ರಿಲಯನ್ಸ್; ರೇಮಂಡ್ ನಿಂದ ಪರಿಸರ ಸ್ನೇಹಿ “ಇಕೋವೇರಾ” ಬಟ್ಟೆ ಬಿಡುಗಡೆ


Team Udayavani, Apr 11, 2019, 3:16 PM IST

Ecovera

ಮುಂಬಯಿ: ಫ್ಯಾಶನ್ ಹಾಗೂ ಜವಳಿ ಉತ್ಪಾದನೆ ಮತ್ತು ಮಾರಾಟದಲ್ಲಿ ಭಾರತದ ಪ್ರಮುಖ ಸಂಸ್ಥೆಯಾದ ರೇಮಂಡ್ ಗ್ರೂಪ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಅತ್ಯಾಧುನಿಕR|Elan ತಂತ್ರಜ್ಞಾನ ಬಳಸಿ ತಯಾರಿಸಲಾದ ‘ಇಕೋವೇರಾ’ ಪರಿಸರ ಸ್ನೇಹಿ ವಸ್ತ್ರಗಳ ಶ್ರೇಣಿಯನ್ನು ಅನಾವರಣಗೊಳಿಸಿದೆ.

ಇಕೋವೇರಾ ಶ್ರೇಣಿಯು ಸದ್ಯದಲ್ಲೇ 700 ನಗರಗಳಲ್ಲಿರುವ 1500 ಮಳಿಗೆಗಳ ಮೂಲಕ ಲಭ್ಯವಾಗಲಿದೆ. ಈ ಶ್ರೇಣಿಯ ವಸ್ತ್ರಗಳನ್ನು ಪ್ರಪಂಚದಲ್ಲೇ ಅತ್ಯಂತ ಪರಿಸರ ಸ್ನೇಹಿ ಫೈಬರ್ ಆದ R|Elan ಗ್ರೀನ್‌ಗೋಲ್ಡ್ ಬಳಸಿ ತಯಾರಿಸಲಾಗಿದೆ. ಗ್ರಾಹಕರ ಬಳಕೆಯ ನಂತರ ಕಸಕ್ಕೆ ಸೇರುವ ನಿರುಪಯುಕ್ತ ಪೆಟ್ ಬಾಟಲುಗಳನ್ನು ಜೈವಿಕ ಇಂಧನ ಹಾಗೂ ಇಂಧನ ದಕ್ಷ ಪ್ರಕ್ರಿಯೆಗಳ ಮೂಲಕ ಸಂಸ್ಕರಿಸಿ R|Elan ಗ್ರೀನ್‌ಗೋಲ್ಡ್ ಅನ್ನು ತಯಾರಿಸಲಾಗುತ್ತದೆ.

ರಿಲಯನ್ಸ್‌ನ R|Elan ನಿಂದ ಸಶಕ್ತವಾದ ರೇಮಂಡ್‌ನ ಇಕೋವೇರಾ, ಸರಿಸುಮಾರು 1 ಮಿಲಿಯನ್ ಪೆಟ್ ಬಾಟಲುಗಳನ್ನು ಮಣ್ಣಿಗೆ ಸೇರದಂತೆ ತಡೆಯಲಿದೆ. ಭೂಮಿಯನ್ನು ರಕ್ಷಿಸುವ ಆರ್‌ಐಎಲ್ ಹಾಗೂ ರೇಮಂಡ್ಸ್ ಬದ್ಧತೆಗೆ ಈ ಬೆಳವಣಿಗೆ ಸಾಕ್ಷ್ಯವಾಗಿದೆ.

ಸುಸ್ಥಿರ ಶ್ರೇಣಿಯ ಜಂಟಿ ಅಭಿವೃದ್ಧಿಯ ಕುರಿತು ಮಾತನಾಡಿದ ರೇಮಂಡ್ಸ್ ಲಿಮಿಟೆಡ್‌ನ ಜವಳಿ ವಿಭಾಗದ ಅಧ್ಯಕ್ಷ ಶ್ರೀ ಸುಧಾಂಶು ಪೋಖ್ರಿಯಾಲ್, “ನೈಸರ್ಗಿಕ ಹಾಗೂ ಮಾನವ ನಿರ್ಮಿತ ಫೈಬರ್‌ಗಳೆರಡನ್ನೂ ಬಳಸಿಕೊಂಡು ಹೊಸ ಬದಲಾವಣೆಗಳೊಡನೆ ಅತ್ಯುತ್ತಮ ಗುಣಮಟ್ಟದ ವಸ್ತ್ರಗಳ ತಯಾರಿಕೆಗೆ ನಮ್ಮ ಸಂಸ್ಥೆ ಹೆಸರುವಾಸಿ. ಪರಿಸರ ಸ್ನೇಹಿ, ಸುಸ್ಥಿರ ವಸ್ತ್ರಗಳನ್ನು ಸೃಷ್ಟಿಸುವ ನಮ್ಮ ಪ್ರಯತ್ನದಲ್ಲಿ ಹಲವಾರು ವೈಶಿಷ್ಟ್ಯಗಳುಳ್ಳ ವಸ್ತ್ರಗಳನ್ನು ತಯಾರಿಸಲು R|Elan ಗ್ರೀನ್‌ಗೋಲ್ಡ್ ನಿಜಕ್ಕೂ ಅತ್ಯುತ್ತಮ ಆಯ್ಕೆ. ನಮ್ಮ ಸಂಸ್ಥೆಯನ್ನು ಸುಸ್ಥಿರ ಹಾಗೂ ಪರಿಸರ ಸ್ನೇಹಿಯಾಗಿ ಬೆಳೆಸುವ ನಿಟ್ಟಿನಲ್ಲೂ R|Elan ಗ್ರೀನ್‌ಗೋಲ್ಡ್ ಒಂದು ಮಹತ್ವದ ಹೆಜ್ಜೆ.” ಎಂದು ಹೇಳಿದರು.

ಲಂಬವಾಗಿ ಹಾಗೂ ಅಡ್ಡಡ್ಡಲಾಗಿ ಸಂಯೋಜಿತವಾಗಿರುವ ಪ್ರಪಂಚದ ಅತಿದೊಡ್ಡ ವರ್‌ಸ್ಟೆಡ್ ಸೂಟಿಂಗ್ ವಸ್ತ್ರಗಳ ನಿರ್ಮಾತೃಗಳ ಪೈಕಿ ರೇಮಂಡ್‌ನದು ಪ್ರಮುಖ ಹೆಸರು. ಭಾರತದ ವರ್‌ಸ್ಟೆಡ್ ಸೂಟಿಂಗ್ ವಸ್ತ್ರಗಳ ಮಾರುಕಟ್ಟೆಯಲ್ಲಿ ಅದು ಶೇಕಡ 60ಕ್ಕಿಂತ ಅಧಿಕ ಪಾಲನ್ನು ಹೊಂದಿದೆ. ಆಧುನಿಕ ಪುರುಷನಿಗೆ ಸರಿಯಾದ ಉಡುಪುಗಳನ್ನು ಒದಗಿಸುವುದು (‘ಡ್ರೆಸಿಂಗ್ ದ ಮಾಡರ್ನ್ ಮ್ಯಾನ್ ರೈಟ್’) ಹಿಂದಿನಿಂದಲೂ ರೇಮಂಡ್‌ನ ಗುರಿಯಾಗಿದೆ.

ರಿಲಯನ್ಸ್‌ನ ವ್ಯಾಪಕ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಫೈಬರ್‌‍ಗಳನ್ನು ಕುರಿತ ಅಗಾಧ ಅನುಭವದ ಹಿನ್ನೆಲೆಯಲ್ಲಿ ರೂಪುಗೊಂಡಿರುವ R|Elan ಸಾಮಾನ್ಯಕ್ಕಿಂತ ಹೆಚ್ಚನ್ನು ಸಾಧಿಸುವ ವಿನೂತನ ವಸ್ತ್ರಗಳ ಸಂಗ್ರಹವಾಗಿದೆ. ಆರ್‌ಐಎಲ್‌ನ R|Elan ಗ್ರೀನ್‌ಗೋಲ್ಡ್ ಜಾಗತಿಕವಾಗಿ ಅತ್ಯುತ್ತಮ ಇಕೋ ಕ್ರೆಡೆನ್‌ಶಿಯಲ್‌ಗಳನ್ನು ಹೊಂದಿರುವ ಹೊಸ ತಲೆಮಾರಿನ ತಂತ್ರಜ್ಞಾನವಾಗಿದ್ದು, ಸುಸ್ಥಿರ ಫ್ಯಾಶನ್‌ಗಾಗಿ ಗ್ರಾಹಕರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅದನ್ನು ರೂಪಿಸಲಾಗಿದೆ. ಫ್ಯಾಶನ್ ಉದ್ದಿಮೆಗೆ ಅತ್ಯಂತ ಪರಿಸರ ಸ್ನೇಹಿ ಕಚ್ಚಾ ಪದಾರ್ಥಗಳಲ್ಲೊಂದಾದ ಗ್ರೀನ್‌ಗೋಲ್ಡ್, ಪ್ರಮುಖ ಬ್ರಾಂಡುಗಳಿಗೆ ಪರಿಸರದ ಕುರಿತ ತಮ್ಮ ಬದ್ಧತೆಯನ್ನು ಪೂರ್ಣಗೊಳಿಸಲು ನೆರವಾಗುತ್ತಿದೆ.

ಆರ್‌ಐಎಲ್ ಪಾಲಿಯೆಸ್ಟರ್ ಬಿಸಿನೆಸ್‌ನ ಸಿಎಂಓ ಶ್ರೀ ಗುಂಜನ್ ಶರ್ಮಾ ಮಾತನಾಡಿ, “ರೇಮಂಡ್‌ನೊಡನೆ ಜೊತೆಗೂಡಲು ನಮಗೆ ಹೆಮ್ಮೆಯೆನಿಸುತ್ತದೆ. ಪರಿಸರಕ್ಕಾಗಿ ನಮ್ಮ ಪಾಲಿನ ಕೊಡುಗೆ ನೀಡಲು ಇದು ನಮಗೊಂದು ಅವಕಾಶ ನೀಡಿದೆ. ಸುಸ್ಥಿರತೆಯ ಹೆಚ್ಚುವರಿ ಸೇರ್ಪಡೆಯೊಡನೆ ವಿನೂತನವಾದ ಫ್ಯಾಶನಬಲ್ ವಸ್ತ್ರಗಳನ್ನು ರೂಪಿಸಲು ರೇಮಂಡ್ ಸಂಸ್ಥೆಗೆ R|Elan ಗ್ರೀನ್‌ಗೋಲ್ಡ್ ನೆರವಾಗುತ್ತದೆ” ಎಂದು ಹೇಳಿದರು.

ಸರ್ಕ್ಯುಲರ್ ಇಕಾನಮಿ, ಮರುಬಳಕೆ ಹಾಗೂ ಕಸ ತಗ್ಗಿಸುವಿಕೆಯ ಪರಿಕಲ್ಪನೆಗಳನ್ನು ಅವಲಂಬಿಸಲು ಆರ್‌ಐಎಲ್‌ನ ಪೆಟ್ರೋಕೆಮಿಕಲ್ಸ್ ಬಿಸಿನೆಸ್ ಬದ್ಧವಾಗಿದೆ. ಈ ಪರಿಕಲ್ಪನೆಗಳನ್ನು ಬಳಸುವಲ್ಲಿ ಭಾರತದ ಜವಳಿ ಹಾಗೂ ಫ್ಯಾಶನ್ ಉದ್ದಿಮೆಯನ್ನು ಮುಂಚೂಣಿ ಸ್ಥಾನಕ್ಕೆ ತರುವುದು ಅದರ ಗುರಿ. ಹೀಗೆ, R|Elan ಉತ್ಪನ್ನಗಳು ಇತ್ತೀಚಿನ ಫ್ಯಾಶನ್ ಟ್ರೆಂಡ್‌ಗಳಿಗೆ ಅನುಗುಣವಾದ ಹೊಸ ತಲೆಮಾರಿನ ವಸ್ತ್ರಗಳನ್ನು ಗ್ರಾಹಕರಿಗೆ ನೀಡುವುದರ ಜೊತೆಗೆ ಅವರ ಜೀವನಶೈಲಿಯ ಅಗತ್ಯಗಳನ್ನೂ ಪೂರೈಸಲಿವೆ. ಹೊರಗೆ R|Elan ಇದ್ದರೆ, ಒಳಗೆ ವಿಶೇಷವಾದದ್ದೇನೋ ಇದೆ ಎನ್ನುವ ಖಾತರಿಯನ್ನು ಆರ್‌ಐಎಲ್‌ನ ಪ್ರಯತ್ನಗಳು ಗ್ರಾಹಕರಿಗೆ ನೀಡಲಿವೆ.

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.