ರಾಹುಲ್ ಸಣ್ಣ ಹುಡುಗ, ಆತನ ಮಾತಿಗೆ ಪ್ರತಿಕ್ರಿಯೆ ನೀಡಲ್ಲ: ಮಮತಾ ಬ್ಯಾನರ್ಜಿ
Team Udayavani, Mar 28, 2019, 11:34 AM IST
ಕೋಲ್ಕತ : ಪಶ್ಚಿಮ ಬಂಗಾಲದಲ್ಲಿನ ಹಿಂಸೆಗೆ ತೃಣಮೂಲ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿರುವುದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಹುಲ್ “ಒಬ್ಬ ಸಣ್ಣ ಹುಡುಗ; ಆತನ ಮಾತಿಗೆ ಪ್ರತಿಕ್ರಿಯೆ ಅಗತ್ಯವಿಲ್ಲ” ಎಂದು ಲೇವಡಿ ಮಾಡಿದ್ದಾರೆ.
ರಾಹುಲ್ ಮತ್ತು ಮಮತಾ ಬಹಳ ಹಿಂದೆ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದರಾದರೂ ಉಭಯ ನಾಯಕರ ನಡುವಿನ ಸರಸ-ವಿರಸ 2019ರ ಲೋಕಸಭಾ ಚುನಾವಣೆಯತ್ತ ಸಾಗುವಲ್ಲಿ ಕಡಿಮೆಯೇನೂ ಆಗಿಲ್ಲ.
ಈ ವರ್ಷ ಜನವರಿಯಲ್ಲಿ ಸಂಸದೆ ಮೌಸಮ್ ಬೇನಜೀರ್ ನೂರ್ ಅವರು ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದರು. ರಾಹುಲ್ ಗೆ ಇದು ತೀರ ಅಪಥ್ಯವೆನಿಸಿ ಆಕೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದ್ದರು.
ಕಳೆದ ವಾರ ಚುನಾವಣಾ ರಾಲಿಯಲ್ಲಿ ರಾಹುಲ್ ಅವರು ಉತ್ತರ ಮಾಲ್ಡಾದ ದ್ರೋಹಿ, ಮಾಜಿ ಕಾಂಗ್ರೆಸ್ ಸಂಸದೆಯನ್ನು ಜನರು ಶಿಕ್ಷಿಸಬೇಕು ಎಂದು ಕರೆ ನೀಡಿದ್ದರಲ್ಲದೆ, ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯ ಹಾಗೆ ಎಲ್ಲರ ಮೇಲೂ ದಬ್ಟಾಳಿಕೆ ನಡೆಸುವ ಒಬ್ಬ ಸರ್ವಾಧಿಕಾರಿ; ಇವರಿಬ್ಬರೂ ತಮ್ಮ ಸರಕಾರ ನಡೆಸುವ ವಿಷಯದಲ್ಲಿ ಯಾರ ಜತೆಯೂ ಸಮಾಲೋಚಿಸುವುದಿಲ್ಲ, ಸಲಹೆ ಅಭಿಪ್ರಾಯಗಳನ್ನೂ ಕೇಳುವುದಿಲ್ಲ ಎಂದು ಟೀಕಿಸಿದ್ದರು.
ನಿನ್ನೆ ಬುಧವಾರ ಮಮತಾ ಬ್ಯಾನರ್ಜಿ ಅವರು ರಾಹುಲ್ ಟೀಕೆಗೆ ಚುಟುಕಿನ ಪ್ರತಿಕ್ರಿಯೆ ನೀಡುತ್ತಾ, ಆತನೊಬ್ಬ ಸಣ್ಣ ಹುಡುಗ; ಆತ ಏನೋ ಹೇಳಿದ್ದಾನೆ; ಅದಕ್ಕೆ ನಾನು ಪ್ರತಿಕ್ರಿಯೆ ನೀಡ ಬಯಸುವುದಿಲ್ಲ’ ಎಂದು ಕಟಕಿಯಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Gayatri Siddeshwar: “ರಾಹುಲ್ ಪ್ರಧಾನಿಯಾಗಿಸುವ ಪಾಕಿಸ್ತಾನ ಷಡ್ಯಂತ್ರ ಫಲ ನೀಡಲ್ಲ’
B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್
BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ
Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು
ಬಿಲ್ಡರ್ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್