ಕಾಂಗ್ರೆಸ್ನಲ್ಲಿ ತಲ್ಲಣ ಮೂಡಿಸಿದ ಫೋಟೋ!
ಗಾಸಿಪ್
Team Udayavani, Apr 20, 2019, 3:00 AM IST
ದಿನೇ ದಿನೆ ಕಾವು ಪಡೆಯುತ್ತಿರುವ ಲೋಕಸಭೆ ಚುನಾವಣೆ ಕಣದಲ್ಲಿ ಈಗ ಫೋಟೋ ರಾಜಕೀಯ ನಡೆದಿದೆ. ಇದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ರಾಜಕಾರಣಿಯೂ ಆಗಿರುವ ಎಸ್.ಆರ್. ಪಾಟೀಲ ಅವರು ಬಿಜೆಪಿ ನಾಯಕ ಈಶ್ವರಪ್ಪ ಸಹಿತ ಬಿಜೆಪಿಯ ಅಭ್ಯರ್ಥಿ ಗದ್ದಿಗೌಡರ ಮತ್ತು ಬಿಜೆಪಿ ಶಾಸಕರು, ಮಾಜಿ ಶಾಸಕರೊಂದಿಗೆ ಕುಳಿತ ಒಂದು ಫೋಟೋ ಎಲ್ಲೆಡೆ ಹರಿದಾಡಿತ್ತು.
ಆ ಫೋಟೋದೊಂದಿಗೆ ಕೆಲವರು ಅಡಿಬರಹ ಕೊಟ್ಟು “ಬಿಜೆಪಿಯೊಂದಿಗೆ ಶಾಮೀಲು’ ಎಂದು ಬರೆದಿದ್ದು ಕಾಂಗ್ರೆಸ್ನ ಬಹುತೇಕರಿಗೆ ತಲ್ಲಣ, ಕುತೂಹಲ ಹಾಗೂ ಅನುಮಾನ ಹುಟ್ಟಿಸಿದೆ. ಎಷ್ಟು ವೇಗವಾಗಿ ಈ ಫೋಟೋ ಹರಿದಾಡಿತೋ, ಅಷ್ಟೇ ವೇಗವಾಗಿ ಅದಕ್ಕೆ ಸ್ಪಷ್ಟನೆ ಕೊಡುವ ಕಾರ್ಯವೂ ಅದೇ ಸಾಮಾಜಿಕ ಜಾಲತಾಣದಲ್ಲಿ ನಡೆಯಿತು. ಇಡೀ ಬೆಳವಣಿಗೆಯಿಂದ ಕಂಗಾಲಾದ ಎಸ್.ಆರ್.ಪಾಟೀಲ್, ನಾನು ಯಾವಾಗ ಇಂಥ ಯಡವಟ್ಟು ಮಾಡಿಕೊಂಡೆ ಎಂದು ತಲೆ ಕೆರೆದುಕೊಂಡು “ಇದೇನು ರಗಳೆ ಬಂತಪ್ಪಾ’ ಎಂದು ಅಲವತ್ತುಕೊಳ್ಳುತ್ತಿದ್ದಾರಂತೆ.