ಅಂಗವೈಕಲ್ಯದಲ್ಲೂ ಸಾಧನೆ ಮೆರೆದ ನಿತೀಶ್
ಪ್ರಾಥಮಿಕ ಶಿಕ್ಷಣ ಪಡೆಯದೆ ಪಿಯುಸಿ ತೇರ್ಗಡೆ!
Team Udayavani, Apr 26, 2019, 6:30 AM IST
ತೆಕ್ಕಟ್ಟೆ: ಸಾಧಿಸುವ ಮನಸ್ಸಿದ್ದರೆ ಅಂಗವೈಕಲ್ಯ ಅಡ್ಡಿಯಾಗದು ಎನ್ನುವುದಕ್ಕೆ ತಾಜಾ ನಿದರ್ಶನ ತೆಕ್ಕಟ್ಟೆಯ ನಿತೀಶ್.
ಬಾಲ್ಯದಲ್ಲೇ ಅಂಗವೈಕಲ್ಯ ಕ್ಕೊಳಗಾದ ನಿತೀಶ್ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನೂ ಪಡೆಯದೆ ನೇರ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಶೇ. 41.44 ಪಡೆದು ತೇರ್ಗಡೆಯಾಗಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 296 ಅಂಕ ಗಳಿಸಿ ಎಲ್ಲರಿಗೂ ಮಾದರಿ ಯಾಗಿದ್ದಾನೆ.
ಬೇಳೂರು ಗೋಪಾಲ, ಸುಲೋಚನಾ ದಂಪತಿ 3ನೇ ಪುತ್ರನಾದ ನಿತೀಶ್ ಐದನೇ ವರ್ಷದಲ್ಲಿ ರಸ್ತೆ ಅಪಘಾತವೊಂದರಲ್ಲಿ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರು. ಬಳಿಕ ಗಾಲಿ ಕುರ್ಚಿಯೇ ಆಧಾರ ವಾಗಿತ್ತು. ಸದಾ ಆಶಾವಾದಿಯಾಗಿ ಈತನಿಗೆ ಮನೆಯವರು ಪೂರಕವಾಗಿ ಸ್ಪಂದಿಸಿದ್ದಾರೆ.
ಮನೆ ಪಾಠ
ತೆಕ್ಕಟ್ಟೆ ಸ. ಪ.ಪೂ. ಕಾಲೇಜಿನಲ್ಲಿ ಖಾಸಗಿ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯಲು ಹಂಬಲ ವ್ಯಕ್ತಪಡಿಸಿದಾಗ ಈತನಿಗೆ ಮಾರ್ಗದರ್ಶನ ನೀಡಲು ಮುಂದಾದವರು ನೆರೆ ಮನೆಯ ಬಿ.ಕಾಂ. ಪದವೀಧರೆ ದೀಕ್ಷಾ ದೇವಾಡಿಗ. 10 ತಿಂಗಳಿನಿಂದಲೂ ಬೆಳಗ್ಗೆ, ಸಂಜೆ ನಿರಂತರ ಶಿಕ್ಷಣ ಮಾರ್ಗದರ್ಶನ ನೀಡಿದ ಪರಿಣಾಮ ನಿತೀಶ್ ಬದುಕಿನಲ್ಲಿ ಶಿಕ್ಷಣದ ಹೊಸ ಬೆಳಕು ಮೂಡುವಂತಾಗಿದೆ. ಶಾಲೆಯ ಮೆಟ್ಟಿಲು ಹತ್ತದೆ ಪುಸ್ತಕವನ್ನೇ ಗೆಳೆಯರನ್ನಾಗಿಸಿಕೊಂಡು ಸಾಧನೆ ಬೆನ್ನೇರಿ ಹೊರಡುವಲ್ಲಿ ಸಫಲರಾಗಿದ್ದಾರೆ.
ಸ್ನೇಹಿತರ ಸಾಥ್
20 ವರ್ಷಗಳಿಂದಲೂ ಗಾಲಿ ಕುರ್ಚಿಯಲ್ಲಿಯೇ ಕುಳಿತು ಮಾಹಿತಿ ತಂತ್ರಜ್ಞಾನ, ಮೊಬೈಲ್ ಸಾಫ್ಟ್ವೇರ್ ತಂತ್ರಜ್ಞಾನ ಮತ್ತು ಮೋಟರ್ ವೈಂಡಿಂಗ್ ಇತ್ಯಾದಿ
ಹಲವು ವಿಷಯಗಳ ಬಗ್ಗೆ ಮಾಹಿತಿ ತಿಳಿಯುವ ಈತನ ಆಸಕ್ತಿಯನ್ನು ಗುರುತಿಸಿ ಸಾಥ್ ನೀಡಿದವರೇ ಪರಿಸರದ ಸ್ನೇಹಿತರು.
– ಟಿ. ಲೋಕೇಶ್ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್