IAF ವಾಯು ದಾಳಿ ಬಳಿಕ ಎಲ್ಓಸಿಯಲ್ಲೀಗ ಶಾಂತಿ, ನೀರವತೆ, ಕಟ್ಟೆಚ್ಚರ
Team Udayavani, Feb 26, 2019, 10:15 AM IST
ಜಮ್ಮು : ಭಾರತೀಯ ವಾಯು ಪಡೆಯು ಪಾಕಿಸ್ಥಾನದ ಫಖ್ತೂನ್ಖ್ವಾ ಪ್ರಾಂತ್ಯದ ಮನ್ಶೇರಾ ಜಿಲ್ಲೆಯ ಬಾಲಕೋಟ್ ನಲ್ಲಿ ಇಂದು ಬಾಂಬ್ ದಾಳಿ ನಡೆಸಿ 300ಕ್ಕೂ ಅಧಿಕ ಜೈಶ್ ಉಗ್ರರನ್ನು ಬಲಿ ಪಡೆದು ಅವರ ತರಬೇತಿ ಶಿಬಿರಗಳನ್ನೆಲ್ಲ ನಾಶಪಡಿಸಿದ ತರುವಾಯ ಇದೀಗ ಜಮ್ಮು ಕಾಶ್ಮೀರದ ಭಾರತ-ಪಾಕ್ ಗಡಿಯಲ್ಲಿ ನೀರವತೆ ನೆಲೆಗೊಂಡಿದೆ.
ಆದರೂ ಯಾವುದೇ ಹೊತ್ತಿನಲ್ಲಿ ಪಾಕ್ ಸೇನೆ ಪ್ರತಿ ದಾಳಿ ನಡೆಸುವ ಸಂಭಾವ್ಯತೆಯನ್ನು ಅರಿತಿರುವ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ ಎಂದು ಹಿರಿಯ ಸೇನಾಧಿಕಾರಿ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಎಲ್ಓಸಿಯಲ್ಲೀಗ ಸಂಪೂರ್ಣ ನೀರವ ಮೌನ ನೆಲೆಸಿದೆ. ಎಲ್ಲಿಂದಲೂ, ಯಾವುದೇ ಸ್ಥಳದಿಂದಲೂ ಅಹಿತಕರ ಘಟನೆ ನಡೆದ ವರದಿಗಳಿಲ್ಲ ಎಂದವರು ಹೇಳಿದರು.
ಭಾರತೀಯ ವಾಯು ಪಡೆ ವೈಮಾನಿಕ ದಾಳಿ ನಡೆಸುವ ಸ್ವಲ್ಪ ಮೊದಲು ಪಾಕ್ ಸೇನೆ ತನ್ನ ಎಂದಿನ ಚಾಳಿಯಂತೆ ಸಂಕ್ಷಿಪ್ತವಾಗಿ ಕದನ ವಿರಾಮ ಉಲ್ಲಂಘನೆಗೈದು ಗುಂಡಿನ ದಾಳಿ ನಡೆಸಿತ್ತು. ಅದೀಗ ಸಂಪೂರ್ಣ ನಿಂತುಹೋಗಿದೆ ಎಂದವರು ಹೇಳಿದರು.
‘ಜಮ್ಮುವಿನ ಸಾಂಬಾ ಮತ್ತು ಕಠುವಾ ಜಿಲ್ಲೆಗೆ ತಾಗಿಕೊಂಡಿರುವ ಸುಮಾರು 190 ಕಿ.ಮೀ. ಉದ್ದದ ಅಂತಾರಾಷ್ಟ್ರೀಯ ಗಡಿಯ ಉದ್ದಕ್ಕೂ ಈಗ ಶಾಂತಿ, ನೀರವತೆ ನೆಲೆಗೊಂಡಿದೆ; ಪಾಕಿಸ್ಥಾನದ ಕಡೆಯಿಂದ ಕದನ ವಿರಾಮ ಉಲ್ಲಂಘನೆಯಾದ ವರದಿಗಳಿಲ್ಲ’ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಜಮ್ಮು ಜಿಲ್ಲೆಯ ಕಾನಾಚಕ್ ವಲಯದಲ್ಲಿ ಪಾಕ್ ಕಡೆಯಿಂದ ಆಗೀಗ ಎಂಬಂತೆ ಗುಂಡಿನ ದಾಳಿ ನಡೆದಿತ್ತು ಎಂದವರು ಹೇಳಿದರು.
ಪಾಕಿಸ್ಥಾನದ ಖೈಬರ್ ಫಖ್ತೂನ್ಖ್ವಾ ಪ್ರಾಂತ್ಯದ ಮನ್ಶೇರಾ ಜಿಲ್ಲೆಯ ಬಾಲಕೋಟ್ ನಲ್ಲಿ ಭಾರತೀಯ ವಾಯು ಪಡೆಯ ಅನೇಕ ಫೈಟರ್ ಜೆಟ್ಗಳು ಯಶಸ್ವಿಯಾಗಿ ಜೈಶ್ ಉಗ್ರರ ಶಿಬಿರಗಳ ಮೇಲೆ ಮಾರಣಾಂತಿಕ ಬಾಂಬ್ ದಾಳಿ ನಡೆಸಿ ವ್ಯಾಪಕ ನಾಶ ನಷ್ಟ ಉಂಟುಮಾಡಿವೆ ಎಂದವರು ಹೇಳಿದರು.
ವಾಯು ದಾಳಿಯ ಬಳಿಕ ಪ್ರದಾನಿ ಮೋದಿ ಅವರ ನಿವಾಸದಲ್ಲಿ ಇಂದು ಮಂಗಳವಾರ ಬೆಳಗ್ಗೆ ಸಂಪುಟ ಭದ್ರತಾ ಸಮಿತಿಯ ಸಭೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ