್ಷರಿಗೆ ಪತ್ರ ನೀಡಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಯತ್ನ ಬಿಜೆಪಿಯನ್ನು ಕಟ್ಟಿಹಾಕುವುದೇ ಆಗಿದೆ. ಅದು ಅತೃಪ್ತರನ್ನು ಅನರ್ಹತೆ ಬದಲಿಗೆ ಕಾಂಗ್ರೆಸ್‌ ತೆಕ್ಕೆಗೆ ಸೇರಿಸಿಕೊಳ್ಳುವುದೋ ಅಥವಾ ಪಾಠ ಕಲಿಸುವುದೋ ಎಂಬುದು ಚರ್ಚಾ ವಿಷಯ. ಕುಮಾರಸ್ವಾಮಿ ಸ್ಫೋಟಿಸಿದ ಆಡಿಯೋ ಬಾಂಬ್‌ ಈಗ ಕಾಂಗ್ರೆಸ್‌ ಪಾಲಿಗಂತೂ “ಆಪರೇಷನ್‌’ ಹೆದರಿಕೆಯಿಂದ ಬಚಾವ್‌ ಮಾಡಿದಂತಿದೆ. ಬಿಜೆಪಿ ಕೂಡಾ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ತನ್ನ ಬತ್ತಳಿಕೆಯಲ್ಲಿದ್ದ ಹಳೆಯ ಸಿ.ಡಿ. ಬಾಂಬ್‌ ದಾಳ ಉರುಳಿಸಿದೆ. ಸ‌ಭಾಧ್ಯಕ್ಷರಿಗೆ ಸಲ್ಲಿಸಿ ತನಿಖೆಗೆ ಒತ್ತಾಯಿಸಿದೆ. ಆದರೆ, ಅದು ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಕೊಡುತ್ತದೆಯೇ ಅಥವಾ ಕುಮಾರಸ್ವಾಮಿ ಅವರಿಗೆ ಮುಜುಗರ ಉಂಟು ಮಾಡುತ್ತದೆಯೇ? ಈ ಬಗ್ಗೆ ಸಭಾಧ್ಯಕ್ಷರು ತಳೆಯಲಿರುವ ನಿಲುವಿನ ಬಗ್ಗೆ ರಾಜ್ಯ ರಾಜಕಾರಣ ಕಾತರವಾಗಿದೆ.  ಒಟ್ಟಾರೆಯಾಗಿ ಸಿಡಿ ಪ್ರಕರಣಗಳಿಂದಾಗಿ ರಾಜಕಾರಣಿಗಳು ನಾಚಿಕೆಪಡುವಂತಾಗಿದೆ. ಇಂತಹ ಪ್ರಹಸನಗಳಿಗೆ ರಮೇಶ್‌ ಕುಮಾರ್‌ ಕಾನೂನು ರೀತಿಯ ಸಾಂವಿಧಾನಿಕ ಉತ್ತರ ನೀಡಿ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. 

ದುರಂತವೆಂದರೆ ಈ ರಾಜಕೀಯ ಹಗ್ಗಜಗ್ಗಾಟ, ತಂತ್ರ-ಪ್ರತಿತಂತ್ರಗಳ ನಡುವೆ ತಮ್ಮ ಜವಾಬ್ದಾರಿಯನ್ನೇ ಈ ರಾಜಕೀಯ ಪಕ್ಷಗಳು ಮರೆತುಬಿಟ್ಟಿವೆ. ರಾಜ್ಯದ ಜನರು ಬರದಿಂದ ಕಂಗಾಲಾಗಿದ್ದಾರೆ, ಗುಳೆ ಪ್ರಮಾಣ ಎಷ್ಟು ವಿಪರೀತವಾಗುತ್ತಿದೆ ಎಂದರೆ ಹಳ್ಳಿಹಳ್ಳಿಗಳೇ ಖಾಲಿಯಾಗಲಾರಂಭಿಸಿವೆ. ಆದರೆ, ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ವೇದಿಕೆಯಾಗಬೇಕಿದ್ದ ವಿಧಾನಸಭೆಯು ಕಾಂಗ್ರೆಸ್‌- ಜೆಡಿಎಸ್‌- ಬಿಜೆಪಿಯ ಕದನಭೂಮಿಯಾಗಿ ಬದಲಾಗಿರುವುದು ನಿಜಕ್ಕೂ ಬೇಸರದ ಸಂಗತಿ. ಜನರೂ ಕೂಡ ದಿನನಿತ್ಯದ ಈ ಸರ್ಕಸ್‌ಗಳಿಂದ ಬೇಸತ್ತು ಹೋಗಿದ್ದಾರೆ. ಇನ್ನಾದರೂ ಈ ಪ್ರಕರಣಗಳಿಗೊಂದು ತಾರ್ಕಿಕ ಅಂತ್ಯ ದೊರಕಿ, ಆಡಳಿತ ಮತ್ತು ಪ್ರತಿಪಕ್ಷಗಳು ಜನರತ್ತ ದೃಷ್ಟಿ ಹರಿಸುವಂತಾಗಲಿ. ತಮ್ಮನ್ನು ಮತದಾರರು ಗಮನಿಸುತ್ತಿದ್ದಾರೆ ಎಂಬ ಪ್ರಜ್ಞೆ  ರಾಜಕಾರಣಿಗಳಿಗೆ ಬರುವಂತಾಗಲಿ. ರಾಜ್ಯ ರಾಜಕಾರಣ ದೇಶಾದ್ಯಂತ ನಗೆಪಾಟಲಿಗೀಡಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ರಾಜ್ಯದ ಅಭಿವೃದ್ಧಿ ಪಥದಲ್ಲಿ ಬಹುದೊಡ್ಡ ಕಂದಕಗಳು ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ. 

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.