ವಿಕಲಚೇತನರೇ ಮಾಡಿದ್ರು ಮತಗಟ್ಟೆ ನಿರ್ವಹಣೆ
ಚಿತ್ರದುರ್ಗದ 197ನೇ ಮತಗಟ್ಟೆ ಜವಾಬ್ದಾರಿ ನಿಭಾಯಿಸಿ ಸೈ ಎನ್ನಿಸಿಕೊಂಡ ವಿಕಲಚೇತನ ಶಿಕ್ಷಕರು
Team Udayavani, Apr 19, 2019, 12:04 PM IST
ಚಿತ್ರದುರ್ಗ: ಜೆ.ಸಿ.ಆರ್ ಬಡಾವಣೆಯ ಮಾಡೆಲ್ ಸೈನಿಕ ಶಾಲೆಯಲ್ಲಿ ತೆರೆಯಲಾಗಿದ್ದ 197ನೇ ಮತಗಟ್ಟೆಯಲ್ಲಿ ವಿಕಲಚೇತನ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು.
ಚಿತ್ರದುರ್ಗ: ಮಾವು-ಹೂವಿನ ತೋರಣ, ಪೆಂಡಾಲ್, ಬಾಳೆ ಕಂದು, ಬಣ್ಣದ ಪೇಪರ್ ಕಟ್ಟಿರುವುದನ್ನು ನೋಡಿ ಯಾವುದೋ ಮದುವೆ ಮನೆಯ ಸಂಭ್ರಮ ಎಂದುಕೊಳ್ಳದಿರಿ. ವಿಕಲಚೇತನ ಸಿಬ್ಬಂದಿಯೇ ನಿರ್ವಹಿಸಿದ ಮತಗಟ್ಟೆಯೊಂದರಲ್ಲಿ ಕಂಡುಬಂದ ದೃಶ್ಯವಿದು.
ಚಿತ್ರದುರ್ಗ ನಗರದ ಜೆ.ಸಿ.ಆರ್ ಬಡಾವಣೆಯ ಮಾಡೆಲ್ ಸೈನಿಕ ಶಾಲೆಯಲ್ಲಿ ತೆರೆಯಲಾಗಿದ್ದ 197ನೇ ಮತಗಟ್ಟೆ ಕೇಂದ್ರದಲ್ಲಿ ಚುನಾವಣಾ ಕಾರ್ಯಕ್ಕೆ ವಿಕಲಚೇತನರನ್ನೇ ನೇಮಕ ಮಾಡಲಾಗಿತ್ತು. ಕಳೆದ 14-15 ವರ್ಷಗಳಿಂದ ಮತದಾನದ ಕೆಲಸ ನಿರ್ವಹಿಸಲು ವಿಕಲಚೇತನರಿಗೆ ಆಗುವುದಿಲ್ಲ ಎಂಬ ಕಾರಣಕ್ಕೆ ಚುನಾವಣಾ ಕಾರ್ಯಕ್ಕೆ ನೇಮಿಸುತ್ತಿರಲಿಲ್ಲ. ಆದರೆ ಈ ಬಾರಿ ವಿಕಲ ಚೇತನರಲ್ಲೂ ಚುನಾವಣಾ ಕೆಲಸ ಮಾಡುವ ಸಾಮರ್ಥಯ ಇದೆ ಎಂಬುದನ್ನು ಸಾಬೀತುಪಡಿಸಲು ಭಾರತ ಚುನಾವಣಾ ಆಯೋಗ, ಮತಗಟ್ಟೆಗೆ ವಿಕಲಚೇತನರನ್ನೇ ನೇಮಕ ಮಾಡಿತ್ತು.
ಚುನಾವಣಾ ಕಾರ್ಯದಲ್ಲಿ ಜೆ.ಎನ್. ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಆರ್. ಗೋವಿಂದಯ್ಯ, ಪಳಿಕೆಹಳ್ಳಿ
ಶಾಲೆ ಶಿಕ್ಷಕ, ಮಲ್ಲಿಕಾರ್ಜುನಪ್ಪ, ಅಳಗವಾಡಿ ಶಾಲೆ ಶಿಕ್ಷಕ ಎಸ್. ರಘುಪತಿ, ಪಿಳ್ಳೇಕರನಹಳ್ಳಿ ಶಾಲೆ ಶಿಕ್ಷಕ ಆರ್. ಹೊಸಗೌಡ ಭಾಗವಹಿಸಿದ್ದರು. ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನ್ನಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಲಕ್ನೋ, ಹೈದ್ರಾಬಾದ್ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ
ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ
ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ
ಯಳಬೇರು: ಮರವೇರಿದ ಮೊಬೈಲ್!ಮರದ ಎತ್ತರದಲ್ಲಿ ನೆಟ್ವರ್ಕ್ ಸಂಪರ್ಕ; ಅಲ್ಲಿಂದ ಹಾಟ್ಸ್ಪಾಟ್
Madikeri: ಅತ್ಯಾಚಾರಿಗೆ ಕಠಿಣ ಸಜೆ