ಪಕ್ಕಡ ಹಿಡಿದ ಕೈ ಕಾರ್ಮಿಕರಿಗೆ ಪ್ರೇರಣೆ

•ಪ್ರತಿನಿತ್ಯ ಸ್ಮಾರಕಕ್ಕೆ ನಮಿಸಿಯೇ ಕರ್ತವ್ಯಕ್ಕೆ ಹಾಜರಿ •ಹಾವೇರಿಯಲ್ಲೊಂದು ಅಪರೂಪದ 'ಕಾರ್ಮಿಕ ಸ್ಮಾರಕ'

Team Udayavani, May 1, 2019, 12:41 PM IST

haveri-tdy-1..

ಹಾವೇರಿ: ಇಲ್ಲಿನ ಹೆಸ್ಕಾಂ ಕಚೇರಿ ಆವರಣದಲ್ಲಿರುವ ಕಾರ್ಮಿಕ ಸ್ಮಾರಕ.

ಹಾವೇರಿ: ನಮ್ಮ ದೇಶದಲ್ಲಿ ಸ್ಮಾರಕಗಳಿಗೇನೂ ಕಡಿಮೆ ಇಲ್ಲ. ಬೀದಿ ಬೀದಿಗೊಂದು ಸ್ಮಾರಕಗಳು ಕಾಣಲು ಸಿಗುತ್ತವೆ. ಆದರೆ, ಶ್ರಮಿಕ ವರ್ಗದ ಪ್ರತೀಕವಾಗಿ ಸ್ಮಾರಕ ಇರುವುದು ಬಲು ಅಪರೂಪ. ಇಂಥ ಅಪರೂಪದ ಸುಂದರ ಕಾರ್ಮಿಕ ಸ್ಮಾರಕ ನಗರದ ಹೆಸ್ಕಾಂ ಕಚೇರಿ ಆವರಣದಲ್ಲಿದೆ.

ಈ ಸ್ಮಾರಕ ಉಳ್ಳವರಿಂದ ಹಣ ಸಂಗ್ರಹಿಸಿ ನಿರ್ಮಿಸಿದ ಸ್ಮಾರಕವಲ್ಲ. ಈ ಸ್ಮಾರಕದ ಇಂಚಿಂಚಿನಲ್ಲಿಯೂ ಕಾರ್ಮಿಕರ ಶ್ರಮ ಇದೆ; ಶ್ರಮದ ಪ್ರತಿಫಲವಾಗಿ ಪಡೆದ ಹಣದ ವಿನಿಯೋಗವಿದೆ. ಈ ಕಾರಣದಿಂದಾಗಿಯೇ ಈ ಸ್ಮಾರಕ ಕಾರ್ಮಿಕರ ಶ್ರಮ, ದುಡಿಮೆಯ ಪ್ರತೀಕವಾಗಿದೆ.

ಕಾರ್ಮಿಕರಿಗೆ ಪ್ರೇರಣೆ ನೀಡುವ ಕಾರ್ಮಿಕರ ಸ್ಮಾರಕವೊಂದು ನಿರ್ಮಿಸಬೇಕೆಂದು ಮೊದಲು ಕನಸು ಕಂಡವರು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್‌. ಜಯರಾಜ. ಈ ಕನಸು ನನಸಾಗಿಸಲು ಬಹಳ ಕಾಲ ಕಾಯಬೇಕಾದ ಪರಿಸ್ಥಿತಿ ಬರಲಿಲ್ಲ. ಏಕೆಂದರೆ ಎಲ್ಲ ಕಾರ್ಮಿಕರು ಸ್ಮಾರಕ ನಿರ್ಮಾಣಕ್ಕೆ ಭರಪೂರ ಬೆಂಬಲ ನೀಡಿದರು.

ಶ್ರಮದ ಹಣ: ಪ್ರತಿಯೊಬ್ಬ ಕಾರ್ಮಿಕರಿಂದ ಅವರ ಬೆವರಿನ ಬೆಲೆ ಸಂಗ್ರಹಿಸಲಾಯಿತು. ಕಾರ್ಮಿಕರಿಂದ ಸಂಗ್ರಹಿಸಿದ ಮೂರು ಲಕ್ಷ ರೂ.ಗಳಲ್ಲಿ ಕಾರ್ಮಿಕರ ಶ್ರಮದ ಪ್ರತೀಕವಾಗಿ (ಪಕ್ಕಡ್‌ ಹಿಡಿದ ಕೈ) ಇರುವ ಅರ್ಥಪೂರ್ಣ ಸ್ಮಾರಕ ನಿರ್ಮಾಣವಾಯಿತು. 2001 ಅಗಷ್ಟ 8ರಂದು ಕವಿಪ್ರ ನಿಗಮದ ಅಂದಿನ ಅಧ್ಯಕ್ಷ ವಿ.ಪಿ. ಬಳಿಗಾರ ಅರ್ಥಪೂರ್ಣ ಸ್ಮಾರಕವನ್ನು ನಾಡಿಗೆ ಸಮರ್ಪಿಸಿದರು. ಅಪರೂಪದ ಈ ಸ್ಮಾರಕ ಐದು ಅಡಿ ಎತ್ತರವಿದ್ದು, ಸಂಪೂರ್ಣ ಹೊಳಪಿನ ಕಪ್ಪು ಗ್ರ್ಯಾನೇಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ಕಲ್ಲಿನ ಮೇಲೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕಾರ್ಮಿಕರ ಮೌಲ್ಯ ಸಾರುವ ನುಡಿಮುತ್ತಿನ ಅಕ್ಷರಗಳನ್ನು ಅಂದವಾಗಿ ಕೆತ್ತಲಾಗಿದೆ.

ದುಡಿಮೆಯ ಪ್ರತಿಬಿಂಬ: ಕಲ್ಲಿನ ಮೇಲೆ ಕೆತ್ತಲಾಗಿರುವ ‘ಮುಗಿವ ಕೈಗಳಿಗಿಂತ ದುಡಿಯುವ ಕೈಗಳೇ ಮೇಲು’ ಎಂಬ ಉಕ್ತಿ ಹಾಗೂ ‘ನಾಡಿಗೆ ಬೆಳಕು ಕೊಟ್ಟು ತಾವು ಕತ್ತಲೆ ಸೇರಿದ ಸಾವಿರಾರು ಕಾರ್ಮಿಕರ ಅಮರ ಸ್ಮಾರಕ’ ಎಂಬ ವಾಕ್ಯ ಕಾರ್ಮಿಕರ ಮಹತ್ವ, ಅವರ ಶ್ರಮದ ಮೌಲ್ಯವನ್ನು ಎತ್ತಿಹಿಡಿದಿವೆ. ಸ್ಮಾರಕ ಕಲ್ಲಿನ ಮೇಲೆ ಪಕ್ಕಡ್‌ ಹಿಡಿದಿರುವ ಕೈ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇದು ವಿದ್ಯುತ್‌ ಇಲಾಖೆಯಲ್ಲಿ ದುಡಿಯುವ ಕಾರ್ಮಿಕರ ದುಡಿಮೆಯ ಪ್ರತಿಬಿಂಬವಾಗಿದೆ.

ನಿತ್ಯಾರಾಧನೆ: ಹಲವರು ಹಲವು ರೀತಿಯ ಸ್ಮಾರಕಗಳನ್ನು ನಿರ್ಮಿಸುತ್ತಾರೆ. ಕಟ್ಟಲೆಂದೇ ಹೋರಾಡುತ್ತಾರೆ; ಹಾರಾಡುತ್ತಾರೆ. ಆದರೆ, ಅದು ಉದ್ಘಾಟನೆಯಾದ ಮೇಲೆ ಸ್ಮಾರಕ ಅಕ್ಷರಶಃ ಅನಾಥವಾಗುತ್ತದೆ. ಮತ್ತೆ ಆ ಸ್ಮಾರಕ ನೆನಪಿಗೆ ಬರುವುದು ವರ್ಷಕ್ಕೊಮ್ಮೆ ಬರುವ ವಿಶೇಷ ದಿನದಂದು ಮಾತ್ರ. ಆದರೆ, ಹೆಸ್ಕಾಂನ ಈ ಕಾರ್ಮಿಕ ಸ್ಮಾರಕ ನಿತ್ಯ ಕಾರ್ಮಿಕರಿಗೆ ಅವರ ಶ್ರಮದ ಮಹತ್ವ ಜಾಗೃತಿಗೊಳಿಸುತ್ತಿದೆ.

ಕಚೇರಿಗೆ ಬರುವ ಪ್ರತಿಯೊಬ್ಬ ಕಾರ್ಮಿಕ ಒಮ್ಮೆ ಈ ಸ್ಮಾರಕಕ್ಕೆ ನಮಿಸಿಯೇ ತನ್ನ ಕರ್ತವ್ಯಕ್ಕೆ ಅಣಿಯಾಗುತ್ತಾನೆ. ತನ್ಮೂಲಕ ಈ ಸ್ಮಾರಕ ಕಾರ್ಮಿಕರಿಂದ ನಿತ್ಯಾರಾಧನೆಗೊಳ್ಳುತ್ತದೆ. ಅದರಲ್ಲೊಂದು ಶ್ರಮದ ಶಕ್ತಿಯನ್ನು ಕಾರ್ಮಿಕರು ಕಾಣುತ್ತಿರುವುದು ಮತ್ತೂಂದು ವಿಶೇಷ.

•’ಮುಗಿವ ಕೈಗಳಿಗಿಂತ ದುಡಿಯುವ ಕೈಗಳೇ ಮೇಲು’

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.