ಭಾರತ ಸೆಮಿಫೈನಲ್ ಪ್ರವೇಶ
Team Udayavani, Mar 18, 2019, 12:30 AM IST
ಬಿರಾಟನಗರ (ನೇಪಾಲ): ಭಾರತದ ವನಿತಾ ಫುಟ್ಬಾಲ್ ತಂಡ “ಸ್ಯಾಫ್ ಚಾಂಪಿಯನ್ಶಿಪ್’ ಕೂಟದ ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ 4 ಬಾರಿಯ ಹಾಲಿ ಚಾಂಪಿಯನ್ ಭಾರತ ಈ ಕೂಟದ ಇತಿಹಾಸದಲ್ಲಿ ಸತತ 21 ಪಂದ್ಯಗಳಲ್ಲಿ ಜಯ ಸಾಧಿಸಿ ಮೆರೆದಿದೆ. ರವಿವಾರ “ಶಾಹಿದ್ ರಂಗಶಾಲಾ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು 5-0 ಗೋಲುಗಳ ಅಂತರದಿಂದ ಸೋಲಿಸಿತು. ಇದರೊಂದಿಗೆ “ಬಿ’ ಗುಂಪಿನಲ್ಲಿ ಅಗ್ರಸ್ಥಾನ ಅಲಂಕರಿ ಸಿತು. ಬುಧವಾರ ನಡೆಯುವ ಸೆಮಿಫೈನಲ್ನಲ್ಲಿ ಭಾರತ “ಎ’ ಗುಂಪಿನ ರನ್ನರ್ ಅಪ್ ಬಾಂಗ್ಲಾದೇಶವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್ನಲ್ಲಿ ಶ್ರೀಲಂಕಾ ಅತಿಥೇಯ ನೇಪಾಲ ತಂಡದ ವಿರುದ್ಧ ಆಡಲಿದೆ.
4ನೇ ನಿಮಿಷದಲ್ಲೇ ಗೋಲು
ಭಾರತ ಗ್ರೇಸ್ ದಾಂಗ್ಮಿ ನೆರವಿನಿಂದ 4ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. 3 ನಿಮಿಷಗಳ ಬಳಿಕ ಸಂಜು ಗೋಲು ಹೊಡೆದು ಭಾರತಕ್ಕೆ 2-0 ಮುನ್ನಡೆ ತಂದುಕೊಟ್ಟರು. 36ನೇ ನಿಮಿಷದಲ್ಲಿ ಶ್ರೀಲಂಕಾದ ರಕ್ಷಣಾ ಪಡೆಯನ್ನು ಭೇದಿಸಿದ ಇಂದುಮತಿ ಭಾರತಕ್ಕೆ 3ನೇ ಗೋಲು ತಂದಿತ್ತರು. ಮೊದಲರ್ಧದ ಕೊನೆಯ ಕ್ಷಣದಲ್ಲಿ ಸಂಗೀತಾ 4ನೇ ಗೋಲಿನ ಕಾಣಿಕೆ ಸಲ್ಲಿದರು. ದ್ವಿತೀಯಾರ್ಧದಲ್ಲೂ ಭಾರತ ಇದೇ ಆಟ ಮುಂದುವರಿಸಿದರೂ ಗಳಿಸಲು ಸಾಧ್ಯವಾದದ್ದು ಒಂದು ಗೋಲು ಮಾತ್ರ. ಇದನ್ನು ದಾಖ ಲಿಸಿದವರು ಜಬಾಮಣಿ ತುಡು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು