ಬಂಗಾರಪ್ರಿಯರಿಗೆ ಅಕ್ಷಯ ತೃತೀಯಾ ಉಡುಗೊರೆ
ಮತ್ತಷ್ಟು ಬೆಲೆ ಕಡಿಮೆಯಾಗುವ ನಿರೀಕ್ಷೆ
Team Udayavani, Apr 23, 2019, 6:27 AM IST
ಮಂಗಳೂರು: ಮೂರು ತಿಂಗಳುಗಳಿಂದ ನಿರಂತರ ಏರು ಗತಿಯಲ್ಲಿದ್ದ ಚಿನ್ನದ ಬೆಲೆ ಕೆಲವು ದಿನಗಳಿಂದ ಇಳಿಮುಖವಾಗು ತ್ತಿದೆ. ಸೋಮವಾರವೂ ಡಾಲರ್ ಬೆಲೆ ಕುಸಿದಿದ್ದು, ಚಿನ್ನ ಕೊಳ್ಳುಗರಿಗೆ ಶುಭ ಸುದ್ದಿ ತಂದಿದೆ.
ಶುಭ ಸಮಾರಂಭ, ಅಕ್ಷಯ ತೃತೀಯಾದ ಸಂಭ್ರಮದಲ್ಲಿರುವ ಹೆಂಗಳೆಯರು ಕೊಂಚ ನಿರಾಳ ವಾಗಿದ್ದಾರೆ. ಜಾಗ ತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಳ ಮತ್ತು ರೂಪಾಯಿ ಸಹಿತ ವಿವಿಧ ಕರೆನ್ಸಿ ಮೌಲ್ಯ ಕುಸಿತವಾದ್ದರಿಂದ ಜನವರಿಯಲ್ಲಿ ಗ್ರಾಂ ಚಿನ್ನದ ಬೆಲೆ 3 ಸಾವಿರ ರೂ. ಗಡಿ ದಾಟಿತ್ತು. ಅನಂತರ ಇಳಿದಿರಲೇ ಇಲ್ಲ.
ಒಂದು ವಾರದಿಂದ ಇಳಿಮುಖವಾಗಿದ್ದರೂ, ವ್ಯತ್ಯಯ ಮುಂದುವರಿದಿದೆ. ಸೋಮವಾರ ಮತ್ತೆ ಸ್ವಲ್ಪ ಕುಸಿದಿದ್ದು, ಬೆಲೆ ಇನ್ನಷ್ಟು ಕಡಿಮೆಯಾಗಬಹುದು ಎಂಬುದು ಸ್ವರ್ಣ ವ್ಯಾಪಾರಿಗಳ ಅಂದಾಜು. ರೂಪಾಯಿ ಎದುರು ಡಾಲರ್ ಮೌಲ್ಯ ಕುಸಿದಿರುವುದು ಚಿನ್ನದ ಬೆಲೆ ಕಡಿಮೆಯಾಗಲು ಕಾರಣ.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಲೆ ಕುಸಿದ ಕಾರಣ ಚಿನ್ನ ಖರೀದಿಗೆ ಸಕಾಲ ಎನ್ನುತ್ತಾರೆ ವ್ಯಾಪಾರಸ್ಥರು.
ಅಕ್ಷಯ ತೃತೀಯಾ ಖರೀದಿ ಭರಾಟೆ
ಚಿನ್ನದ ಬೆಲೆ ಗ್ರಾಂಗೆ 3 ಸಾವಿರಕ್ಕೂ ಹೆಚ್ಚಿದ್ದುದರಿಂದ ಈ ವರ್ಷ ಮೇ 7ರಂದು ಅಕ್ಷಯ ತೃತೀಯಾ ಖರೀದಿ ಹೇಗೆ ಎಂಬ ಚಿಂತೆ ಅನೇಕರಲ್ಲಿತ್ತು. ಈಗ ಬೆಲೆ ಇಳಿಕೆ ಜನರಿಗೆ ಖುಷಿ ತಂದಿದೆ. ಜತೆಗೆ ಇನ್ನೆರಡು ತಿಂಗಳು ಮದುವೆ ಸೀಸನ್ವಾದ್ದರಿಂದ ಚಿನ್ನ ಕೊಳ್ಳುಗರಿಗೆ ಖುಷಿಯಾಗಿದೆ.
ಮೂರು ಸಾವಿರ ದಾಟಿದ್ದ ಬೆಲೆ
ಮಾ.28ರ ವರೆಗೆ 22 ಕ್ಯಾರೆಟ್ ಚಿನ್ನ ಗ್ರಾಂ ಒಂದಕ್ಕೆ 3 ಸಾವಿರ ರೂ. ಇದ್ದ ಬೆಲೆ ಮಾ. 29ರಂದು 40 ರೂ.ಗಳಷ್ಟು ಕಡಿಮೆಯಾಗಿ 2,960 ರೂ. ಆಗಿತ್ತು. ಮಾ. 30 ರಂದು 2,985 ರೂ.ಗೇರಿತ್ತು. ಎಪ್ರಿಲ್ನಲ್ಲಿ ಇದೇ ರೀತಿ 5-10 ರೂ.ಗಳಷ್ಟು ಏರಿಳಿಕೆ ಆಗುತ್ತಲೇ ಇತ್ತು. ಎ.9ರಂದು ಏಕಾಏಕಿ 3,000 ರೂ.ಗೆ ಜಿಗಿದಿತ್ತು. ಮರುದಿನದಿಂದ ಬೆಲೆ ಕಡಿಮೆಯಾಗಲು ಆರಂಭವಾಗಿದ್ದು, ಎ.19ರಂದು 2,940 ರೂ., ಎ.20, 21ರಂದು 2,960 ರೂ. ಎ. 22 ರಂದು 2,970 ರೂ. ಇತ್ತು.
ಡಿಸೆಂಬರ್ನಲ್ಲಿ ಗ್ರಾಂಗೆ ಸುಮಾರು 2,985 ರೂ. ವರೆಗೆ ಇದ್ದ 22 ಕ್ಯಾರೆಟ್ ಚಿನ್ನದ ಬೆಲೆ, ಜ.3ರಂದು 3,005 ರೂ. ತಲುಪಿತ್ತು.
ಜ. 10ರ ವೇಳೆಗೆ 3,020 ರೂ. ಆಗಿತ್ತು. ಆನಂತರ ನಿರಂತರವಾಗಿ ಬೆಲೆ ಏರುತ್ತಲೇ ಹೋಗಿದ್ದು, ಸಂಕ್ರಾಂತಿ ಸಂದರ್ಭದಲ್ಲಿ 3,030 ರೂ. ಮುಟ್ಟಿತ್ತು.
ಡಾಲರ್ ಮೌಲ್ಯ ಕುಸಿತವಾದ್ದ ರಿಂದ ಚಿನ್ನದ ಬೆಲೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.
– ಪ್ರಶಾಂತ್ ಶೇಟ್, ಕಾರ್ಯದರ್ಶಿ, ದ.ಕ. ಜಿಲ್ಲಾ ಸ್ವರ್ಣ ವ್ಯಾಪಾರಿಗಳ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ
ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’
D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್ ನಲ್ಲಿ 6 ಬೆಡ್ ಮೀಸಲು
May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್ ಯಾತ್ರೆ
Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ
MUST WATCH
ಹೊಸ ಸೇರ್ಪಡೆ
BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ
Encounter: ಜಮ್ಮು – ಕಾಶ್ಮೀರದಲ್ಲಿ ಎನ್ಕೌಂಟರ್… ಮೂವರು ಭಯೋತ್ಪಾದಕರು ಹತ
Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ
Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ
Rachana inder: ಮರ್ಡರ್ ಮಿಸ್ಟರಿ 4 ಎನ್ 6