ಮುಂಡ್ಕೂರು: ಸರಕಾರಿ ಶಾಲೆ ಬಾವಿ ಸ್ವತ್ಛಗೊಳಿಸಿದ ಶಿಕ್ಷಕರು
Team Udayavani, Apr 10, 2019, 6:30 AM IST
ಬೆಳ್ಮಣ್: ರಜೆಗೂ ಮುನ್ನ ಶಾಲೆಯ ಬಾವಿಯನ್ನು ಸ್ವತ್ಛಗೊಳಿಸುವ ಮೂಲಕ ಮುಂಡ್ಕೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮುಖ್ಯ ಶಿಕ್ಷಕಿ ಪೂರ್ಣಿಮಾ ಭಟ್ ಅವರ ಹೊಸಕಲ್ಪನೆಯಂತೆ ಈ ಕಾರ್ಯ ನಡೆದಿದ್ದು, ಶಾಲೆಗೆ ರಜೆ ಸಿಕ್ಕ ಬಳಿಕ ಬಾವಿಯ ಬಗ್ಗೆ , ಅಕ್ಷರ ದಾಸೋಹದ ಕೊಠಡಿ ಹಾಗೂ ಶಾಲೆಗಳ ಪ್ರಮುಖ ಪರಿಕರಗಳ ಬಗ್ಗೆ ಯಾರೂ ಗಮನ ಕೊಡುವುದಿಲ್ಲ. ಗಿಡಗಂಟಿಗಳು ಬೆಳೆದ ಬಾವಿಯನ್ನು ಸ್ವತ್ಛಗೊಳಿಸಿದರೆ ಶಾಲಾರಂಭದ ಸಂದರ್ಭ ಮಳೆಗೆ ಬಾವಿ ತುಂಬುತ್ತದೆ. ಅದೇ ರೀತಿ ಶಾಲೆಯ ಅಕ್ಷರ ದಾಸೋಹ ಕೊಠಡಿ, ಪರಿಕರಗಳನ್ನೂ ಒಪ್ಪ ಓರಣವಾಗಿರಿಸಿದರೆ ಶಾಲಾರಂಭದ ಸಂದರ್ಭ ಇವುಗಳ ಬಳಕೆಗೆ ಇನ್ನಷ್ಟು ಸುಲಭವಾಗುತ್ತದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.
ಮುಂಡ್ಕೂರು ಸ.ಮಾ.ಹಿ.ಪ್ರಾ. ಶಾಲೆ ಇತರ ಶಾಲೆಗಳಿಗೆ ಮಾದರಿ ಎನಿಸಿದೆ. ಇಲ್ಲಿನ ಶಿಕ್ಷಕರು, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳ ಪರಿಶ್ರಮ ಈ ಶಾಲೆಯನ್ನು ಉಳಿಸಿ ಬೆಳಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹಳೆ ವಿದ್ಯಾರ್ಥಿ ಅರುಣ್ ರಾವ್ ತಿಳಿಸಿದ್ದಾರೆ.
ನಿರ್ವಹಣೆಗೆ ಚಿಂತನೆ
ಶಾಲಾರಂಭದ ಸಂದರ್ಭ ಶಾಲೆಯ ಸ್ಥಿತಿ ಭೂತ ಬಂಗಲೆಯಂತಾಗಬಾರದೆಂದು ರಜೆಗೆ ಮುನ್ನವೇ ಶಾಲೆಯ ವಸ್ತುಗಳ ನಿರ್ವಹಣೆಯ ಬಗ್ಗೆ ಗಂಭೀರವಾಗಿ ಚಿಂತಿಸಿ ಈ ಕ್ರಮ ಕೈಗೊಂಡಿದ್ದೇವೆ. ಶಾಲೆಯ ಇತರ ಶಿಕ್ಷಕರು, ಪೋಷಕರು ಸಹಕರಿಸುತ್ತಿದ್ದಾರೆ.
-ಪೂರ್ಣಿಮಾ ಭಟ್, ಮುಖ್ಯ ಶಿಕ್ಷಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ