ಪಾಕ್ ಉಗ್ರರ ಮೇಲೆ ಮತ್ತೆ ದಾಳಿ;ಎಲ್ಲ ಆಯ್ಕೆ ಮುಕ್ತ:ಭಾರತ ದೃಢ ನಿಲುವು
Team Udayavani, Mar 5, 2019, 12:18 PM IST
ಹೊಸದಿಲ್ಲಿ : ಪಾಕ್ ಬೆಂಬಲಿತ ಉಗ್ರ ಸಮೂಹಗಳಿಂದ ಭಾರತದ ಮೇಲೆ ಇನ್ನೊಂದು ಉಗ್ರ ದಾಳಿ ನಡೆದರೆ ಅದಕ್ಕೆ ಪ್ರತೀಕಾರ ತೀರಿಸುವ ಎಲ್ಲ ಆಯ್ಕೆಗಳನ್ನು ಭಾರತ ಮುಕ್ತವಾಗಿ ಇರಿಸಿಕೊಂಡಿದೆ ಎಂಬ ದೃಢ ನಿಲುವನ್ನು ಭಾರತ ಸರಕಾರ ಇಂದು ಪುನರುಚ್ಚರಿಸಿದೆ.
ಪಾಕಿಸ್ಥಾನ ಸರಕಾರ ತನ್ನ ನೆಲದಲ್ಲಿನ ಉಗ್ರರ ಎಲ್ಲ ಮೂಲ ಸೌಕರ್ಯಗಳನ್ನು, ಶಿಬಿರಗಳನ್ನು, ಲಾಂಚ್ ಪ್ಯಾಡ್ ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ದೃಡವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಒತ್ತಡವನ್ನು ಭಾರತ ಸರಕಾರ ಮುಂದುವರಿಸಲಿದೆ ಎಂದು ಮೂಲಗಳು ಹೇಳಿವೆ.
ಭಾರತದ ವಿರುದ್ಧ ಪಾಕಿಸ್ಥಾನ ಎಫ್-16 ಫೈಟರ್ ಜೆಟ್ಗಳನ್ನು ಬಳಸಿರುವ ಸಾಕ್ಷ್ಯಗಳನ್ನು ಭಾರತ ಸರಕಾರ ಅಮೆರಿಕಕ್ಕೆ ನೀಡಿದೆ. ಅಂತೆಯೇ ಅಮೆರಿಕ ಈ ವಿಷಯವನ್ನು ಕೂಲಂಷವಾಗಿ ಪರಿಶೀಲಿಸುತ್ತಿದೆ. ತಾನು ಪಾಕಿಸ್ಥಾನಕ್ಕೆ ಎಫ್ 16 ಯುದ್ಧ ವಿಮಾನಗಳನ್ನು ನೀಡಿದುದು ಉಗ್ರರ ವಿರುದ್ಧದ ಹೋರಾಟಕ್ಕೆಯೇ ಹೊರತು ಭಾರತ ಸಹಿತ ಯಾವುದೇ ದೇಶದ ವಿರುದ್ಧ ಬಳಸಲು ಅಲ್ಲ ಎಂದು ಅಮೆರಿಕ ಈಗಾಗಲೇ ಹೇಳಿದೆ.
ಭಾರತದ ವಿರುದ್ಧ ಪಾಕಿಸ್ಥಾನದ ಬಳಸಿದ ಎಫ್-16 ಯುದ್ಧ ವಿಮಾನಗಳಲ್ಲಿ ಒಂದನ್ನು ಭಾರತದ ಧೀರ ಪೈಲಟ್ ಅಭಿನಂದನ್ ವರ್ಧಮಾನ್ ಚಲಾಯಿಸುತ್ತಿದ್ದ ಮಿಗ್ ಫೈಟರ್ ಜೆಟ್ ಹೊಡೆದುರುಳಿಸಿದ್ದು ಅದರ ಅವಶೇಷಗಳನ್ನು ಮತ್ತು ವಿದ್ಯುನ್ನಾನ ಹೆಗ್ಗುರುತನ್ನು ಭಾರತ ಅಮೆರಿಕಕ್ಕೆ ಸಾಕ್ಷ್ಯವಾಗಿ ನೀಡಿದೆ.
ಪಾಕಿಸ್ಥಾನದಲ್ಲಿ ಈಗಲೂ 16 ಸಕ್ರಿಯ ಉಗ್ರ ತರಬೇತಿ ಶಿಬಿರಗಳಿದ್ದು ಇವುಗಳಲ್ಲಿ 11 ಪಿಓಕೆಯಲ್ಲೂ ಉಳಿದ ಐದು ಮನ್ಶೇರಾ ವಲಯದಲ್ಲೂ ಇರುವುದಾಗಿ ಭಾರತೀಯ ಗುಪ್ತ ಚರ ದಳ ಇಂದು ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪಾಕ್ ಉಗ್ರ ಶಿಬಿರಗಳ ಮೇಲೆ ಮತ್ತೆ ವಾಯು ದಾಳಿ ನಡೆಸುವ ದೃಢ ಸಂಕಲ್ಪವನ್ನು ಭಾರತ ಸರಕಾರ ಇಂದು ಪುನರುಚ್ಚರಿಸಿರುವುದು ಗಮನಾರ್ಹವಾಗಿದೆ ಎಂದು ವರದಿಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್ ಭಾಗವತ್
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ