ಹೆಣ ಹೊರೋನು ನಾನೇ, ಪಲ್ಲಕ್ಕಿ ಹೊರೋನೂ ನಾನೇ
discomfort, party, legislators, correct it,D.K.Shivakumar
Team Udayavani, Mar 25, 2019, 6:00 AM IST
ಬಳ್ಳಾರಿ: “ಕಾಂಗ್ರೆಸ್ನಲ್ಲಿ ಹೆಣ ಹೊರೋನು ನಾನೇ…ಪಲ್ಲಕ್ಕಿ ಹೊರೋನೂ ನಾನೇ’ ಎಂದು ಸಚಿವ ಡಿ.ಕೆ. ಶಿವಕುಮಾರ ಹೇಳಿದರು.
ಸಂಡೂರು ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ,ಪಕ್ಷದಲ್ಲಿ ಮತ್ತು ಶಾಸಕರ ಮಧ್ಯೆ ಅಸಮಾಧಾನಗಳೇನೇ ಇದ್ದರೂ ಅದನ್ನು ನಾನೇ ಸರಿಪಡಿಸಬೇಕು. ಕಾಂಗ್ರೆಸ್ನಲ್ಲಿ “ಹೆಣ ಹೋ ರೋನು ನಾನೇ ಪಲ್ಲಕ್ಕಿ ಹೋರೋನು ನಾನೇ’. ಯಾರೇ ಅಸಮಾಧಾನ ಗೊಂಡಿ ದ್ದರೂ ಅದನ್ನು ಸರಿಪಡಿಸಲು ಯತ್ನಿಸುವೆ ಎಂದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಎಲ್ಲರನ್ನೂ ಒಟ್ಟಿಗೇ ಕರೆದೊಯ್ಯುವೆ. ಜಿಲ್ಲೆಯ ಇಬ್ಬರು ಶಾಸಕರಾದ ಈ.ತುಕಾರಾಂ, ಪರಮೇಶ್ವರ ನಾಯ್ಕ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ರೊಟೇಷನ್ ಪದ್ಧತಿ ಎಂದೂ ಅವರಿಗೆ ತಿಳಿಸಲಾಗಿದೆ. ಶಾಸಕ ಭೀಮಾನಾಯ್ಕಗೆ ಕ್ಯಾಬಿನೆಟ್ ದರ್ಜೆಯ ಲಂಬಾಣಿ ಅಭಿವೃದ್ಧಿ ನಿಗಮ ನೀಡಲಾಗಿದೆ.
ಆನಂದ್ಸಿಂಗ್ ಅವರಿಗೂ ನಿಗಮ ಮಂಡಳಿ ನೀಡುವುದಾಗಿ ತಿಳಿಸಿತ್ತು. ಅವರೇ ಬೇಡ ಎಂದಿದ್ದಾರೆ. ಶಾಸಕ ನಾಗೇಂದ್ರರಿಗೂ ಈಗಾಗಲೇ ನಿಗಮ ಮಂಡಳಿ ನೀಡಬೇಕಿತ್ತು. ಪಕ್ಷದ ಮುಖಂಡರೇ ಒಂದಷ್ಟು ದಿನ ತಡೆಹಿಡಿಯುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ನೀಡಲಾಗಿಲ್ಲ ಎಂದರು. ಶಾಸಕ ನಾಗೇಂದ್ರ ಅವರನ್ನು ಇಂದು ಸಂಜೆ ನಾನೇ ಭೇಟಿ ಮಾಡಿ ಚರ್ಚಿಸುತ್ತೇನೆ. ನಾಗೇಂದ್ರ ನಮ್ಮ ಹುಡುಗ. ತಪ್ಪು ಮಾಡಿದ್ದಾರೆ ನಿಜ. ಆದರೆ, ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು.