ಘನ್ಸೋಲಿ ಶ್ರೀ ಮೂಕಾಂಬಿಕಾ ಸನ್ನಿಧಿ ವಾರ್ಷಿಕ ಧಾರ್ಮಿಕ ಸಭಾ ಕಾರ್ಯಕ್ರಮ
Team Udayavani, Mar 3, 2019, 3:23 PM IST
ನವಿಮುಂಬಯಿ: ನಮ್ಮ ಶರೀರ ಎಷ್ಟು ಪ್ರಾಮುಖ್ಯವೋ ಅದೇ ರೀತಿ ದೇವಾಲಯವೂ ಪ್ರಾಮುಖ್ಯವಾಗಿದೆ. ಹಿಂದು ಧರ್ಮದಲ್ಲಿ ಮಾನವನ ಶರೀರ ಎಂಬುವುದು ದೇವಾಲಯಕ್ಕೆ ಸರಿ ಸಮಾನ. ನಮ್ಮ ಹೃದಯವೇ ಗರ್ಭ ಗೃಹ, ಆತ್ಮವೆಂಬುವುದೇ ದೇವರ ಬಿಂಬವಾಗಿದೆ. ಯಾವ ದೇವಾಲಯದಲ್ಲಿ ಶಾಸ್ತಿÅàಯ ರೀತಿಯಲ್ಲಿ ಪೂಜೆ, ಪುರಸ್ಕಾರ ನಡೆಯುತ್ತದೋ ಆ ಪರಿಸರವೇ ಸಮೃದ್ಧಿಗೊಳ್ಳುತ್ತದೆ. 16 ವರ್ಷಕ್ಕೆ ಮುಂಚಿನ ಘನ್ಸೋಲಿಗೂ ಇಂದಿನ ಘನ್ಸೋಲಿಗೂ ತುಂಬಾ ವ್ಯತ್ಯಾಸವಿದೆ. ಈ ಕ್ಷೇತ್ರ ವೃದ್ಧಿಯಾದಂತೆ ಈ ಪರಿಸರವೂ ಸಮೃದ್ಧಿಗೊಂಡಿದೆ. ನಾವು ನಮ್ಮ ಸಂಪತ್ತನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಿದರೆ ಮಾತ್ರ ಫಲಪ್ರಾಪ್ತಿಯಾಗುತ್ತದೆ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ತಂತ್ರಿಗಳಾದ ವಿದ್ವಾನ್ ರಾಮಚಂದ್ರ ಬಾಯರಿ ನುಡಿದರು.
ಫೆ. 28ರಂದು ಸಂಜೆ ಘನ್ಸೋಲಿ ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ಸಂಸ್ಥೆಯ 16ನೇ ವಾರ್ಷಿಕೋತ್ಸವ ನಿಮಿತ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಈ ಕ್ಷೇತ್ರದ ಅಧ್ಯಕ್ಷರ ಘನ ನೇತೃತ್ವದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ, ಎಲ್ಲರೂ ಸಂಘಟಿತರಾಗಿ ದುಡಿಯು ತ್ತಿರುವುದರಿಂದಲೇ ಈ ಕ್ಷೇತ್ರ ದಿನದಿಂದ ದಿನಕ್ಕೆ ಪ್ರಗತಿ ಹೊಂದುತ್ತಿದೆ. ಅಧ್ಯಕ್ಷರಲ್ಲಿ ಬಂಗಾರದ ವರ್ಚಸಿದ್ದು, ಯಾವುದೇ ಚಂಚಲತೆಯನ್ನು ಹೊಂದದೆ ದೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅವರ ಆದರ್ಶ ಗುಣಗಳಿಂದಲೇ ಅವರು ಕೈಹಿಡಿದ ಕಾರ್ಯ ಯಶಸ್ವಿಯಾಗುತ್ತಿದೆ. ಅವರ ಸತತ ಪ್ರಯತ್ನದಿಂದಲೇ ನಮಗೆ ಜಾಗ ದೊರೆತಿದೆ. ಅವರ ಮುಂದಿನ ಕನಸಿನ ಯೋಜನೆಯಾದ ಸಭಾಭವನ ನಿರ್ಮಾಣ ಕಾರ್ಯ ಖಂಡಿತವಾಗಿಯೂ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶ ಯವಿಲ್ಲ. ಅದಕ್ಕೆ ದಾನಿಗಳ ಸಹಕಾರ ಅಗತ್ಯವಿದೆ ಎಂದರು.
ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅತಿಥಿಗಳಾಗಿ ದೇವಾಲಯದ ನೂತನ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಅಣ್ಣಾವರ ಶಂಕರ ಶೆಟ್ಟಿ, ನೆರೂಲ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಐರೋಲಿಯ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಕೃಷ್ಣ ವಿ. ಶೆಟ್ಟಿ, ನೆರೂಲ್ ಶ್ರೀ ಗಣಪತಿ, ದುರ್ಗಾದೇವಿ ಅಯ್ಯಪ್ಪ ಮಂದಿರದ ಉಪಾಧ್ಯಕ್ಷ ಸುರೇಶ್ ಜಿ. ಶೆಟ್ಟಿ, ನೆರೂಲ್ ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ನ ಉಪ ಕಾರ್ಯಾಧ್ಯಕ್ಷ ಪ್ರಭಾಕರ ಹೆಗ್ಡೆ, ಉದ್ಯಮಿ ಪದ್ಮಾ ಭಾಸ್ಕರ್ ಶೆಟ್ಟಿ, ದೇವಾಲಯ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರುಗಳಾದ ನಂದಿಕೂರು ಜಗದೀಶ್ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ್ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ ವಿ. ದೇವಾಡಿಗ, ಜತೆ ಕೋಶಾಧಿ ಕಾರಿ ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ, ಉಪಸಮಿತಿಯ ಕಾ ರ್ಯಾಧ್ಯಕ್ಷ ಪ್ರವೀಣ್ ಕೆ. ಶೆಟ್ಟಿ, ಮಹಿಳಾ ಮಂ ಡಳಿಯ ಕಾರ್ಯಾಧ್ಯಕ್ಷೆ ವೀಣಾ ಸಿ. ಕರ್ಕೇರ ಮೊದಲಾದರು ಉಪಸ್ಥಿತರಿದ್ದರು.
ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂದಿಕೂರು ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಸಮಿತಿಯ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಸಮಾರಂಭದಲ್ಲಿ ದೇವಾಲಯದ ಸದಸ್ಯರಾದ ಶ್ರೀಧರ ಬಿ. ಪೂಜಾರಿ ಮತ್ತು ಮಹಾಬಲ ಟಿ. ಶೆಟ್ಟಿ, ಯಕ್ಷಗಾನ ಸೇವೆ ನೀಡಿದ ಬಾಲಚಂದ್ರ ರೈ ದಂಪತಿಗಳನ್ನು ಹಾಗೂ ಯಕ್ಷಗಾನ ಕಲಾವಿದ ಶಿವಣ್ಣ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಇತ್ತೀಚೆಗೆ ಜರಗಿದ ಕ್ರೀಡಾಕೂಟದ ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ಸಮಿತಿಯ ಸದಸ್ಯ ಹರೀಶ್ ಶೆಟ್ಟಿ ಪಡುಬಿದ್ರೆ ವಿಜೇತರ ಹೆಸರನ್ನು ಓದಿದರು.
ಅತಿಥಿಯಾಗಿ ಪಾಲ್ಗೊಂಡ ಪ್ರಭಾಕರ ಹೆಗ್ಡೆ ಅವರು ಮಾತನಾಡಿ, ನಮ್ಮ ದೇವಾಲಯವು ದಿನದಿಂದ ದಿನಕ್ಕೆ ಪ್ರಗತಿ ಹೊಂದುತ್ತಿದ್ದು, ನಮ್ಮ ನೂತನ ಕಟ್ಟಡ ನಿರ್ಮಾಣಕ್ಕೆ ಎಲ್ಲರು ಒಂದಾಗಿ ಸಹಕರಿಸೋಣ. ಈ ಪುಣ್ಯ ಕಾರ್ಯವನ್ನು ಯಶಸ್ವಿಗೊಳಿಸೋಣ ಎಂದು ಶುಭಹಾರೈಸಿದರು.
ಇನ್ನೋರ್ವ ಅತಿಥಿ ಸುರೇಶ್ ಜಿ. ಶೆಟ್ಟಿ ಮಾತನಾಡಿ ಅಣ್ಣಿ ಶೆಟ್ಟಿ ಅವರ ಘನ ಅಧ್ಯಕ್ಷತೆಯಲ್ಲಿ ಈ ಕ್ಷೇತ್ರವ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದೆ. ಇಲ್ಲಿ ನಿರಂತರ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳು ನಡೆಯುತ್ತಾ ಇದೆ. ಮುಂದಿನ ಯೋಜನೆಗೆ ನಾವೆಲ್ಲರೂ ಒಂದಾಗಿ ಕೈಜೋಡಿಸೋಣ ಎಂದರು.
ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಮಾತನಾಡಿ, 5 ದಿನಗಳ ಉತ್ಸವವು ವಿಜೃಂಭಣೆಯಿಂದ ಜರಗಿದೆ. ದೇವರ ಉತ್ಸವದ ಜತೆಗೆ ನಮಗೂ ಸಂಭ್ರಮದ ಜಾತ್ರೆಯಾಗಿದೆ. ಈ ಕ್ಷೇತ್ರ ತುಂಬಾ ಹೆಸರುವಾಸಿಯಾಗಿದೆ. ಇದಕ್ಕೆ ಕಾರಣ ಸಂಸ್ಥೆಯ ಅಧ್ಯಕ್ಷರು. ಅವರು ತಮ್ಮ ಪದಾಧಿಕಾರಿಗಳ ಜತೆಗೆ ಹೊಂದಾಣಿಕೆಯಿಂದ ಇರುವುದರಿಂದಲೇ ಸಾಧ್ಯವಾಗಿದೆ. ಶಂಕರ ಶೆಟ್ಟಿ ಅವರ ಸಹಕಾರದಿಂದ ನಮ್ಮ ಭವನದ ಯೋಜನೆ ಯಶಸ್ವಿಯಾಗುವುದರಲ್ಲಿ ಸಂಶ ಯವಿಲ್ಲ ಎಂದು ಹೇಳಿದರು.
ಸುರೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ ಶೆಟ್ಟಿ ವಂದಿಸಿದರು. ಅನಂತರ ಬಾಲಚಂದ್ರ ರೈ ವರುಣ್ ಹೊಟೇಲ್ ಕಲಂಬೊಲಿ ಇವರ ಸೇವೆಯ ರೂಪದಲ್ಲಿ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾ ಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಅನ್ನಸಂತರ್ಪಣೆ ನಡೆಯಿತು.
ಕಳೆದ 35 ವರ್ಷಗಳಿಂದ ತಾಯಿ ಮೂಕಾಂಬಿಕೆಯ ಸೇವೆ ಮಾಡುವ ಭಾಗ್ಯ ನೀವು ನೀಡಿದ್ದೀರಿ. ಇಲ್ಲಿನ ವಾರ್ಷಿಕೋತ್ಸವ ಎಂದರೆ ಘನ್ಸೋಲಿ ಉತ್ಸವ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಸೇವೆ ಮಾಡುವವರು ಎಲ್ಲರೂ ಒಳ್ಳೆಯ ಜನರೇ ದೊರಕಿದ್ದಾರೆ. ಅದರ ಜತೆಗೆ ದಾನಿಗಳು ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ. ತಾಯಿ ಮೂಕಾಂಬಿಕೆ ಅನ್ನಪೂರ್ಣೇಶ್ವರಿ ರೂಪ ಆದ್ದರಿಂದ ಇಲ್ಲಿ ನಿರಂತರ ಅನ್ನಸಂತರ್ಪಣೆ ನಡೆಯುತ್ತಿದೆ. ಅದೇ ರೀತಿ ಕಲಾಪ್ರಿಯೆ. ಆದ್ದರಿಂದ ನಿರಂತರ ಯಕ್ಷಗಾನ ಸೇವೆ ನಡೆಯುತ್ತಿದೆ. ನಮ್ಮ ದೇವಾಲ ಯದ ಎರಡು ಅಂಗಸಂಸ್ಥೆ ಮುಖಾಂತರ ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ. ಉಪಸಮಿತಿಯ ಯುವ ಸದಸ್ಯರು ಒಳ್ಳೆಯ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಸಭಾ ಭವನದ ನಿರ್ಮಾಣ ಕಾರ್ಯಕ್ಕೆ ಸಹಕಾರದ ಅಗತ್ಯವಿದೆ.
– ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಅಧ್ಯಕ್ಷರು, ಶ್ರೀ ಮೂಕಾಂಬಿಕಾ ಮಂದಿರ ಘನ್ಸೋಲಿ