ಗೋಲ್ಮಾಲ್ ಶೀಘ್ರದಲ್ಲೇ ತೆರೆಗೆ
Team Udayavani, Apr 4, 2019, 12:20 PM IST
ಲೋಕಸಭಾ ಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿದೆ. ಕರಾವಳಿಯಾದ್ಯಂತ ರಾಜಕೀಯದ್ದೇ ಸುದ್ದಿ. ಇಂತಹ ಅಬ್ಬರ ಎ. 18ಕ್ಕೆ ಒಂದು ಹಂತದಲ್ಲಿ ಪೂರ್ಣವಾಗುತ್ತದೆ. ಬಳಿಕ ಕೌಂಟಿಂಗ್ ಕುತೂಹಲ ಮಾತ್ರ. ಅಂದಹಾಗೆ, ಮತದಾನ ಮುಗಿದ ಬಳಿಕ ಕೋಸ್ಟಲ್ವುಡ್ನಲ್ಲಿ ಇನ್ನೊಂದು ಅಬ್ಬರ ಶುರುವಾಗಲಿದೆ. ಅದುವೇ “ಗೋಲ್ಮಾಲ್’.
ಉಡುಪಿಯ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಿದ ಸಂಗತಿಯ ಕಥಾನಕ ಕೋಸ್ಟಲ್ವುಡ್ನಲ್ಲಿ ಸಿನೆಮಾ ರೂಪ ಪಡೆದಿದ್ದು, ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ. ಅಂದಹಾಗೆ ಇದು ತುಳುವಿನ ಬಿಗ್ ಬಜೆಟ್ ಮೂವಿ ಕೂಡ ಹೌದು. ಮಂಜುನಾಥ ನಾಯಕ್ ಕಾರ್ಕಳ ಮತ್ತು ಅಕ್ಷಯ ಪ್ರಭು ಅಜೆಕಾರು ನಿರ್ಮಾಣದಲ್ಲಿ ರಮಾನಂದ ನಾಯಕ್ ನಿರ್ದೇಶನದಲ್ಲಿ ತಯಾರಾದ ಸಿನೆಮಾ. ಕನ್ನಡದ ಖ್ಯಾತ ನಟ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನುಳಿದಂತೆ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸತೀಶ್ ಬಂದಲೆ, ಸುನೀಲ್ ನೆಲ್ಲಿಗುಡ್ಡೆ, ಸುಂದರ ರೈ ಮಂದಾರ ಮುಂತಾದ ಖ್ಯಾತ ಕಲಾವಿದರು ಸಿನೆಮಾದಲ್ಲಿದ್ದಾರೆ.
“ಪಿಲಿಬೈಲ್ ಯಮುನಕ್ಕ’ ಖ್ಯಾತಿಯ ಪೃಥ್ವಿ ಅಂಬಾರ್ ಸಿನೆಮಾದಲ್ಲಿ ನಾಯನಟ ಹಾಗೂ ಶ್ರೇಯಾ ಅಂಚನ್ ನಾಯಕಿ. ಸುನಾದ್ ಗೌತಮ್ ಸಂಗೀತದ ಜತೆಗೆ ಛಾಯಾಗ್ರಹಣದಲ್ಲಿ ದುಡಿದಿದ್ದಾರೆ. ಶಂಕರ್ ನಾರಾಯಣ್ ಪೆರ್ಡೂರು ಸಂಕಲನ ಮಾಡಿದ್ದಾರೆ. ಶಿವು ಸಾಹಸ ದೃಶ್ಯ ಸಂಯೋಜಿಸಿದ್ದಾರೆ. ಕಲಾ ನಿರ್ದೇಶಕರಾಗಿ ದಿನೇಶ್ ಜೋಗಿ ದುಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ