ಮಂಗಳೂರು : ಉದಯವಾಣಿ ಕೆರಿಯರ್ ಗೈಡೆನ್ಸ್ ಇಂದು
Team Udayavani, May 4, 2019, 6:00 AM IST
ಮಂಗಳೂರು: ಉದಯವಾಣಿಯು ಡೊಂಗರಕೇರಿಯ ಕೆನರಾ ಹೈಸ್ಕೂಲ್ನ ಶ್ರೀ ಭುವನೇಂದ್ರ ಸಭಾಭವನದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಶನಿವಾರ (ಮೇ 4) ಕೆರಿಯರ್ ಗೈಡೆನ್ಸ್ ಕಾರ್ಯಕ್ರಮ ಹಮ್ಮಿಕೊಂಡಿದೆ.
ಬೆಳಗ್ಗೆ 9ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಮಂಗಳೂರು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀಜಿತಕಾಮಾನಂದಜೀ ಮಹಾರಾಜ್ ಅನುಗ್ರಹ ಸಂದೇಶ ನೀಡುವರು. ಸಂಪನ್ಮೂಲ ವ್ಯಕ್ತಿಗಳಾದ ಸಂತ ಅಲೋಸಿಯಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ನೋರ್ಬರ್ಟ್ ಲೋಬೋ, ಮಾಹೆ ವಿವಿ ಯ ಅತಿಥಿ ಉಪನ್ಯಾಸಕ ಹಾಗೂ ಚಾರ್ಟೆಡ್ ಅಕೌಂಟೆಂಟ್ ಸುಧೀರ್ ಶೆಣೈ ಎಸ್. ಹಾಗೂ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ನ ಪ್ರಾಧ್ಯಾಪಕ ಡಾ| ಅನಂತ ಪ್ರಭು ಜಿ. ಅವರು ವಿಜ್ಞಾನ, ಕಲಾ, ವಾಣಿಜ್ಯ, ಸ್ಪರ್ಧಾತ್ಮಕ ಪರೀಕ್ಷೆ, ಡಿಪ್ಲೊಮಾ ಕೋರ್ಸ್ಗಳ ಕುರಿತು ವಿವರ ನೀಡುವರು.
ಇನ್ನೂ ಹೆಸರು ನೋಂದಾಯಿಸದವರೂ ನೇರವಾಗಿ ಸ್ಥಳದಲ್ಲಿಯೇ ಹೆಸರು ನೋಂದಾಯಿಸಿ ಪಾಲ್ಗೊಳ್ಳಬಹುದು. ಸುವರ್ಣ ಸಂಭ್ರಮದಲ್ಲಿರುವ ಉದಯವಾಣಿ ಪತ್ರಿಕೆಯು ವಿವಿಧ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಸರಣಿಯ ಕಾರ್ಯಕ್ರಮವಿದಾಗಿದೆ. ಕೇವಲ ಪದವಿಗೆ ಸಂಬಂಧಿಸಿದ ವಿಷಯಗಳಲ್ಲದೇ, ಡಿಪ್ಲೊಮಾ ಕೋರ್ಸ್ಗಳ ಕುರಿತೂ ಮಾಹಿತಿ ಒದಗಿಸಲಾಗುವುದು. ಮಾಹಿತಿಗೆ 76187 74529ನ್ನು ಸಂಪರ್ಕಿಸಬಹುದು.