ರಾಜ್ಯದ 12 ಕ್ಷೇತ್ರಗಳಲ್ಲಿ ಹಣ ಬಲ ಪ್ರದರ್ಶನ
Team Udayavani, Mar 19, 2019, 12:30 AM IST
ಹೊಸದಿಲ್ಲಿ: ಚುನಾವಣೆ ಎಂದರೆ “ಹಣಬಲ, ತೋಳ್ಬಲ’ ಎಂಬ ಪದಗಳ ಬಳಕೆ ಮಾಮೂಲು. ಇದಕ್ಕೆ ಸಾಕ್ಷಿ ಎಂಬಂತೆ ಕರ್ನಾಟಕದ 12 ಸೇರಿ ದೇಶದ 150 ಕ್ಷೇತ್ರಗಳಲ್ಲಿ ಹಣಬಲ ಜೋರಾಗಿಯೇ ಕೆಲಸ ಮಾಡಲಿದೆ ಎಂಬುದನ್ನು ಕೇಂದ್ರ ಚುನಾವಣ ಆಯೋಗ ಕಂಡುಕೊಂಡಿದೆ. ಅಂದರೆ ಇವುಗಳನ್ನು ಮತದಾರರಿಗೆ “ವೋಟಿಗಾಗಿ ಹಣದ ಆಮಿಷ ನೀಡುವ’ ಕ್ಷೇತ್ರಗಳು ಎಂದು ಪರಿಗಣಿಸಲಾಗಿದೆ.
ಹಿಂದಿನ ಚುನಾವಣೆಗಳ ಪರಿಶೀಲನೆ ನಡೆಸಿದ ಅನಂತರ ದೇಶದ 150 ಕ್ಷೇತ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ವೆಚ್ಚ ಮಾಡುವ ಕ್ಷೇತ್ರಗಳು ಎಂಬ ಪಟ್ಟ ನೀಡಲಾಗಿದೆ. ವಿಶೇಷವೆಂದರೆ, ತಮಿಳು ನಾಡಿನ ಎಲ್ಲ ಕ್ಷೇತ್ರಗಳೂ ಈ ಪಟ್ಟಿ ಯೊಳಗಿವೆ. ಆಂಧ್ರದಲ್ಲಿ ಅರ್ಧಕ್ಕಿಂತ ಹೆಚ್ಚು, ತೆಲಂ ಗಾಣ, ಬಿಹಾರ, ಕರ್ನಾಟಕ, ಗುಜರಾತ್ನ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚಿನವು ಈ ಸಾಲಿನಲ್ಲಿವೆ. ಸದ್ಯಕ್ಕೆ ದೇಶದ ಎಲ್ಲ ಕ್ಷೇತ್ರಗಳ ಪರಿಶೀಲನೆ ಮುಗಿದಿಲ್ಲ. ಹೀಗಾಗಿ ಈ ಪಟ್ಟಿ ಮತ್ತಷ್ಟು ಉದ್ದವಾಗುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಇಂಥ ಕ್ಷೇತ್ರಗಳಿಗೆ ಇದೇ ಮೊದಲ ಬಾರಿಗೆ ಪ್ರತಿ ಕ್ಷೇತ್ರಕ್ಕೆ ಇಬ್ಬರಂತೆ ವೆಚ್ಚ ವೀಕ್ಷಕರನ್ನು ಆಯೋಗ ನೇಮಿಸುತ್ತಿದೆ. ಮಾ.15ರಂದು ಹೊಸದಿಲ್ಲಿಯಲ್ಲಿ ನಡೆದ ಬಹು ತನಿಖಾ ಸಂಸ್ಥೆಗಳ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ವಿವಿಧ ರಾಜ್ಯಗಳ ಚುನಾವಣಾ ಮುಖ್ಯಾಧಿಕಾರಿಗಳ ಸಭೆಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ ದಾರರ ಓಲೈಕೆಗಾಗಿ ಹಣ ಮತ್ತು ಇತರ ವಸ್ತು ಗಳನ್ನು ವಿತರಿಸುವ ಸಾಧ್ಯವಿದೆ ಎಂಬ ಅಂಶ ವ್ಯಕ್ತವಾಗಿತ್ತು. ಅಲ್ಲಿ ಚರ್ಚೆಯಾದ ಮಾಹಿತಿ ಆಧಾರದಲ್ಲಿ ವಿವಿಧ ರಾಜ್ಯಗಳಲ್ಲಿನ ಕ್ಷೇತ್ರಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
1,200 ಕೋಟಿ ರೂ.2014ರ ಚುನಾವಣೆಯಲ್ಲಿ ಸಿಕ್ಕಿದ್ದ ಹಣ, ವಸ್ತುಗಳ ಒಟ್ಟು ಮೌಲ್ಯ
300 ಕೋಟಿ ರೂ. ನಗದು, ಉಳಿದದ್ದು ವಸ್ತು
700 ಕೋ ರೂ.ಪಂಜಾಬ್ನಲ್ಲಿ ಮುಟ್ಟುಗೋಲು ಹಾಕಲಾಗಿದ್ದ ಮಾದಕ ವಸ್ತುಗಳ ಮೌಲ್ಯ
296 ಕೋ ರೂ.2018ರ ಪಂಚರಾಜ್ಯ ಚುನಾವಣೆ ವೇಳೆ ವಶವಾಗಿದ್ದ ನಗದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pune; ಖ್ಯಾತ ಬಿಲ್ಡರ್ ಒಬ್ಬರ 17 ವರ್ಷದ ಪುತ್ರನ ಪೋರ್ಷೆ ಕಾರಿಗೆ ಇಬ್ಬರು ಬಲಿ
CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ
Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ
Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ
Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ
MUST WATCH
ಹೊಸ ಸೇರ್ಪಡೆ
Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ
Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು
Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ
Pune; ಖ್ಯಾತ ಬಿಲ್ಡರ್ ಒಬ್ಬರ 17 ವರ್ಷದ ಪುತ್ರನ ಪೋರ್ಷೆ ಕಾರಿಗೆ ಇಬ್ಬರು ಬಲಿ
Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ