ಮತದಾನ ಹಕ್ಕಿನ ಮಹತ್ವ ತಿಳಿಸಲು ಬೈಕೇರಿದ ಜಿಲ್ಲಾಧಿಕಾರಿ
Team Udayavani, Mar 28, 2019, 2:06 PM IST
ಬದಿಯಡ್ಕ : ಮತದಾನ ಹಕ್ಕಿನ ಮಹತ್ವ ತಿಳಿಸಲು ಕಾಸರಗೋಡು ಜಿಲ್ಲಾಧಿಕಾರಿ ಬೈಕೇರಿ ಪರ್ಯಟನೆ ನಡೆಸಿದ್ದಾರೆ. ನನ್ನ ಮತದಾನ ನನ್ನ ಹಕ್ಕು ಎಂಬ ಸಂದೇಶದೊಂದಿಗೆ ಚುನಾವಣೆ ಆಯೋಗದ ಪ್ರಚಾರ ವಿಭಾಗವಾಗಿರುವ ಸ್ವೀಪ್ ವತಿಯಿಂದ ಬೋವಿಕ್ಕಾನದಲ್ಲಿ ಬುಲ್ಲೆಟ್ ಬೈಕ್ ರ್ಯಾಲಿ ನಡೆದಿದೆ.
ಇದರ ಉದ್ಘಾಟನೆ ಹೊಣೆ ಹೊತ್ತಿದ್ದ ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಬೈಕ್ ಏರಿ ಸಂಚಾರ ನಡೆಸುವ ಮೂಲಕ ತಮ್ಮ ಕರ್ತವ್ಯ ನಡೆಸಿದ್ದಾರೆ. ಸ್ವೀಪ್ ನೋಡೆಲ್ ಅಧಿಕಾರಿ ವಿ. ಮಹಮ್ಮದ್ ನೌಷಾದ್ ಮತದಾನದ ಸಂದೇಶ ನೀಡಿದರು. ಕಾಸರಗೋಡಿನಿಂದ ವಿವಿಧ ಬೈಕ್ ರೈಡರ್ಸ್ ಕ್ಲಬ್ ಪ್ರತಿನಿಧಿಗಳಾದ 15 ಮಂದಿ ಸವಾರರು ಯಾತ್ರೆಯಲ್ಲಿ ಭಾಗವಹಿಸಿದರು.
ಜಿಲ್ಲೆಯ ಮಲೆನಾಡ ಪ್ರದೇಶಗಳಲ್ಲಿ ಈ ರ್ಯಾಲಿ ನಡೆಯಿತು. ಕುತ್ತಿಕೋಲು, ಪನತ್ತಡಿ, ಮಾವುಂಗಾಲ್ ಕಾಞಂಗಾಡ್, ಮೇಲ್ಪರಂಬ, ಕಾಸರಗೋಡು ಪ್ರದೇಶಗಳಲ್ಲಿ ಮತದಾನ ಸಂದೇಶ ನೀಡಲಾಯಿತು. ಸಹಕಾರಿ ಇನ್ಸ್ಪೆಕ್ಟರ್ರಾದ ಪಿ.ಬೈಜು ರಾಜ್, ಕೆ.ಸಿ.ಸತೀಶ್ ಅವರ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು