ಪ್ರತಿಕೂಲ ಹವಾಮಾನ: ವಿಮಾನ ನಿಲ್ದಾಣದಲ್ಲೇ ಉಳಿದ ಪಿಎಂ ಮೋದಿ
Team Udayavani, Feb 14, 2019, 6:18 AM IST
ಡೆಹರಾಡೂನ್: ಇಂದು ಗುರುವಾರ ರುದ್ರಪುರದಲ್ಲಿನ ರಾಲಿಯಲ್ಲಿ ಭಾಷಣ ಮಾಡಬೇಕಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು ಬೆಳಗ್ಗೆ ಪ್ರತಿಕೂಲ ಹವಾಮಾನದಿಂದಾಗಿ ಇಲ್ಲಿನ ಜಾಲಿ ಗ್ರ್ಯಾಂಟ್ ಏರ್ ಪೋರ್ಟ್ ನಲ್ಲಿ ತಡೆಹಿಡಿಯಲ್ಪಟ್ಟಿದ್ದಾರೆ. ಮೋದಿ ಅವರ ಹೆಲಿಕಾಪ್ಟರ್ ಗೆ ಪ್ರತಿಕೂಲ ಹವಾಮಾನದಿಂದಾಗಿ ಹಾರಲು ಸಾಧ್ಯವಾಗಿಲ್ಲ.
ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ 7.15ರ ಸುಮಾರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದರು. ಆದರೆ ರುದ್ರಪುರಕ್ಕೆ ಹೋಗಲು ಅವರ ಹೆಲಿಕಾಪ್ಟರ್ ಗೆ ಪ್ರತಿಕೂಲ ಹವಾಮಾನ ಅಡ್ಡಿಯಾಯಿತು. ಹಾಗಾಗಿ ಮೋದಿ ಅವರು ಹವಾಮಾನ ತಿಳಿಯಾಗುವುದನ್ನು ಕಾಯುತ್ತಿದ್ದಾರೆ ಎಂದು ಎಡಿಜಿಪಿ ಅಶೋಕ್ ಕುಮಾರ ತಿಳಿಸಿದರು. ಬೆಳಗ್ಗಿನಿಂದಲೂ ಇಲ್ಲಿ ಮಳೆಯಾಗುತ್ತಿರುವುದೇ ಅಡ್ಡಿಯಾಗಿದೆ.
ರುದ್ರಪುರದಲ್ಲಿ ಇಂದು ಪ್ರಧಾನಿ ಮೋದಿ ಸಾರ್ವಜನಿಕ ಭಾಷಣ ಮಾಡಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ