ಸೌದಿ ಜೈಲಿನಿಂದ 850 ಮಂದಿಯ ಬಿಡುಗಡೆಗೆ ನಾನು ಕಾರಣ
Team Udayavani, May 6, 2019, 6:00 AM IST
ಸೌದಿ ಅರೇಬಿಯಾದ ಭಾವೀ ದೊರೆ ಭಾರತಕ್ಕೆ ಭೇಟಿ ನೀಡಿದಾಗ, ರಂಜಾನ್ ಆರಂಭವಾಗುವ ಮೊದಲು ಸೌದಿಯ ಜೈಲುಗಳಲ್ಲಿರುವ 850 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ನಾನು ಅವರಲ್ಲಿ ಕೋರಿಕೊಂಡಿದ್ದೆ. ನನ್ನ ಕೋರಿಕೆಗೆ ಸ್ಪಂದಿಸಿ ಅವರು ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮಧ್ಯಪ್ರದೇಶದಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಪ್ರಧಾನಿ ತಿಳಿಸಿದ್ದಾರೆ.
ಜಗತ್ತಿನ ವಿವಿಧ ದೇಶಗಳೊಂದಿಗೆ ಭಾರತದ ಸಂಬಂಧವು ವೃದ್ಧಿಸಿದೆ. ಭಾರತವು ಈಗ ನಾಲ್ಕು ಬಗೆಯ ಪಂಥಗಳು, 4 ಬಗೆಯ ಆಡಳಿತ, ರಾಜಕೀಯ ಸಂಸ್ಕೃತಿಯನ್ನು ನೋಡಿದೆ. ಮೊದಲನೆಯದ್ದು, ನಾಮಪಂಥ (ವಂಶಾಡಳಿತ), ಎರಡನೆಯದ್ದು ವಾಮಪಂಥ, ಮೂರನೆಯದ್ದು ದಮನ ಮತ್ತು ದಮನಪಂಥ ಹಾಗೂ ನಾಲ್ಕನೆಯದ್ದು ನಾವು ತಂದಿರುವಂಥ ವಿಕಾಸಪಂಥ ಎಂದೂ ಮೋದಿ ಹೇಳಿದ್ದಾರೆ.