ಸಚಿವ ಅನಂತಕುಮಾರ್ಗೆ ನಾಗಾಸಾಧುಗಳ ಆಶೀರ್ವಾದ
Team Udayavani, Apr 15, 2019, 3:00 AM IST
ಶಿರಸಿ: ಉತ್ತರ ಪ್ರದೇಶದ ನಾಗಾಸಾಧು ಮಹಾಂತ ರಾಮಗಿರಿ ಸ್ವಾಮೀಜಿ ಹಾಗೂ ಅವರ ಜತೆಗಿರುವ ನಾಗಾ ಸಾಧುಗಳು ಕೇಂದ್ರ ಸಚಿವ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಅವರ ಮನೆಗೆ ಭಾನುವಾರ ಭೇಟಿ ನೀಡಿದ್ದರು.
ಅನಂತಕುಮಾರ ಹೆಗಡೆ ಹಾಗೂ ಪತ್ನಿ ರೂಪಾ ಹೆಗಡೆ ಸಾಧುಗಳಿಗೆ ಫಲ ಸಮರ್ಪಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮನೆಯಲ್ಲಿದ್ದ ಸಾಧುಗಳು ಚುನಾವಣೆ ಮಂಗಳಕರವಾಗುವಂತೆ ಆಶೀರ್ವದಿಸಿದರು.